ಕನ್ನಡನಾಡಿ ಸುದ್ದಿಜಾಲ: ಭಾರತದ ಸಂಗೀತದಿಂದ ಶ್ರೀಲಂಕಾ ಪ್ರಭಾವಿಸಿದೆ ಎಂದು NDTV ಗೆ ನೀಡಿದ ಸಂದರ್ಶನವೊಂದರಲ್ಲಿ ಶ್ರೀಲಂಕಾ ಗಾಯಕಿ ಯೊಹಾನಿ ಹೇಳಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿರುವ ಯೊಹಾನಿ ಅವರಿಗೆ ಕಾರ್ಯಕ್ರಮ ನಿರೂಪಕ,
ನೀವು ಭಾರತದ ಚಿತ್ರರಂಗದೊಂದಿಗೆ ಕೆಲಸ ಮಾಡಲು ಬಯಸುವಿರಾ? ಎಂಬ ಪ್ರಶ್ನೆಗೆ
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸೇರಿದಂತೆ ಯೋಯೋ ಹನಿಸಿಂಗ್, ಡಿವೈನ್, ನೇಹಾಕಕ್ಕರ್ ಅವರೊಂದಿಗೆ ಕೆಲಸ ಮಾಡಬೇಕೆನ್ನುವುದು ನನ್ನ ಆಸೆ ಎಂದು ತಿಳಿಸಿದ್ದಾರೆ.
ಬೇರೆ ಬೇರೆ ಭಾಷೆಗಳಲ್ಲಿ ಮನಿಕೆ ಮಗೆ ಹಿತೆ ಈಗಾಗಲೇ ಹೊರಬಂದಿದ್ದು ಹೊಸ ಅಲೆ ಮೂಡಿಸಿದೆ.
ತಮಿಳು-ಮಲಯಾಳಂ ಹಾಡಲು ಖುಷಿಯಾಗಿದೆ
ಮಲಯಾಳಂ ಹಾಗೂ ತಮಿಳು ವರ್ಷನ್ನಲ್ಲಿ ನೀವೇ ಹಾಡಿದ್ದೀರಿ ಎಂದು NDTV ಸಂದರ್ಶನಕಾರ ಕೇಳಿದಾಗ ಸಿಂಹಳಿ ನನ್ನ ಮಾತೃ ಭಾಷೆ. ತಮಿಳು ಹಾಗೂ ಮಲಯಾಳಂ ನನಗೆ ಹತ್ತಿರದ ಭಾಷೆಗಳಲ್ಲ. ನನ್ನ ಕೆಲವು ಸ್ನೇಹಿತರು ತಮಿಳು ಹಾಗೂ ಮಲಯಾಳಂ ಆವೃತ್ತಿ ಹೊರಬರಲು ಸಹಕರಿಸಿದ್ದಾರೆ. ಈ ಭಾಷೆಗಳನ್ನು ಅರ್ಥ ಮಾಡಿಕೊಂಡು ಹಾಡುವುದು ಬಹಳ ಖುಷಿ ತಂದಿದೆ ಎಂದು ಯೊಹಾನಿ ತಿಳಿಸಿದ್ದಾರೆ.
ಹಿಂದಿ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಯೊಹಾನಿ ಅವರ ಮನಿಕೆ ಹಿತೆ ಆವೃತ್ತಿಗಳು ಬಂದಿರುವುದನ್ನು ಕಂಡು ಯೊಹಾನಿಗೆ ಖುಷಿ ಆಗಿದೆ.
ದಕ್ಷಿಣ ಕನ್ನಡದ ಇಬ್ಬರು ಪೋರರು ಯೋಹಾನಿಯ ಮನ್ ಕೆ ಮಗೆ ಹೊತೆ ಹಾಡನ್ನು ಕನ್ನಡದಲ್ಲಿ ಹಾಡಿ, ಮನೆಯಲ್ಲೇ ಶೂಟ್ ಮಾಡಿದ್ದು, ಅದು ಕೂಡಾ ಸಾಕಷ್ಟು ಜನಪ್ರಿಯವಾಗಿದೆ.
Discussion about this post