ಬಾಲಿವುಡ್ ಸುದ್ದಿ: ಮೇರು ಗೀತ ರಚನಾಕಾರ ಜಾವೆದ್ ಅಕ್ತರ್ ಇತ್ತೀಚೆಗೆ ಮಾದ್ಯಮಗಳೊಡನೆ ಸಂವಾದ ನಡೆಸುವ ವೇಳೆ ಬಿಜೆಪಿಯನ್ನು ತಾಲಿಬಾನ್ ಗೆ ಹೋಲಿಸಿದ್ದರು. ಇದು ಬಿಜೆಪಿ ಮುಖಂಡರನ್ನು ಕೆರಳಿಸಿದ್ದು, ಜಾವೆದ್ ರನ್ನು ಕೈ ಮುಗಿದು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದ ಘಟನೆ ನಡೆದಿದೆ.
ಕ್ಷಮೆ ಯಾಚನೆ ಮಾಡಲೇಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬಿಜೆಪಿ ಬುಸುಗುಟ್ಟಿದೆ. ಜಾವೆದ್ ಅಖ್ತರ್ ಕೆಲಸ ಮಾಡಿದ ಯಾವುದೇ ಸಿನೆಮಾ ಪ್ರದರ್ಶನ ಮಾಡಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಶಾಸಕ , ಬಿಜೆಪಿ ವಕ್ತಾರ ರಾಮ್ ಕದಮ್ ಹವಾ ಹಾಕಿದ್ದರು.
ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಜಾವೇದ ಅಖ್ತರ್ “ಯಾವುದೇ ಧರ್ಮದ ಬಲಪಂಥೀಯರನ್ನ ಗಮನಿಸಿ, ಅವರೆಲ್ಲಾ ಒಂದೇ ಆಗಿರುತ್ತಾರೆ. ಮುಸ್ಲಿಂ ಬಲಪಂಥೀಯರು, ಕ್ರೈಸ್ತ ಬಲಪಂಥೀಯರು, ಹಿಂದಿ ಬಲಪಂಥೀಯರು ಎಲ್ಲರೂ ಒಂದೇ. ಎಲ್ಲರೂ ಧರ್ಮವೇ ದೊಡ್ಡದು, ಧರ್ಮಕ್ಕೆ ಮಿಗಿಲಾದ ಕಾನೂನು ಇಲ್ಲವೆಂದು ವಾದಿಸುತ್ತಾರೆ. ಆಧುನಿಕತೆಯು ಮನುಷ್ಯನನ್ನು ಹಾಳು ಮಾಡುತ್ತದೆ” ಎಂದು ಜಾವೆದ್ ಹೇಳಿದ್ದಾರೆ.
ಯಾವ ಕಾನೂನು ಸಹ ಧರ್ಮಕ್ಕಿಂ ದೊಡ್ಡದಲ್ಲ ಎಂಬುದು ತಾಲಿಬಾನಿಗಳ ವಾದ. ಅದೇ ವಾದ ವನ್ನು ಹಿಂದೂ ಬಲಪಂಥೀಯರು ಸಹ ಮಾಡುತ್ತಾರೆ. ಬಳೆ ಮಾರುವ ಮುಸ್ಲಿಂರನ್ನು ಹೊಡೆಯುವುದು, ಟೀ ಮಾರುವ ಮಹಿಳೆ ಮೇಲೆ ದಾಳಿ ಮಾಡುವುದು ಇದೆಲ್ಲವೂ ಸಹ ತಾಲಿಬಾನಿಗಳಾಗುತ್ತಿರುವುದರ ಕುರುಹು ಆಗಿದೆ. ಇಬ್ಬರೂ ಒಂದೇ ಆದ್ರೆ ಹೆಸರು ಮಾತ್ರ ಬೇರೆ ಬೇರೆ ಎಂದು ಜಾವೆದ್ ಹೇಳಿದ್ದರು.
ತಾಲಿಬಾನಿಗಳಿಗೆ ಇಸ್ಲಾಮಿಕ್ ರಾಷ್ಟ್ರ ಬೇಕು ಹಾಗೆ ಇವರಿಗೆ ಹಿಂದೂ ರಾಷ್ಟ್ರ ಬೇಕು. ತಾಲಿಬಾನಿಗಳ ಕಾರ್ಯಗಳ ಖಂಡನೀಯ, ಅವರು ಅನಾಗರೀಕರು ಹಾಗೆಯೇ ಒತರೆಧರ್ಮದವರು ಕೂಡಾ. RSS, VHP, ಭಜರಂಗದಳಕ್ಕೆ ಬೆಂಬಲ ನೀಡುವವರೂ ಸಹ ಎಂದು ಜಾವೇದ್ ಹೇಳಿದ್ದರು.
ಬಿಜೆಪಿ ಶಾಸಕ ರಾಮ್ ಕದಮ್ ಮಾತನಾಡಿ ಜಾವೇದ್ RSS, VHP, ಭಜರಂಗದಳಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಧರ್ಮದ ಮೇಲೆ ಅರ್ ಎಸ್ ಎಸ್ ಮುಖಂಡರು ಆಡಳಿತ ನಡೆಸುತ್ತಾರೆ. ಅವರನ್ನು ತಾಲಿಬಾನಿಗಳಿಗೆ ಹೋಲಿಸಿ ಅವಮಾನ ಮಾಡಲಾಗಿದೆ ಎಂದುಅವರು ಆರೋಪಿಸಿದ್ದಾರೆ.
ಬಿಜೆಪಿ ಯುವಮೋರ್ಚಾ ಸದಸ್ಯರು ಜುಹುವಿನ ಜಾವೇದ್ ಅಖ್ತರ್ ನಿವಾಸದ ಮುಂದೆ ಗೆರಾವ್ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಯುವಮೋರ್ಚಾ ಮುಖಂಡ “ಜಾವೆದ್ ಅಖ್ತರ್ ಮಾನಸಿಕ ಸ್ಥಿತಿಮಿತ ತಪ್ಪಿದೆ ಎನಿಸುತ್ತಿದೆ. ಈ ದೇಶ ಜಾವೆದ್ ಗೆ ಎಲ್ಲವನ್ನೂ ನೀಡಿದೆ. RSS ಜನಗಳ ಜೀವನ ಸುಧಾರಣೆಗೆ ಸಹಾಯ ಮಾಡುತ್ತಿದೆ, ಅದನ್ನು ತಾಲಿಬಾನ್ ಗೆ ಹೋಲಿಸಿರುವ ಜಾವೆದ್ ಕ್ಷಮೆ ಕೇಳಬೇಕು, ಇಲ್ಲದಿದ್ರೆ ತೀವ್ರತರ ಹೋರಾಟ ಮಾಡೋದಾಗಿ ಸಹ ಎಚ್ಚರಿಕೆ ನೀಡಿದ್ದಾರೆ.
Discussion about this post