ನವದೆಹಲಿ: ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿರುವ ಭಾರತ ಲಸಿಕಾ ಅಭಿಯಾನದಲ್ಲಿ ಮುಂದಾಗಿ ಕೊರೊನಾ ವಿರುದ್ಧ ಸಮರ ಸಾಧಿಸುತ್ತಿರುವ ಭಾರತದ ಪ್ರಯತ್ನಕ್ಕೆ ಜಾಗತಿಕ ಮಟ್ಟದಲ್ಲಿ ಯಾವ ಪ್ರತಿಕ್ರಿಯೆ ಇದೆ ಎಂದು ಆಲೋಚಿಸುವ ಸಮಯ ಬಂದಿದೆ. ಭಾರತದ ಲಸಿಕೆಗಳನ್ನು ಬ್ರಿಟನ್ ಕಾನೂನುಗಳು ಅವಮಾನಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.
ಆಸ್ಟ್ರಾಜೆನಿಕಾ ಅಕ್ಸ್ ಫರ್ಡ್ ವಿಶ್ವವಿಧ್ಯಾಲಯ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಗೆ ಬ್ರಿಟನ್ ಮಾನ್ಯತೆ ಇಲ್ಲ ಎಂಬ ಸಂಗತಿಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ಆಸ್ಟ್ರಾಜೆನಿಕಾ ಲಸಿಕೆಯನ್ನು ಬ್ರಿಟನ್ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಅನುಮೋದನೆ ನೀಡಿ ಬಳಸಲಾಗುತ್ತಿದೆ. ಆದರೆ, ಭಾರತದಲ್ಲಿ ತಯಾರಿಸಿ ನೀಡಲಾಗುವ ಕೋವಿಶೀಲ್ಡ್ ಲಸಿಕೆಯನ್ನು ಬ್ರಿಟನ್ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಭಾರತೀಯರು ಕೋವಿಶೀಲ್ಡ್ ನ ಎರಡು ಡೋಸ್ ಪಡೆದುಕೊಂಡಿದ್ದರೂ ಸಹ, ಅವರು ಲಸಿಕೆ ಪಡೆದುಕೊಂಡೇ ಇಲ್ಲ ಎಂದೇ ಪರಿಗಣಿಸುವ ವಿವಾದಾತ್ಮಕ ನಿರ್ಧಾರ ಬ್ರಿಟನ್ ತೆಗೆದುಕೊಂಡಿದೆ ಎನ್ನಲಾಗಿದೆ.
ಇತರೆ ಕೆಲವು ದೇಶಗಳ ಜನರನ್ನು ಲಸಿಕೆ ಪಡೆದುಕೊಂಡವರು ಎಂದೂ ಪರಿಗಣಿಸುವುದಿಲ್ಲ ಎಂಬುದಾಗಿ ಅದು ಹೇಳಿದೆ. ಇದು ಸಾಂಕ್ರಾಮಿಕದ ಸಂದರ್ಭದಲ್ಲಿನ ಅಂತರಾಷ್ಟ್ರೀಯ ಪ್ರಯಾಣದ ಸ್ವಾತಂತ್ರ್ಯದ ಕುರಿತು ಹೊಸ ವಿವಾದ ಸೃಷ್ಠಿ ಮಾಡಿದೆ.
ಸದರಿ ನಿಯಮಾವಳಿಯಿಂದಾಗಿ ತಮ್ಮ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಗಿರುವುದಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಈ ಹೊಸ ನಿಯಮವನ್ನು ಶುಕ್ರವಾರ ಪ್ರಕಟಣೆ ಮಾಡಿದ್ದು, ಅಕ್ಟೋಬರ್ ೪ ರಿಂದ ಜಾರಿಗೆ ಬರಲಿದೆ.
ಸಂಪೂರ್ಣ ಲಸಿಕೆ ಡೋಸ್ ಪಡೆದವರಿಗೂ ಕ್ವಾರೆಂಟೈನ್ ಗೆ ಒಳಗಾಗುವಂತೆ ಸೂಚಿಸುವುದು ಅವಮಾನ ಎಂದು ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸದರಿ ನಿಯಮಗಳಿಂದಾಗಿ ತರೂರ್ ಕೇಂಬ್ರಿಡ್ಜ್ ಒಕ್ಕೂಟ (ಜಗತ್ತಿನ ಅತಿ ಹಳೆಯದಾದ ಸಮಾಜ)ದ ಚರ್ಚೆಯಿಂದ ಹೊರಬಂದಿದ್ದಾರೆ. ತರೂರ್ ರಚಿಸಿರುವ THE BATTLE OF BELONGING, BRITAN EDITION ಬಿಡುಗಡೆ ಕಾರ್ಯಕ್ರಮದಿಂದಲೂ ಸಹ ಹೊರನಡೆದಿದ್ದಾರೆ.
