ಚಿಕ್ಕಮಗಳೂರು.ಅ.೦೨: ಗಾಂಧೀಜಿ ಅವರು ತಮ್ಮ ಜೀವನದ ಸಂಪೂರ್ಣ ಸಮಯವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಸಾರ್ವಜನಿಕರ ಹಿತ್ತಕ್ಕಾಗಿ ಮುಡಿಪಾಗಿಟ್ಟ ಧೀಮಂತ ನಾಯಕರು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ಅವರು ಇಂದು ಅಲ್ಲಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಸ್ವಚ್ಛ ವಾಹಿನಿ, ಕಸದ ಬುಟ್ಟಿ ವಿತರಣೆ ಮತ್ತು ಗ್ರಾಮಗಳ ಸಮಗ್ರ ಸ್ವಚ್ಛತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಗಾಂಧೀಜಿ ಅವರ ಯೋಚನೆ, ಕಲ್ಪನೆಗಳನ್ನಿಟ್ಟು ಕೊಂಡು ದೇಶದ ಸ್ವಚ್ಚತ ಅಭಿಯಾನದಂತಹ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ, ನಮ್ಮ ಸುತ್ತ- ಮುತ್ತಲಿನ ಪರಿಸರವನ್ನು ನಾವು ಸ್ವಚ್ಚವಾಗಿಟ್ಟುಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಗ್ರಾಮಗಳಲ್ಲಿನ ಚರಂಡಿ, ರಸ್ತೆ ಹಾಗೂ ಸುತ್ತ- ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಿ, ಎಂದ ಅವರು ಕಸವನ್ನು ಎಲ್ಲೆಂದರಲ್ಲಿ ಬಿಸಾಕದೆ ನಿರ್ಧಿಷ್ಟ ಸ್ಥಳಗಳಲ್ಲಿ ಕಸವನ್ನು ವಿಲೇವಾರಿ ಮಾಡುವುದರಿಂದ ಗ್ರಾಮಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬಹುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಚುನಾಯಿತ ಅಧ್ಯಕ್ಷ, ಸದಸ್ಯರುಗಳಿಗೆ ತಮ್ಮ ಗ್ರಾಮಗಳ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಪರಿಚಯವಿರುವುದರಿಂದ ತನ್ನ ಗ್ರಾಮದ ಸಮಸ್ಯೆಗಳನ್ನು ಅರಿತು, ಬಗೆಹರಿಸಬಹುದು ಎಂದ ಅವರು ಗ್ರಾಮಗಳಲ್ಲಿ ಜನ ಸಾಮಾನ್ಯರಿಗೆ ದೊರೆಯುವಂತಹ ಮೂಲ ಭೂತ ಸೌಕಯ್ಯಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ಕಲ್ಪಿಸುವಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಪಿ.ಡಿ.