ಬೆಂಗಳೂರು: ಕುಮಾರಸ್ವಾಮಿಯವರಿಗೆ ಆರ್.ಎಸ್.ಎಸ್ ಶಾಖೆಗೆ ಬರಲಿ ಎಂದು ಬಿಜೆಪಿ ನಾಯಕರು ನೀಡಿರುವ ಆಹ್ವಾನಕ್ಕೆ ಕಿಡಿಕಾರಿರುವ ಮಾಜಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಟ್ಟ ಸಂಸ್ಕೃತಿ ಕಲಿಯುವ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ’ಅಯ್ಯೋ… ನನಗೆ ಆರ್.ಎಸ್.ಎಸ್ ಶಾಖೆ ಸಹವಾಸವೇ ಬೇಡ’ ಆರ್.ಎಸ್.ಎಸ್ ಶಾಖೆಯಿಂದ ಕಲಿಸಿದ್ದನ್ನು ಎಲ್ಲರೂ ನೋಡಿದ್ದೇವಲ್ಲ…ವಿಧಾನಸಭೆಯಲ್ಲಿ ಹೇಗಿರಬೇಕು? ಎಂಬುದನ್ನು ಕಲಿಸಿದ್ದನ್ನು ಎಲ್ಲರೂ ನೋಡಿಲ್ಲವೇ? ವಿಧಾನಸಭೆ ಕಲಾಪ ನಡೆಯುತಿದ್ದರೆ ನೀಲಿಚಿತ್ರ ನೋಡಿಕೊಂಡು ರೂರುವುದು…ಇಂಥದ್ದನ್ನೆ ತಾನೆ ಅವರ ಶಾಖೆಯಲ್ಲಿ ಕಲಿಸುವುದು? ಇದನ್ನೆಲ್ಲ ಕಲಿತುಕೊಳ್ಳಲು ನಾನು ಅಲ್ಲಿಗೆ ಹೋಗಬೇಕೇ? ಎಂದು ವಾಗ್ದಾಳಿ ನಡೆಸಿದರು.
ನಾನು ಆ ಆರ್.ಎಸ್.ಎಸ್ ಶಾಖೆಗೆ ಹೋಗಿ ಏನೂ ಕಲಿತುಕೊಳ್ಳಬೇಕಿಲ್ಲ. ನನಗೆ ಈ ಬಡವರ ಶಾಖೆಯಲ್ಲಿ ಕಲಿತಿರೋದೆ ಸಾಕು… ಅಯ್ಯೋ.. ಆ ಆರ್.ಎಸ್.ಎಸ್ ಶಾಖೆ ಸಹವಾಸ ನನಗೆ ಬೇಡವೇ ಬೇಡ ಎಂದು ಹೇಳಿದರು.
ಇದನ್ನು ಓದಿ….: e Paper – October 20, 2021
Discussion about this post