ಚಂಡೀಗಡ: ಅಮೃತಸರದಲ್ಲಿನ ಸಿಖ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರದಲ್ಲಿ ಪೂಜೆಗೊಳ್ಳುವ ಗುರುಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಲು ಯತ್ನಿಸಿದ ಎಂಬ ಆರೋಪದ ಮೇಲೆ ಯುವಕನೊಬ್ಬನನ್ನು ಗುಂಪೊಂದು ಸಾಯಬಡಿದಿದೆ. ಪಂಜಾಬ್ನಲ್ಲಿ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಈ ಸೌಹಾರ್ದಕ್ಕೆ ಧಕ್ಕೆ ತರುವ ಈ ಘಟನೆ ನಡೆದಿದೆ.
ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬ ಶನಿವಾರದ ಸಂಜೆಯ ಪ್ರಾರ್ಥನೆ ವೇಳೆ ಪವಿತ್ರ ಗ್ರಂಥವಿದ್ದ ಗರ್ಭಗ್ರಹದ ತಡೆಕಂಬಿಯನ್ನು ದಾಟಿಗೊಂಡು ಮುನ್ನುಗ್ಗಿದ ಗುರುಗ್ರಂಥ ಸಾಹಿಬ್ ಮುಂದೆ ಇರಿಸಿದ ಖಡ್ಗವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ. ಆತನನ್ನು ಸ್ವರ್ಣ ಮಂದಿರದಿಂದ ಹೊರದಬ್ಬಿಕೊಂಡು ಬಂದ ಗುಂಪು, ಹೊಡೆದು ಸಾಯಿಸಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಗಳು ಚಿತ್ರಿತವಾಗಿದೆ.
ದರ್ಬಾರ್ ಸಾಹಿಬ್ನ ಒಳ ಆವರಣದಲ್ಲಿ
ಪವಿತ್ರ ಗ್ರಂಥಕ್ಕೆ ಅಪಮಾನ ಮಾಡುವ ಇಂಥ ಘಟನೆ ಹೇಗೆ ನಡೆಯಲು ಸಾಧ್ಯ? ಈ ಘಟನೆ ಸರ್ವಥಾ ಖಂಡನಾರ್ಹ ಎಂದು ಸ್ವರ್ಣ ಮಂದಿರದ ಆಡಳಿತ ಮಂಡಳಿ ಹೇಳಿದೆ. ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಧರ್ಮ ಗ್ರಂಥವು ಸಿಖ್ಖರಿಗೆ ಅತ್ಯಂಯ ಪೂಜಾನಾರ್ಹ ಮತ್ತು ಭಾವನಾತ್ಮಕ ಗ್ರಂಥವಾಗಿದೆ. ಅದಕ್ಕೆ ಅಪಚಾರ ಎಸಗಲು ಮುಂದಾಗಿದ್ದು ಆಘಾತಕಾರಿ ಎಂದಿದ್ದಾರೆ.
ಪವಿತ್ರ ಗ್ರಂಥವನ್ನು ಅಪಮಾನ ಮಾಡಲು ಯತ್ನಿಸಿದ ಯುವಕ 20ರಿಂದ 25 ವರ್ಷದವನಾಗಿದ್ದು, ಇವನು ಯಾರು? ಅವನು ಎಲ್ಲಿಂದ ಬಂದ? ಎಂಬ ಮಾಹಿತಿಯನ್ನು ತಿಳಿಯಲು ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಅಮೃತಸರದ ಡಿಸಿಪಿ ಪರಮಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
Man Beaten To Death After Alleged Sacrilege Attempt At Golden Temple
ಇದನ್ನು ಓದಿ: ಅಡ್ವೋಕೇಟ್ ಜನರಲ್ ಡಿಯೋಲ್ ರಾಜೀನಾಮೆ ತಿರಸ್ಕರಿಸಿದ ಪಂಜಾಬ್ ಸಿಎಂ
ಇದನ್ನೂ ಓದಿ: Air pollution: ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ
Discussion about this post