ಒ, ಅದ್ಯಕ್ಷರು, ಸದಸ್ಯರುಗಳು ಮಾಡುಬೇಕು ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಟಿ ರವಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಬದುಕಿನ ಪ್ರೇರಣೆಯನ್ನು ಪಡೆದು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಸ್ವಚ್ಚತೆ ಎಲ್ಲಿ ಇರುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ ಹಾಗೆಯೇ ನಮ್ಮ ಮನಸಿನಲ್ಲಿ ಸ್ವಚ್ಚತ ಮನೋಭವವನ್ನು ಇಟ್ಟುಕೊಂಡರೆ ಸಮಾಜವನ್ನು ಕೂಡ ಸ್ವಚ್ಚತೆಯಿಂದ ಇಟ್ಟುಕೊಳ್ಳಬಹುದು ಎಂದರು,
ಭಾರತದ ಅಭಿವೃದ್ಧಿಯು ಹಳ್ಳಿಯ ಮೂಲಕವೇ ಆಗಬೇಕೆಂಬ ಕಲ್ಪನೆಯನ್ನು ನಮ್ಮ ಮಹಾತ್ಮರು ಅಂದೆ ತಿಳಿಸಿಕೊಟ್ಟಿದ್ದರು, ಅದರಂತೆ ಭಾರತವು ೫ ರಿಂದ ೧೦ ವರ್ಷಗಳೊಳಗೆ ಸ್ವಚ್ಚ ನಗರವಾಗುತ್ತದೆ, ಗಾಂಧೀಜಿ ಅವರ ಕನಸು ನನಸಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಮಾತನಾಡಿ, ನಮ್ಮ ಮನೆಯನ್ನು ಸ್ವಚ್ಚವಾಗಿಟ್ಟುಕೊಂಡರೆ, ನಮ್ಮ ಊರು, ದೇಶವನ್ನು ಕೂಡ ಸ್ವಚ್ಚವಾಗಿಟ್ಟುಕೊಳ್ಳಬಹುದು ಎಂದ ಅವರು ೧೯೨೭ ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜನತೆಗೆ ಸ್ವರಾಜ್ ಸಂದೇಶವನ್ನು ನೀಡುತ್ತಾರೆ ಹಾಗೂ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಾತ್ರ ಅಪಾರವಾಗಿದೆ, ಗಾಂಧೀಜಿಯವರು ಯುವಕರಿಗೆ ನೀಡಿದಂತಹ ಸಂದೇಶದ ಮಾರ್ಗದಲ್ಲಿ ನಡೆದು ಹೋರಾಟದಲ್ಲಿ ಭಾಗಿಯಾಗಿ ಖಾದಿ ಉತ್ಪಾದನೆ ಮತ್ತು ಮಾರಾಟದಲ್ಲಿ ವ್ಯಾಪಕ ಬೆಂಬಲವನ್ನು ನೀಡುವುದರ ಜೊತೆಗೆ ಸಾರಾಯಿ ಅಂಗಡಿಗಳನ್ನು ಮುಚ್ಚಿಸಿ ಮತ್ತು ವಿದೇಶಿ ಬಟ್ಟೆಗಳನ್ನು ಸುಡುವಂತಹ ಅದೋಲವನ್ನು ನಡೆಸಿದರು ಎಂದು ತಿಳಿಸಿದರು.
ರಾಜ್ಯದಲ್ಲಿ ಮೈಸೂರು ನಗರವು ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದೂ, ಚಿಕ್ಕಮಗಳೂರು ಕೂಡ ಅದರಂತೆ ಸ್ವಚ್ಚ ನಗರ ಎಂದು ಕರೆಸಿ ಕೊಳ್ಳುವಲ್ಲಿ ಯಶಸ್ವಿಯಾಗಬೇಕಾದರೆ ಸಾಮಾನ್ಯ ಜನರಿಂದ ಹಿಡಿದು ಪ್ರತಿಯೋಬ್ಬರು ಸಹಕಾರ ನೀಡಿದರೆ ಮಾತ್ರ ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಅರಿಕಾರರಾದ ರಾಷ್ಟ್ರಪಿತ ಅವರು ಕಂಡ ಕನಸು ರಾಷ್ಟ್ರದ ಸಮಗ್ರ ಬೆಳವಣಿಗೆಯು ಗ್ರಾಮಗಳನ್ನು ಸಮೃದ್ಧಿಗೊಳಿಸುವುದರಲ್ಲಿ ಅಡಗಿದೆ ಎಂಬ ದ್ಯೇಯೋದ್ದೇಶದಂತೆ ಭಾರತ ರಾಷ್ಟ್ರದಲ್ಲಿ ಸ್ವಚ್ಚ ಕಾರ್ಯಕ್ರಮವನ್ನು ೧೯೫೪ ರಲ್ಲಿಯೇ ಪ್ರಾರಂಭಿಸಲಾಗಿತ್ತು ಎಂದು ಹೇಳಿದರು.
