ನವದೆಹಲಿ: ದೇಶದ 14 ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ತುರ್ತು ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಸೋಂಕಿನ ಪ್ರಸರಣ ಮತ್ತು ಮರಣ ಸಂಖ್ಯೆ ಕಡಿಮೆ ಮಾಡಬೇಕಿದೆ ಎಂದು ಕೇಂದ್ರ ಸೂಚಿಸಿದೆ.
ಕೋವಿಡ್ ಸೋಂಕಿಗೆ ಕಡಿವಾಣ ಹಾಕಲು ದೆಹಲಿಯಲ್ಲಿ ಅನುಸರಿಸುತ್ತಿರುವ ‘ಗ್ರಾಪ್ ‘ ಮಾದರಿಯನ್ನು ಅನುಸರಿಸಲು ಸಲಹೆ ನೀಡಿದೆ.
‘ಗ್ರಾಪ್’ ಎಂದರೆ ಶ್ರೇಣಿಕೃತ ಪ್ರಕ್ರಿಯಾ ಕ್ರಿಯಾ ಯೋಜನೆ ಆಗಿದೆ. ಇದರಲ್ಲಿ ನಾಲ್ಕು ಹಂತದಲ್ಲಿ ಸೋಂಕಿನ ಪ್ರಸರಣವನ್ನು ಗುರುತಿಸಲಾಗುತ್ತದೆ.
ಬೆಂಗಳೂರು, ಗುರುಗ್ರಾಮ, ಚೆನ್ನೈ, ಕೋಲ್ಕತ, ಗುರುಗ್ರಾಮ, ಅಹಮದಾಬಾದ್ಗಳು ಪ್ರಕರಣ ಏರಿಕೆಯಾಗದ ನಗರಗಳ ಪೈಕಿ ಸೇರಿವೆ.
ಮುಂಬೈನಲ್ಲಿ 2,510 ದೈನಿಕ ಪ್ರಕರಣಗಳು ವರದಿಯಾಗಿದ್ದು, ಬುಧವಾರಕ್ಕಿಂತ ಶೇ. 82ರಷ್ಟು ಏರಿಕೆ ಆಗಿದೆ. ದೆಹಲಿಯಲ್ಲೂ ಶೇ. 86ರಷ್ಟು ಪ್ರಕರಣಗಳು ಹೆಚ್ಚಳ ಆಗಿದೆ. ದೆಹಲಿ ಸಮೀಪದ ಗುರುಗ್ರಾಮದಲ್ಲಿ ಡಿಸೆಂಬರ್ನ ಮೊದಲಾರ್ಧದಲ್ಲಿ 173ರ ಸರಸಾರಿಯಲ್ಲಿದ್ದ ದೈನಿಕ, ಡಿ. 22ರಂದು 28ರ ಅವಧಿಯಲ್ಲಿ 738 ಕೇಸ್ಗಳು ವ್ಯಕ್ತವಾಗಿವೆ. ಚೆನ್ನೈನಲ್ಲಿ ಸಾವಿರದ ಆಸುಪಾಸಿನಲ್ಲಿದ್ದ ಕೇಸ್ಗಳು 1,720ಕ್ಕೆ ಏರಿಕೆ ಕಂಡಿದೆ. ಕೋಲ್ಕತದಲ್ಲಿ 1,494ರಲ್ಲಿದ್ದ 2,636ಕ್ಕೆ ಏರಿದೆ. ಬೆಂಗಳೂರಿನಲ್ಲಿ 1,445ರಲ್ಲಿದ್ದ ಕೇಸ್ಗಳು 1,902ಕ್ಕೆ ಹೆಚ್ಚಳ ಕಂಡಿದೆ. ಹೀಗಾಗಿ ಈ ನಗರಗಳಲ್ಲಿ ರಾತ್ರಿ ಕರ್ಫ್ಯೂ ಸೇರಿ ಅನೇಕ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
Sudden Surge In Covid Cases, Take Proactive Action: Centre
ಇದನ್ನು ಓದಿ: 15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ – ಜ. 1ರಿಂದ ಕೋವಿನ್ ಆಪ್ನಲ್ಲಿ ನೋಂದಣಿ ಪ್ರಾರಂಭ –
ಇದನ್ನೂ ಓದಿ: ಕೋವಿಡ್ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು
Discussion about this post