ನವದೆಹಲಿ: ಮಹಾರಾಷ್ಟ್ರದಲ್ಲಿ 11 ಮತ್ತು ದೆಹಲಿಯಲ್ಲಿ ಹೊಸದಾಗಿ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಇದರಿಂದ ದೇಶದಲ್ಲಿ ಒಟ್ಟು ಓಮಿಕ್ರಾನ್ ವೈರಸ್ ಪೀಡಿತರ ಸಂಖ್ಯೆ 213ಕ್ಕೆ ಏರಿದೆ. ಈ ಮಧ್ಯೆ, ಕೊರೊನಾ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪರಿಶೀಲನಾ ಸಭೆ ನಡೆಸುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ 65, ದೆಹಲಿ 57, ತೆಲಂಗಾಣ 24, ಕರ್ನಾಟಕ 19, ರಾಜಸ್ಥಾನ 18, ಕೇರಳ 15, ಗುಜರಾತ್ 14, ಜಮ್ಮು ಮತ್ತು ಕಾಶ್ಮೀರ 3, ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಎರಡು, ಆಂಧ್ರಪ್ರದೇಶ, ಛತ್ತೀಸ್ಗಢ, ಲಡಾಖ್, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಕೇಸ್ಗಳು ಈವರೆಗೂ ಪತ್ತೆಯಾಗಿವೆ.
ಡೆಲ್ಟಾ ಪ್ರಭೇದಕ್ಕಿಂತ ಮೂರು ಪಟ್ಟು ಅಧಿಕ ವೇಗದಲ್ಲಿ ಓಮಿಕ್ರಾನ್ ರೂಪಂತರ ತಳಿ ಪ್ರಸರಿಸುತ್ತದೆ ಎಂದು ಹೇಳಿರುವ ಕೇಂದ್ರ ಸರ್ಕಾರ ಕೊರೊನಾ ವಾರ್ ರೂಂಗಳನ್ನು ಸಕ್ರಿಯಗೊಳಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಸೋಂಕು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದೆ. ಕಂಟೈನ್ಮೆಂಟ್ ಕ್ರಮಗಳು, ಕೋವಿಡ್ ಪರೀಕ್ಷೆಗಳ ಹೆಚ್ಚಳ, ಗುಂಪುಗೂಡದಂತೆ ನಿರ್ಬಂಧ ಕ್ರಮಗಳು ಅಗತ್ಯ ಎಂದು ತಿಳಿಸಿದೆ. ಈ ಕುರಿತು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಸಕರ್ಕಾರಗಳಿಗೆ ಪತ್ರ ಬರೆದಿದ್ದಾರೆ.
ಬುಧವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ 6,317 ಪ್ರಕರಣಗಳು ದೃಢಪಟ್ಟಿದ್ದು, ಮಂಗಳವಾರಕ್ಕಿಂತ ಸುಮಾರು ಒಂದು ಸಾವಿರ ಕೇಸ್ಗಳು ಹೆಚ್ಚಾಗಿವೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,47,58,481ಕ್ಕೆ ಏರಿದೆ. ಆದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 78,190ಕ್ಕೆ ಇಳಿಕೆಯಾಗಿದೆ. 575 ದಿನದಲ್ಲಿ ಅತ್ಯಂತ ಕಡಿಮೆ ಸಂಖ್ಯೆ ಆಗಿದೆ. ಕಳೆದ 24 ತಾಸಿನಲ್ಲಿ 318 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಮೃತರ ಸಂಖ್ಯೆ 4.78 ಲಕ್ಷಕ್ಕೆ ಏರಿದೆ.
213 Omicron Cases, PM’s Meet Likely Tomorrow
ಇದನ್ನು ಓದಿ: Covid case: ದೇಶದಲ್ಲಿ ಮತ್ತೆ ಏರಿಕೆಯಾಗಲಿದೆಯೇ ಕೋವಿಡ್ ಪ್ರಕರಣ? ಈ ಬಗ್ಗೆ ತಜ್ಞರು ಹೇಳಿದ್ದೇನು.?
ಇದನ್ನೂ ಓದಿ: ದೆಹಲಿಯಲ್ಲಿ ಕೋವಿಡ್ಗಿಂತ ಡೆಂಗ್ಯೂ ಪ್ರಕರಣಗಳು ಅಧಿಕ; ವಹಿಸಬೇಕಿದೆ ಎಚ್ಚರ
Discussion about this post