ನವದೆಹಲಿ: ಅಧಿಕ ಬಡ್ಡಿ ಆಸೆಗಾಗಿ ಅನೇಕರು ವಿಶ್ವಾಸವಲ್ಲದ ಯೋಜನೆಗಳಲ್ಲಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗುತ್ತಾರೆ. ಆದರೆ, ಅಂಚೆ ಕಚೇರಿಯಲ್ಲಿನ ಹೂಡಿಕೆಗೆ ಒಂದಿನಿತು ಮೋಸ ಆಗುವುದಿಲ್ಲ ಜತೆಗೆ ಹಣ ದ್ವಿಗುಣಗೊಳಿಸುವ ಆಕರ್ಷಕ ಯೋಜನೆಗಳೂ ಇವೆ. ಇವುಗಳ ಪೈಕಿ ಕಿಸಾನ್ ವಿಕಾಸ ಪತ್ರ (ಕೆವಿಪಿ) ಯೋಜನೆಯ ಪರಿಚಯ ಇಲ್ಲಿದೆ.
ಕೆವಿಪಿ ಎಂದೇ ಜನಪ್ರಿಯವಾಗಿರುವ ಕಿಸಾನ್ ವಿಕಾಸ ಪತ್ರ ಯೋಜನೆಯು ಸಣ್ಣ ಉಳಿತಾಯಗಳಲ್ಲಿ ಉತ್ತಮವಾದುದು. ಹತ್ತು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ (124 ತಿಂಗಳು) ಹೂಡಿಕೆ ಮಾಡಲಾದ ಹಣ ದ್ವಿಗುಣಗೊಳ್ಳುತ್ತದೆ. ಇದಕ್ಕೆ ವಾಷಿರ್ಕವಾಗಿ ಶೇ. 6.9 ಬಡ್ಡಿ ದರ ಇದೆ. ಕನಿಷ್ಠ ಒಂದು ಸಾವಿರ ರೂಪಾಯಿ ಹೂಡಿಕೆಯಿಂದ ಇದನ್ನು ಆರಂಭಿಸಬಹುದು. ನಂತರ ಪ್ರತಿ ನೂರು ರೂಪಾಯಿಯ ಗುಣಕದಲ್ಲಿ ಹೂಡಿಕೆ ಮೊತ್ತ ಹಿಗ್ಗಿಸಬಹುದು. ಗರಿಷ್ಠ ಮಿತಿ ಇಲ್ಲ. 50 ಸಾವಿರ ರೂಪಾಯಿ ಮೇಲ್ಪಟ್ಟ ಹೂಡಿಕೆಗೆ ಪ್ಯಾನ್ ಕಾರ್ಡ್ ಕಡ್ಡಾಯ.
ಕೆವಿಪಿ ಬಡ್ಡಿ ದರವು ಕಾಲಕಾಲಕ್ಕೆ ಪರಿಷತವಾದರೂ ಗ್ರಾಹಕರು ಅದನ್ನು ಖರೀದಿಸುವಾಗ ಕೆವಿಪಿ ಮೇಲೆ ಮುದ್ರಿತವಾದ ಬಡ್ಡಿಯನ್ನೆ ಹೂಡಿಕೆಯ ಅಂತ್ಯದಲ್ಲಿ ಪಡೆಯುತ್ತಾರೆ. ಹಣಕಾಸು ಮಾರುಕಟ್ಟೆಯ ಏರಿಳಿತಗಳು ಇದಕ್ಕೆ ಭಾದಿಸುವುದಿಲ್ಲ. ಹೀಗಾಗಿ ಇದು ಅತ್ಯಂತ ಸುರತ ಹೂಡಿಕೆಯಲ್ಲಿ ಒಂದು ಎಂದು ಪರಿಗಣಿತವಾಗಿದೆ.
18 ವರ್ಷ ತುಂಬಿದವರು ಕೆವಿಪಿ ಖರೀದಿಸಬಹುದು. ಗರಿಷ್ಠ ವಯೋಮಾನದ ಮಿತಿ ಇಲ್ಲ. ಹೀಗಾಗಿ ಹಿರಿಯ ನಾಗರಿಕರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಕೆವಿಪಿ ಖರೀದಿಸಿದರೂ ವಯಸ್ಕ ಪಾಲಕರು ನಿರ್ವಹಿಸಬೇಕಾಗುತ್ತದೆ. ಓರ್ವ ವಯಸ್ಕ ಅಥವಾ ಮೂವರು ಸೇರಿ ಜಂಟಿಯಾಗಿ ಖರೀದಿಸಬಹುದು. ಬುದ್ಧಿಮಾಂದ್ಯರು ಗಾಡಿರ್ಯನ್ ಹೆಸರಿನಲ್ಲಿ ಖರೀದಿ ಮಾಡಬಹುದು. ಆದರೆ, ಕೆವಿಪಿಯನ್ನು ಭಾರತೀಯರು ಮಾತ್ರ ಖರೀದಿಸಬಹುದಾಗಿದೆ. ಅನಿವಾಸಿ ಭಾರತೀಯರಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇಲ್ಲ. ಕಂಪನಿಗಳು ಅಥವಾ ಹಿಂದು ಅವಿಭಜಿತ ಕುಟುಂಬಗಳ ಹೆಸರಲ್ಲಿ ಖರೀದಿಗೆ ಆಸ್ಪದ ಇಲ್ಲ.
ಅವಧಿಗೆ ಮುಂಚೆ ಹಣ ಹಿಂಪಡೆಯಲು ಅವಕಾಶ ಇದೆ. ಹೂಡಿಕೆ ಮಾಡಿದ ಒಂದು ವರ್ಷದಲ್ಲಿ ಹಿಂಪಡೆದರೆ ಬಡ್ಡಿ ಸಿಗುವುದಿಲ್ಲ. ಜತೆಗೆ ದಂಡವನ್ನು ಕಟ್ಟಬೇಕಾಗುತ್ತದೆ. ಒಂದು ವರ್ಷದ ನಂತರ ಹಿಂಪಡೆದರೆ ದಂಡ ಇರುವುದಿಲ್ಲ. ಆದರೆ, ಬಡ್ಡಿದರ ಇಳಿಕೆ ಆಗುತ್ತದೆ.
Kisan Vikas Patra Best Small Saving Scheme
ಇದನ್ನು ಓದಿ: Banks’ loans: ಬ್ಯಾಂಕುಗಳ ಸಾಲ ಸಂಪರ್ಕ ಕಾರ್ಯಕ್ರಮ
ಇದನ್ನೂ ಓದಿ: RBI: ಬ್ಯಾಂಕ್ಗಳ ಸೇವ್ ಲಾಕರ್ ನಿಯಮ ಪರಿಷ್ಕರಿಸಿದ ಆರ್ಬಿಐ
Discussion about this post