ಕನ್ನಡನಾಡಿ ಸುದ್ದಿ ಜಾಲ ( ನವದೆಹಲಿ): ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳನ್ನು ಭಾರತ ಬಹಳ ಜಾಗರೂಕತೆಯಿಂದ ಗಮನಿಸುತ್ತಿದೆ. ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ಇನ್ನೂ ಸಿಲುಕಿರುವ ಭಾರತದ ಪ್ರಜೆಗಳ ಭದ್ರತೆ ಹಾಗೂ ಸುರಕ್ಷಿತ ವಾಪಸಾತಿಗೆ ಸರ್ಕಾರ ಗಮನ ಹರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ತಾಲಿಬಾನ್ ನಾಯಕತ್ವದ ಕುರಿತು ಭಾರತದ ದೃಷ್ಟಿಕೋನ ಏನು ಹಾಗೂ ಅದರೊಂದಿಗೆ ಭಾರತ ಹೇಗೆ ವ್ಯವಹರಿಸಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಿನ್ನೂ ಆರಂಭದ ದಿನಗಳಷ್ಟೇ ಎಂದವರು ಹೇಳಿದರು. ತಾಲಿಬಾನ್ ಜತೆ ಭಾರತ ನೇರ ಸಂಪರ್ಕ ಇರಿಸಿಕೊಳ್ಳಲಿದೆಯೇ ಎಂಬುದಕ್ಕೆ ಉತ್ತರಿಸಲು ಇಚ್ಛಿಸಲಿಲ್ಲ.
ಈ ಸಮಯದಲ್ಲಿ ನಾವು ಕಾಬೂಲ್ನಲ್ಲಿ ಉದ್ಭವಿಸುತ್ತಿರುವ ಸನ್ನಿವೇಶವನ್ನು ವೀಕ್ಷಿಸುತ್ತಿದ್ದೇವೆ. ತಾಲಿಬಾನ್ ಮತ್ತು ಅದರ ಪ್ರತಿನಿಧಿಗಳು ಕಾಬೂಲ್ಗೆ ಆಗಮಿಸಿದ ಬಳಿಕ ನಾವು ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದು’ ಎಂದು ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
Discussion about this post