ಕಾಬೂಲ್: ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದ ವಿದೇಶಿ ಮಂತ್ರಿ ಷೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ ಜಾಯ್, ಭಾರತ-ಪಾಕ್ ಆಂತರಿಕ ಹೋರಾಟಕ್ಕೆ ಅಫ್ಘನ್ ಎಳೆದುಕೊಂಡು ಬರುವ ಪ್ರಸಂಗವೇ ಇಲ್ಲ ಎಂದು ಹೇಳಿದ್ದಾರೆ.
ಸಿಎನ್ ಎನ್-ನ್ಯೂಸ್ ೧೮ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಮಾತನ್ನು ಹೇಳಿದ್ದು, ತಾಲಿಬಾನ್ ತನ್ನ ನೆರೆಹೊರೆಯ ದೇಶಗಳೊಡನೆ ಉತ್ತಮ ಸಂಬಂಧ ಹೊಂದಲು ಬಯಸುವುದು ಎಂದಿದ್ದಾರೆ.
ಕೆಲವೊಮ್ಮೆ ಮೀಡಿಯಾದಲ್ಲಿ ಬರುವುದು ತಪ್ಪಾಗಿರುತ್ತದೆ ಎಂದಿರುವ ಸ್ಟಾನಿಕ್ ಜಾಯ್, ನಮ್ಮ ಕಡೆಯಿಂದ ಅಂತಹ ಹೇಳಿಕೆಯಾಗಲಿ, ಸೂಚನೆಯಾಗಲಿ ಇಲ್ಲ. ನಾವು ನಮ್ಮೆಲ್ಲಾ ನೆರೆಹೊರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬಯಸುವೆವು ಎಂದು ಅವರು ಸಂದರ್ಶನದಲ್ಲಿ ಸಿಎನೆನ್-ನ್ಯೂಸ್ ೧೮ಗೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನ ಈ ’ಆಂತರಿಕ ಹೋರಾಟ’ಗಳಿಗೆ ಬಳಕೆಯಾಗುವುದಿಲ್ಲ ಎಂದು ತಾಲಿಬಾನ್ ನಾಯಕ ಹೇಳಿದ್ದಾರೆ, ಜೊತೆಗೆ ದಶಕಗಳಿಗೂ ಮೀರಿದ ಪಾಕ್ ಮತ್ತು ಭಾರತದ ರಾಜಕೀಯ-ಭೌಗೋಳಿಕ ಸಮಸ್ಯೆಗಳ ಬಗ್ಗೆ ತಮಗೂ ಗಮನವಿದೆ ಎಂದಿದ್ದಾರೆ.
ಇದಕ್ಕಾಗಿ ಅವರು ವಿಶಾಲ ಗಡಿ ಹೊಂದಿದ್ದು, ಅದರಲ್ಲಿ ಹೋರಾಟ ಮಾಡಬಹುದಾಗಿದೆ, ಅವರು ತಮ್ಮತಮ್ಮಲ್ಲೆ ಹೋರಾಟ ಮಾಡಬಹುದು. ಯಾರೇ ಆಗಲಿ ಅಫ್ಘಾನಿಸ್ತಾನದ ನಮ್ಮ ನೆಲವನ್ನು ಇದಕ್ಕಾಗಿ ಬಳಸುವುದಕ್ಕ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು DNA ವರದಿ ಮಾಡಿದೆ.
Discussion about this post