ಚಿಕ್ಕಮಗಳೂರು: ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕೆಂಬುದು 3ನೇ ತಲೆ ಮಾರಿನ ಹೋರಾಟ, ಎಲ್ಲಾ ದಾಖಲೆಗಳು ದತ್ತಾತ್ರೇಯನ ಹೆಸರಿನಲ್ಲಿದೆ ಎಂದು ಶಾಸಕ ಸಿ. ಟಿ.ರವಿ ಹೇಳಿದರು.
ಹೈಕೋಟ್ ತೀರ್ಪನ್ನು ಸ್ವಾಗತಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿರುವ ಅವರು, ಸಿದ್ಧರಾಮಯ್ಯ ಸರ್ಕಾರ ನ್ಯಾಯಕ್ಕೆ ವಿರುದ್ದವಾಗಿ ಅನ್ಯಾಯ ಮಾಡಿತ್ತು. ಸತ್ಯಕ್ಕೆ ಸುಳ್ಳಿನ ಸರಪಳಿ ಹಣಿದು ಹಿಂದೂಗಳಿಗೆ ಅನ್ಯಾಯ ಮಾಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯ ಮತ್ತೇ ಸರ್ಕಾರ ಕ್ರಮಕೈಗೊಳ್ಳಲು ಆದೇಶ ನೀಡಿದೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗುತ್ತದೆ. ನ್ಯಾಯಾಲಯ ನೀಡಿರುವ ತೀರ್ಪು ಭಕ್ತರಿಗೆ ಸಮಾಧಾನ ತಂ ದಿದೆ ಎಂದು ಹೇಳಿದ್ದಾರೆ.
Discussion about this post