ಬ್ರಿಟಿಷರು ಸಂಪೂರ್ಣ ಲಸಿಕೆ ಪಡೆದ ಭಾರತೀಯರನ್ನು ಕ್ವಾರಂಟೈನ್ ಗೆ ಕೂರಿಸುವುದು ಮನನೋಯಿಸುವುದು, ಬ್ರಿಟಿಷರು ಇದನ್ನು ಪರಾಮರ್ಶೆ ಮಾಡಬೇಕು ಎಂದು ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.
ಬ್ರಿಟನ್ ಈ ಕ್ರಮವನ್ನು ಜನಾಂಗೀಯ ನಿಂದನೆ ಎಂದು ಕಾಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪಿಸಿದ್ದಾರೆ. ಕೋವಿಶೀಲ್ಡ್ ಅನ್ನು ಮೂಲತಃ ಬ್ರಿಟನ್ ನಲ್ಲೇ ಅಭಿವೃದ್ಧಿಪಡಿಸಲಾಗಿದೆ ಮತ್ತು ಪುಣೆಯ ಸೀರಂ ಸಿನ್ಸ್ ಸ್ಟಿಟ್ಯೂಟ್ ಅವರ ದೇಶಕ್ಕೂ ಲಸಿಕೆ ಪೂರೈಸಿದೆ. ಇದು ಜನಾಂಗೀಯವಾದದ ನಡೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್, ರಷ್ಯಾ ಆಫ್ರಿಕಾ, ದಕ್ಷಿಣ ಅಮೆರಿಕಾ ಖಂಡಗಳು ಸೇರಿದಂತೆ ಭಾರತ ದೇಶಗಳ ಜನರನ್ನು ಲಸಿಕೆ ಪಡೆದವರು ಎಂದು ಪರಿಗಣಿಸಿದರೂ ಸಹ, ೧೦ದಿನಗಳ ಹೋಮ್ ಕ್ವಾರೆಂಟೈನ್ ಹಾಗೂ ಪರೀಕ್ಷೆಗಳಿಗೆ ಒಳಪಡಿಸತಕ್ಕುದ್ದು ಎಂದು ಬ್ರಿಟನ್ ಹೇಳಿದೆ.
ಈ ಹೇಳಿಕೆಯು ಭಾರತ ಮಟ್ಟಿಗೆ ಆತಂಕದ ನಿಯಮವಾಗಿದೆ. ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಎರಡೂ ವ್ಯಾಕ್ಸಿನ್ ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದು, ಕೋವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಮನ್ನಣೆ ಪಡೆದಿಲ್ಲ. ಆದರೆ ಎಲ್ಲೆಡೆ ಅಂಗೀಕೃತವಾಗಿರುವ ಕೋವಿಶೀಲ್ಡ್ ಲಸಿಕೆಯನ್ನು ಪರಿಗಣಿಸುವುದಿಲ್ಲ ಎಂದು ಬ್ರಿಟನ್ ಹೇಳಿರುವುದರಿಂದ ಅಲ್ಲಿಗೆ ತೆರಳುವವರು ಕ್ವಾರಂಟೈನ್ ಕಡ್ಡಾಯವಾಗಿ ಅನುಸರಿಸಬೇಕು ಹಾಗೂ ನಿರಂತರ ತಪಾಸಣೆಗೆ ಒಳಗಾಗುವುದು ಅನಿವಾರ್ಯವಾಗಿದೆ.
ಈ ಕ್ರಮವನ್ನು ಅನೇಕರು ಖಂಡಿಸಿದ್ದು, ಇದು ಬ್ರಿಟಿಷರ ಪುರಾತನ ಕಾಲದ ಮನಸ್ಥಿತಿ ಹಾಗೂ ಜನಾಂಗೀಯ ನಿಂದನೆಯ ಧೋರಣೆ ತೋರಿಸಿದೆ ಎಂದು ಆರೋಪಿಸಿದ್ದಾರೆ

























Discussion about this post