ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದ ಕಾರಣ ಸತ್ತವರ ಸಂಖ್ಯೆ 17ಕ್ಕೆ ಮುಟ್ಟಿದೆ. 100 ಮಂದಿ ನಾಪತ್ತೆಯಾಗಿದ್ದಾರೆ. ದೇಗುಲಗಳ ನಗರ ತಿರುಪತಿಯಲ್ಲಿ ವಿಪರೀತ ಪ್ರವಾಹದ ಕಾರಣ ಯಾತ್ರಿಗಳು ಇದ್ದಲ್ಲೇ ಸಿಲುಕಿಬಿದಿದ್ದಾರೆ.
ಮೊದಲ ಹಂತದ ಘಟ್ಟದ ರಸ್ತೆಯಲ್ಲಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ), ತಿರುಪತಿಯಲ್ಲಿ ಪದಚಾರಿ ಮಾರ್ಗ ಮತ್ತು ವಸತಿ ಗೃಹಗಳನ್ನು ಮುಚ್ಚಲಾಗಿದೆ. ತಿರುಪತಿಯ ಹೊರ ವಲಯದಲ್ಲಿ ಹರಿಯುವ ಸ್ವರ್ಣಮುಖಿ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಇದರ ಜಲಾಶಯಗಳು ತುಂಬಿದ್ದು, ನೀರು ಹೊರಬಿಡಲಾಗಿದೆ. ಪ್ರವಾಹದಲ್ಲಿ ಸಿಲುಕಿ ರಾಜ್ಯ ಸಾರಿಗೆ ಸಂಸ್ಥೆಯ ಮೂರು ಬಸ್ಗಳು ಜಖಂಗೊಂಡಿವೆ. ಪ್ರವಾಹದಿಂದ ರಸ್ತೆಗಳು ಕೊಚ್ಚಿಹೋಗಿವೆ. ರೈಲು ಮತ್ತು ವಿಮಾನ ಸಂಚಾರ ಕೂಡ ವ್ಯತ್ಯಯವಾಗಿದೆ. ಕಡಪಾ ಏರ್ಪೋಟ್ ಅನ್ನು ನ.25ರವರೆಗೆ ಮುಚ್ಚಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಪರಿಹಾರ ಕಾರ್ಯಗಳಲ್ಲಿ ತೊಡಗಿವೆ. ರಾಯಲಸೀಮೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಚಿತ್ತೂರು, ಕಡಪಾ, ಕರ್ನೂಲ್, ಅನಂತಪುರ ಜಿಲ್ಲೆಗಳಲ್ಲಿ ಮಳೆ ಪರಿಣಾಮ ತೀವ್ರವಾಗಿದೆ. ಗುರುವಾರದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಚೆಯ್ಯೆರು ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಇದರಿಂದ ಅನ್ನಮಯ್ಯ ನೀರಾವರಿ ಯೋಜನೆಯ ಏರಿ ಒಡೆದಿದೆ. ಇದರಿಂದ ಉಂಟಾದ ಪ್ರವಾಹದಲ್ಲಿ ಶುಕ್ರವಾರ ಮೂವರು ಸಾವನ್ನಪ್ಪಿದ್ದರು. 30ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದರು.
Andhra Pradesh Rain: 17 Dead, 100 Missing
ಇದನ್ನು ಓದಿ: DC-CEO meeting: ಮಳೆ ಹಾನಿ ಪರಿಶೀಲನೆಗಾಗಿ ಮುಖ್ಯಮಂತ್ರಿಗಳಿಂದ ಡಿಸಿ-ಸಿಇಒ ಸಭೆ
ಇದನ್ನು ಓದಿ: Continuous rainfall in Tirupati: ತಿರುಪತಿಯಲ್ಲಿ ನಿರಂತರ ಮಳೆ- ಮನೆಯಿಂದ ಆಚೆ ಬರದಂತೆ ಸೂಚನೆ
Discussion about this post