ನವದೆಹಲಿ: ದೇಶದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿಮರ್ಮಾಣ ಆಗುತ್ತಿದೆ. ಶಾಂತಿ ಕದಡುವ ಚಟುವಟಿಕೆಗಳು ಸಾಧ್ಯತೆ ಇರುವ ಕಾರಣ ಗಡಿಯನ್ನು ಕಾಯುತ್ತಿರುವ ಭದ್ರತಾ ಪಡೆಗಳು ಹೆಚ್ಚು ಜಾಗರೂಕವಾಗಿರಬೇಕು. ಮುಂದಿನ ಸೂಚನೆಯನ್ನು ಜಾರಿ ಮಾಡಲು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಭಾಗವಹಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಸೂಚಿಸಿದರು.
ವಾಯುಪಡೆಯ ಕಮಾಂಡರ್ಗಳ ಹಂತದ ದ್ವೈವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸವಾಲನ್ನು ಎದುರಿಸುವ ಸಾಮರ್ಥ್ಯ ವಾಯುದಳಕ್ಕೆ ಇದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ವ ಲಡಾಖ್ನ ಕೆಲವು ಗಡಿಗಳಲ್ಲಿ ಉದ್ವಿಗ್ನ ಸ್ಥಿತಿ ಮತ್ತು ಸೇನಾ ಜಮಾವಣೆ ಹಾಗೂ ಮೂಲಸೌಕರ್ಯವನ್ನು ಚೀನಾ ಮಾಡುತ್ತಿರುವ ಇರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರ ಈ ಸೂಚನೆ ಮಹತ್ವದ್ದಾಗಿದೆ.
ವಿವಿಧ ಆಯ್ಕೆಗಳನ್ನು ಸಂಪರ್ಪೂವಾಗಿ ಪರಿಶೀಲಿಸಿದ ನಂತರ ಸೇನಾಪಡೆಗಳ ಜಂಟಿ ತಂಡ ರಚನೆಗೆ ಮುಂದಾಗಬಹುದು. ಅದಕ್ಕೂ ಮೊದಲು ವಿಸ್ತೃತ ಸಮಾಲೋಚನೆ ನಡೆಯಬೇಕು ಎಂದು ಹೇಳಿದರು. ಮೂರೂ ಪಡೆಗಳ ಬಲಿಷ್ಠ ಯೋಧರನ್ನು ಒಳಗೊಂಡ ಕಮಾಂಡಿಂಗ್ ಥಿಯೇಟರ್ಗಳ ರಚನೆ ಅಗತ್ಯ ಇದೆ. ಈ ಬಗ್ಗೆ ಸಮಗ್ರ ವರದಿಯನ್ನು ಆರು ತಿಂಗಳ ಒಳಗೆ ಸಲ್ಲಿಸಲಾಗುವುದು ಎಂದು ಮೂರು ಪಡೆಗಳ ಪ್ರಧಾನ ದಂಡನಾಯಕರಾದ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹೇಳಿದ್ದರು.ಈ ಹಿನ್ನೆಲೆಯಲ್ಲಿ ಸಚಿವ ರಾಜನಾಥ್ ಮೂರೂ ಪಡೆಗಳ ಜಂಟಿ ತಂಡ ರಚನೆಯ ವಿಷಯವನ್ನು ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ಶತ್ರುಗಳ ದುಸ್ಸಾಹಸವನ್ನು ತಡೆಯುವಂತಹ ಬಹು ಆಯಾಮದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು. ಭವಿಷ್ಯದ ಘರ್ಷಣೆಗಳನ್ನು ಕೆಚ್ಚೆದೆಯಿಂದ ಎದುರಿಸುವ ದೃಷ್ಟಿಯಿಂದ ಮೂರೂ ಪಡೆಗಳ ಜಂಟಿ ತರಬೇತಿ ಅಗತ್ಯ ಎಂದರು.
Rajnath Singh asks military to stay prepared
ಇದನ್ನು ಓದಿ: ವಾಯುಪಡೆಯ ಹೆಲಿಕಾಪ್ಟರ್ ವೈವಿಧ್ಯ
ಇದನ್ನು ಓದಿ: ಸಿಆರ್ಪಿಎಫ್ ಸಿಬ್ಬಂದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೋಜನ
Discussion about this post