ಕಾಬೂಲ್: ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದಾರ್ ಹೊಸ ಅಫ್ಘಾನ್ ಸರ್ಕಾರದ ನಾಯಕನಾಗಿ ಮುನ್ನಡೆಸಲಿರುವುದಾಗಿ ಘೋಷಿಸಲಾಗಿದೆ. ಇಸ್ಲಾಮಿಕ್ ಸಂಘಟನೆಗಳ ಮೂಲಗಳು ಶುಕ್ರವಾರ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ.
ತಾಲಿಬಾನ್ ರಾಜಕೀಯ ಕಛೇರಿಯನ್ನು ನಡೆಸುತ್ತಿರುವ ಬರಾದಾರ್ ನು ಮುಲ್ಲಾ ಮೊಹಮ್ಮದ್ ಯಕೂಬ್, (ತಾಲಿಬಾನ್ ನ ಸಹ ಸಂಸ್ಥಾಪಕ ಮುಲ್ಲಾ ಒಮರ್ ನ ಮಗ) ಈ ಸಂಬಂಧ ಜೊತೆಯಾಗಲಿದ್ದಾರೆ ಮತ್ತು ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ ಜಾಯ್ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿ ಇರುವುದಾಗಿ ಮಾಧ್ಯಮ ಮೂಲಗಳಿಗೆ ವರದಿಯಾಗಿದೆ.
ಕಾಬೂಲ್ ನಲ್ಲಿ ಹೊಸ ಸರ್ಕಾರವನ್ನು ಘೋಷಿಸಲು ಎಲ್ಲಾ ಮುಖ್ಯ ತಾಲಿಬಾನ್ ನಾಯಕರು ಜಮಾಯಿಸಿದ್ದಾರೆ ಎಂದು ರಾಯಟರ್ಸ್ ನಲ್ಲಿ ವರದಿಯಾಗಿದೆ. ಹೈಬಟುಲ್ಲಾ ಅಖುನ್ಜಾಡಾ, ತಾಲಿಬಾನಿನ ಧಾರ್ಮಿಕ ಸುಪ್ರೀಂ ನಾಯಕ, ಆಲಿನ ಧಾರ್ಮಿಕ ವಿಷಯಗಳಲ್ಲಿ ಕೇಂದ್ರೀಕರಿಸಲಿದ್ದಾರೆ ಮತ್ತು ಇಸ್ಲಾಂ ಫ್ರೇಮ್ ವರ್ಕ್ ಒಳಗೆ ನಿಯಮ ರೂಪಿಸಲಿದ್ದಾರೆ ಎಂದು ತಾಲಿಬಾನಿನ ಇನ್ನೊಂದು ಮೂಲ ಹೇಳಿಕೆ ನೀಡಿದೆ.
ಆಗಸ್ಟ್ ೧೫ರಂದು ತಾಲಿಬಾನಿಗಳು ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದವು. ನಂತರ ಅಫ್ಘಾನ್ ದೇಶದೆಲ್ಲೆಡೆ ತಮ್ಮ ಬಲಪ್ರಯೋಗ ನಡೆಸಿದ್ದವು. ರಾಜದಾನಿಯ ಉತ್ತರ ಭಾಗದಲ್ಲಿರುವ ಪಂಜ್ ಶೀರ್ ಕಣಿವೆಯಲ್ಲಿ ಅತ್ಯಧಿಕ ಪ್ರತಿರೋಧವನ್ನು ಒಡ್ಡಲಾಗಿತ್ತು.
ಅಹಮದ್ ಮಸ್ಸೌದ್ (ಮುಜಾಹಿದ್ದೀನ್ ಕಮಾಂಡರ್ ಅಹಮದ್ ಷಾ ಮಸ್ಸೌದ್ ನ ಮಗ) ನಾಯಕತ್ವದಲ್ಲಿ ಕಣಿವೆಯಲ್ಲಿ ಸಾವಿರಾರು ಹೋರಾಟಗಳು ನಡೆಯುತ್ತಲೇ ಇದ್ದವು. ಒಪ್ಪಂದದ ಮಾತುಕತೆಗಳು ಮುರಿದು ಬಿದ್ದಿದ್ದವು. ಪ್ರತಿಯೊಂದು ಕಡೆಯು ಮತ್ತೊಂದು ಕಡೆಯವರನ್ನು ನಿಂದಿಸುತ್ತಾ ಇದು ಸಾಗಿತ್ತು.
Discussion about this post