ಕಂದಹಾರ್: ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಬೆಂಬಲ ನೀಡಬೇಕಾಗಿ ಕಂದಾಹಾರ್ ನಲ್ಲಿ ತಾಲಿಬಾನಿ ನಾಯಕರುಗಳನ್ನು ಕೇಳಿರುವುದಾಗಿ ಇಂಡಿಯಾ ಟುಡೇಯಲ್ಲಿ ವರದಿಯಾಗಿದೆ. ಪಾಕಿಸ್ತಾನದಲ್ಲಿನ ಕುಖ್ಯಾತ ಭಯೋತ್ಪಾದಕ, ಉಗ್ರಗಾಮಿ ಮಸೂದ್ ಅಜರ್ ನನ್ನು ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ನಾಯಕ ಎಂದು ಗುರುತಿಸಲಾಗಿದೆ.
ಈತ ಮುಂಬೈ ೨೬/೧೧ ಸೇರಿದಂತೆ ಹಲವಾರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದು ಆರೋಪಿಯಾಗಿದ್ದಾನೆ. ಅಫ್ಘಾನಿನಲ್ಲಿ ನಡೆಯುತ್ತಿರುವ ತಾಲಿಬಾನಿಗಳ ಆಡಳಿತದ ರೂವಾರಿ ಎಂದೇ ಬಿಂಭಿತವಾಗಿರುವ ಅಬ್ದುಲ್ ಘನಿ ಬಾರದಾರ್ ಸೇರಿದಂತೆ ಇತರೆ ಪ್ರಮುಖರನ್ನು ಅಜರ್ ಭೇಟಿ ಮಾಡಿದ್ದಾನೆ ಎನ್ನಲಾಗಿದೆ.
ತಾಲಿಬಾನಿಗಳು ನಡೆಸುತ್ತಿರುವ ನರಕಸದೃಶ ಕೆಲಸಗಳನ್ನು ಸೇರಿದಂತೆ ಕಾಬೂಲ್ ವಶಪಡಿಸಿಕೊಂಡ ಕ್ರಮವನ್ನು ಶ್ಲಾಘಿಸಿ ಅಜರ್ ತಾಲಿಬಾನಿಗಳ ಜೊತೆಗೆ ಅಭಿನಂದನೆ ಸಲ್ಲಿಸಿದ್ದ ಎಂದು ಸಹ ಹೇಳಲಾಗಿದೆ.
ಪಾಕಿ ಉಗ್ರಗಾಮಿಗಳು ಕಠ್ಮಂಡುವಿನಿಂದ ಲಖನೌಗೆ ತೆರಳುತ್ತಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಿಸಿ ಕಂದಾಹಾರ್ ನಲ್ಲಿರಿಸಿ ಪ್ರಯಾಣಿಕರನ್ನು ಒತ್ತೆಯಾಳು ಮಾಡಿಕೊಂಡು ಮಸೂದ್ ಅಜರ್ ಬಿಡುಗಡೆಗೆ ಒತ್ತಾಯಿಸಿದ್ದರು. ತಾಲಿಬಾನಿಗಳು ಭಯೋತ್ಪಾದನೆಯ ಉದ್ದೇಶ ಸಾಧಿಸಿದ್ದು, ಅಜರ್ ಬಿಡುಗಡೆಯ ನಂತರ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿದ್ದವು ಎಂದು ಸಹ ಹೇಳಲಾಗುತ್ತಿದೆ.
ಪಿಟಿಐ ವರದಿಯಲ್ಲಿ ಪಾಕಿಸ್ತಾನದ ಆಡಳಿತದಲ್ಲಿರುವ ತೆಹ್ರೀಕ್-ಎ-ಇನ್ ಸಾಫ್ ನಾಯಕಿ ನೀಲೀಮ್ ಇರ್ಷಾದ್ ಶೇಖ್, ತಾಲಿಬಾನಿಗಳು ನಮಗೆ ಕಾಶ್ಮೀರವನ್ನು ಗೆದ್ದುಕೊಡುತ್ತಾರೆ ಎಂಬಂತಹ ಪ್ರಚೋಧನಕಾರಿ ಹೇಳಿಕೆಗಳನ್ನು ಟಿವಿ ಸಂದರ್ಶನವೊಂದರಲ್ಲಿ ನೀಡಿದ್ದರ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಗಂಭೀರವಾದ ವಿಚಾರ.
Discussion about this post