ಸ್ವಚ್ಚ ಭಾರತ್ ಅಭೀಯಾನದ ಮುಖ್ಯ ಉದ್ದೇಶ ಬಯಲು ಶೌಚಲಾಯ ನಿರ್ಮೂಲನೆ, ಘನ ತ್ಯಾಜ್ಯಗಳ ನಿರ್ವಾಹಣೆ, ಮರುಬಳಕೆ ಮತ್ತು ಸಾರ್ವಜನಿಕರಲ್ಲಿ ನೈರ್ಮಲೀಕರಣಕ್ಕಾಗಿ ಮಾನಸಿಕ ಬದಲಾವಣೆ, ಸಂಪೂರ್ಣ ಕೊಳಗೇರಿ ನಿರ್ಮೂಲನೆ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ತಾಲ್ಲೂಕಿನ ೪೭ ಗ್ರಾಮ ಪಂಚಾಯಿತಿಗಳಲ್ಲಿ ನಿರಂತರವಾಗಿ ಮನೆಗಳಿಂದ ಒಣ ಕಸ ಸಂಗ್ರಹಣೆ ಮಾಡಲು ಚಾಲನೆ ನೀಡಲಾಗುತ್ತಿದ್ದು, ಇದಕ್ಕೆ ಸಂಬಂಧಸಿದಂತೆ ಗ್ರಾಮವಾರು ವೇಳ ಪಟ್ಟಿಯಂತೆ ಯಾವ ದಿನದಂದು ಯಾವ ಗ್ರಾಮಕ್ಕೆ ಸ್ವಚ್ಚ ವಾಹಿಸಿ ವಾಹನ ತೆರಲುತ್ತದೆ ಎಂಬ ಮಾರ್ಗನಕ್ಷೆಯನ್ನು ಗ್ರಾಮ ಪಂಚಾಯಿತಿಗಳಲ್ಲಿ ರೂಪಿಸಲಾಗಿದೆ. ಎಂದ ಅವರು ಪ್ರಸ್ತುತ ತಾಲ್ಲೂಕಿನಲ್ಲಿ ೪೪೬ ಗುರಿಯನನು ಹೊಂದಿದ್ದು ೨೨೪ ಗೃಹ ಶೌಚಲಾಯ ಪೂರ್ಣಗೊಂಡಿರುತ್ತದೆ ಎಂದು ಹೇಳಿದರು.
ಘನ ತ್ಯಾಜ್ಯ ಸಂಗ್ರಹಣೆಗಾಗಿ ತಾಲ್ಲೂಕಿನ ೯ ಗ್ರಾಮ ಪಂಚಾಯಿತಿಗಳಲ್ಲಿ ಕಸದ ಬುಟ್ಟಿಯುನ್ನು ವಿತರಿಸಲಾಗಿದ್ದು, ಇಂದು ಸಾಂಕೇತಿಕವಾಗಿ ೧೦ ಗ್ರಾಮ ಪಂಚಾಯಿತಿಗಳಲ್ಲಿ ಕಸದ ಬುಟ್ಟಿ ವಿತರಣೆ ನಡೆಸಲಾಗುತ್ತದೆ ಇನ್ನು ೧೫ ದಿನಗಳೊಳಗಾಗಿ ತಾಲ್ಲೂಕಿನ ಎಲ್ಲ ೪೫ ಸಾವಿರ ಕುಟುಂಬಗಳಿಗೆ ತಲಾ ೨ ರಂತೆ ಕಸದ ಬುಟ್ಟಿ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಹೆಚ್ ಅಕ್ಷಯ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾರನಾಥ್, ಚಿಕ್ಕಮಗಳೂರು ತಹಸೀಲ್ದಾರ್ ಕಾಂತ್ರಾಜ್, ಅಲ್ಲಂಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಧ್ಯಾನೇಶ್ ಸೇರಿದಂತೆ ಮತ್ತಿತರ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.

























Discussion about this post