ಕಾಬೂಲ್: ಪಂಜ್ ಶಿರ್ ಪ್ರಾಂತ್ಯದ ನಾಯಕ ಅಹಮದ್ ಮಸೂದ್ ತಾಲಿಬಾನಿಗಳಿಗೆ ಜಗ್ಗದೆ ಮಾತುಕತೆಗೂ ಸಿದ್ದ, ಸಮರಕ್ಕೂ ಸಿದ್ದ ಎಂದು ಸವಾಲು ಹಾಕಿದ್ದಾರೆ. ಅಫ್ಘಾನಿಸ್ತಾನದ ರಾಜದಾನಿ ಕಾಬೂಲ್ ನಲ್ಲಿ ಉಗ್ರರು ನೆಲೆ ಕಂಡುಕೊಂಡು ಹತ್ತುದಿವಸಗಳೇ ಕಳಿದಿದೆ. ಆದರೆ ಪಂಜ್ ಶಿರ್ ಪ್ರಾಂತ್ಯದಲ್ಲಿ ಸಿಡಿದೆದ್ದ ಸ್ಥಳೀಯ ಪ್ರತಿರೋಧ ಪಡೆಗಳು ತಾಲಿಬಾನ್ ಅನ್ನು ಮಣಿಸಲು ಸಜ್ಜುಗೊಂಡಿವೆ ಎನ್ನಲಾಗಿದೆ.
ಇಲ್ಲಿ ಬಂಧೂಕಿನಿಂದ ಕಾರ್ಯ ಸಾಧನೆ ಸಾಧ್ಯವಿಲ್ಲ ಎಂದು ಮನಗಂಡ ತಾಲಿಬಾನಿಗಳು ಮಾತುಕತೆಯ ನಾಟಕವಾಡುತ್ತಿವೆ. ಅಫ್ಘಾನಿಸ್ತಾನವೇ ತಲ್ಲಣಿಸಿ ಹೋಗಿರುವ ಸಂದರ್ಭದಲ್ಲಿ ಇನ್ನಷ್ಟು ಪ್ರಾಂತ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ತಾಲಿಬಾನ್ ರಕ್ಕಸರು ಹವಣಿಸುತ್ತಿದ್ದಾರೆ.
ಪಂಜ್ ಶೀರ್ ಪ್ರಾಂತ್ಯ ಉಗ್ರರ ವಶವಾಗದಿರಲಿ ಎಂದು ವಿಶ್ವವೇ ಪ್ರಾರ್ಥಿಸುತ್ತಿದೆ. ಪಂಜ್ ಶಿರ್ ಪ್ರಾಂತ್ಯದ ಅಹಮದ್ ಮಸೂದ್, ಅಮರುಲ್ಲಾ ಸಲೇಹ್, ಬಿಸ್ಮಿಲ್ಲಾ ಖಾತ್ ಮುಂತಾದ ಸಿಂಹಗಳೊಡನೆ ಸೆಣೆಸಲು ಆಗದೆ, ೪೦ ಮಂದಿ ತಾಲಿಬಾನಿಗಳು ಸಂಧಾನದ ಮಾತುಕತೆಗೆ ಹೋಗಿದ್ದಾರೆಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
Discussion about this post