ನವದೆಹಲಿ: ಕೇಂದ್ರ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್.ಡಿ.ಆರ್.ಎಫ್) ಅಡಿಯಲ್ಲಿ 2021ರ ಸಾಲಿನಲ್ಲಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದ ಬಾಧಿತವಾದ ಆರು ರಾಜ್ಯಗಳಿಗೆ ಹೆಚ್ಚುವರಿಯಾಗಿ ಒಟ್ಟಾರೆ 3,063.21 ಕೋಟಿ ರೂಪಾಯಿ ನೆರವನ್ನು ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ (ಎಚ್.ಎಲ್.ಸಿ.) ಶುಕ್ರವಾರ ಅನುಮೋದಿಸಿದೆ.
2021ರಲ್ಲಿ ಕಾಣಿಸಿಕೊಂಡ ‘ತೌಕ್ತೆ’ ಚಂಡಮಾರುತ ದಿಂದ ಹಾನಿಯಾದ ಗುಜರಾತ್ಗೆ 1,133.35 ಕೋಟಿ ರೂಪಾಯಿ, ‘ಯಾಸ್’ ಚಂಡಮಾರುತದಿಂದ ನಲುಗಿದ ಪಶ್ಚಿಮ ಬಂಗಾಳಕ್ಕೆ 586.59 ಕೋಟಿ ರೂಪಾಯಿ, ಮುಂಗಾರು ಮಳೆಗಾಲದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಯಾದ ಅಸ್ಸಾಂಗೆ 51.53 ಕೋಟಿ ರೂಪಾಯಿ ಹಾಗೂ ಉತ್ತರಾಖಂಡಕ್ಕೆ 187.18 ಕೋಟಿ ರೂಪಾಯಿ ಹೆಚ್ಚುವರಿ ನೆರವು ನೀಡಲಾಗಿದೆ. ಇದೇ ಶೀರ್ಷಿಕೆಯಡಿಯಲ್ಲಿ ಕರ್ನಾಟಕ, ಮಧ್ಯಪ್ರದೇಶಕ್ಕೂ ಹೆಚ್ಚುವರಿ ನೆರವು ದೊರಕಿದೆ. ಆದರೆ, ಮೊತ್ತ ಎಷ್ಟು ಎಂದು ತಿಳಿದುಬಂದಿಲ್ಲ.
2021-22ರ ಆರ್ಥಿಕ ವರ್ಷದಲ್ಲಿ 28 ರಾಜ್ಯಗಳಿಗೆ ಎಸ್.ಡಿ.ಆರ್.ಎಫ್. ಅಡಿಯಲ್ಲಿ 17,747.20 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ಎನ್.ಡಿ.ಆರ್.ಎಫ್.ನಿಂದ 7 ರಾಜ್ಯಗಳಿಗೆ 3,543.54 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ‘ತೌಕ್ತೆ’ ಮತ್ತು ‘ಯಾಸ್’ ಚಂಡಮಾರುತದ ತರುವಾಯ ನಷ್ಟದ ಅಂದಾಜಿಗೂ ಮುನ್ನಎನ್.ಡಿ.ಆರ್.ಎಫ್. ನಿಂದ ಗುಜರತ್ಗೆ 1,000 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳಕ್ಕೆ 300 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿತ್ತು.
Centre approves additional assistance to 6 states under NDRF
ಇದನ್ನು ಓದಿ: 2.5 lakh crore: ರಾಜ್ಯದಲ್ಲಿ ಪ್ರವಾಹ, ಅತಿವೃಷ್ಠಿಯಿಂದಾಗಿ 2.5 ಲಕ್ಷ ಕೋಟಿ ರೂ. ನಷ್ಟ
ಇದನ್ನೂ ಓದಿ: Climate: ಹವಾಮಾನ ಬದಲಾವಣೆ: 11 ತೀವ್ರ ಬಾಧಿತ ದೇಶಗಳ ಪಟ್ಟಿಯಲ್ಲಿ ಭಾರತ
Discussion about this post