ಇಂಡಿಯನ್ ಪ್ರಿಮೀಯರ್ ಲೀಗ್ (IPL) ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (MUMBAI INDIANS) ತಂಡದ ಮಾಲೀಕರು, ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿದ್ದ ತಮ್ಮ ಆಟಗಾರರು-ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಒಂದು ಚಾರ್ಟರ್ಡ್ ವಿಮಾನದ ಮೂಲಕ ಅಬು ಧಾಬಿಗೆ ಕರೆಸಿಕೊಂಡ ಕೆಲವೇ ಕ್ಷಣಗಳ ನಂತರ ಟೀಮ್ ಇಂಡಿಯಾವನ್ನು ಟೀಕಿಸಲು ಒಂದು ಚಿಕ್ಕ ಅಂಶವನ್ನೂ ಬಿಡದ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕೆಲ್ ವಾನ್ ಟ್ವೀಟ್ ಮೂಲಕ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಟ್ವೀಟ್ ನಲ್ಲಿ ಅವರು, ‘ಐಪಿಎಲ್ ಹೊರತಾಗಿ ಬೇರೆ ಯಾವುದೇ ಕಾರಣಕ್ಕೆ ಇಂಡಿಯ-ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಐದನೇ ಟೆಸ್ಟ್ ರದ್ದಾಯಿತು ತಾವು ನಂಬೋದಿಲ್ಲ,’ ಅಂತ ಹೇಳಿದ್ದಾರೆ.
‘ಐಪಿಎಲ್ ತಂಡಗಳು ಬಾಡಿಗೆ ವಿಮಾನಗಳನ್ನು ಗೊತ್ತು ಮಾಡುತ್ತಿವೆ, ಯುಎಈಯಲ್ಲಿ 6 ದಿನಗಳ ಕಾಲ ಕ್ವಾರಂಟೀನ್ ಆಗಬೇಕಿದೆ. 7 ದಿನಗಳಲ್ಲಿ ಟೂರ್ನಮೆಂಟ್ ಶುರುವಾಗಲಿದೆ. ಐಪಿಎಲ್ ಹೊರತಾದ ಕಾರಣಕ್ಕೆ ಟೆಸ್ಟ್ ರದ್ದಾಯಿತು ಅಂತ ನಂಗೆ ಹೇಳಬೇಡಿ,’ ಎಂದು ವಾನ್ ಶನಿವಾರ ಟ್ವೀಟ್ ಸಹ ಮಾಡಿದ್ದಾರೆ.
ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ (TEST SERIES) ಆಡುತ್ತಿದ್ದ ಭಾರತೀಯ ತಂಡದ ಶಿಬಿರದಲ್ಲಿ ಸಪೋರ್ಟ್ ಸ್ಟಾಫ್ನ (SUPPORT STAF) ಕೆಲವರು ಕೊವಿಡ್-19 ಸೋಂಕಿಗೆ ಒಳಗಾದ ನಂತರ ಆಟಗಾರರಲ್ಲಿ ಸೋಂಕಿನ ಆತಂಕ ಆರಂಭವಾಯ್ತು. ಇದರಿಂದ ಮ್ಯಾಂಚೆಸ್ಟರ್ ಟೆಸ್ಟ್ ರದ್ದಾಯಿತು. ಪಂದ್ಯ ರದ್ದಾಗಿದ್ದು ಖಾತ್ರಿಯಾದ ಕೂಡಲೇ ಐಪಿಎಲ್ ಫ್ರಾಂಚೈಸಿಗಳು ಬಾಡಿಗೆ ವಿಮಾನಗಳ ಮೂಲಕ ತಮ್ಮ ತಮ್ಮ ಆಟಗಾರರನ್ನು ಅಬು ಧಾಬಿಗೆ ಕರೆಸಿಕೊಳ್ಳುತ್ತಿವೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಸಿ ಎಸ್ ಕೆ, (CSK), ಆರ್ ಸಿ ಬಿ (RCB), ಡಿ ಸಿ ಫ್ರಾಂಚೈಸಿಗಳು (DC FRANCHAISE) ತಮ್ಮ ಆಟಗಾರರನ್ನು ರವಿವಾರದೊಳಗೆ ಯುಎಈಗೆ ಕರೆಸಿಕೊಳ್ಳಲು ಚಾರ್ಟರ್ಡ್ ವಿಮಾನಗಳ ಏರ್ಪಾಟು ಮಾಡುತ್ತಿವೆ.
ಇಂಗ್ಲೆಂಡ್ನಲ್ಲಿರುವ ಅಟಗಾರರು ಸೆಪ್ಟೆಂಬರ್ 19 ರಂದು ಶುರುವಾಗಲಿರುವ ಐಪಿಎಲ್ ನಲ್ಲಿ ಭಾಗವಹಿಸಲು ಐದನೇ ಟೆಸ್ಟ್ ಮುಗಿದ ನಂತರ ನೇರವಾಗಿ ತಮ್ಮ ತಂಡಗಳನ್ನು ಸೇರಿಕೊಳ್ಳುವುದು ನಿಗದಿಯಾಗಿತ್ತು.
ಇದೀಗ ಟೆಸ್ಟ್ ಆರಂಭವಾಗುವ ಕೇವಲ ಒದು ದಿನ ಮೊದಲು ಟೀಮಿನ ಸಹಾಯಕ ಫಿಸಿಯೋ ಯೋಗೇಶ್ ಪರ್ಮಾರ್ ಮತ್ತು ಅದಕ್ಕಿಂತ ಮೊದಲು ಇನ್ನೂ ಕೆಲ ಸದಸ್ಯರು ಸೊಂಕಿಗೆ ಒಳಪಟ್ಟಿದ್ದರಿಂದ ವಸ್ತುಸ್ಥಿತಿ ಬದಲಾಯ್ತು.
Discussion about this post