ಚಿಕ್ಕಮಗಳೂರು : ರಾಷ್ಟ್ರಪತಿ ರಾಮನಾಥ ಕೋವಿಂದ್ ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಆಗಮಿಸಿದ ಶೃಂಗೇರಿ ಮಠದ ವತಿಯಿಂದ ರಾಷ್ಟ್ರಪತಿಗಳಿಗೆ ಸ್ವಾಗತಿಸಲಾಯಿತು.
ಮಂಗಳೂರು ಏರ್ಪೋರ್ಟ್ನಿಂದ ಹೆಲಿಕಾಪ್ಟರ್ ನಲ್ಲಿ ಶೃಂಗೇರಿ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ಶಾರದಾಂಬೆ ದರ್ಶನದ ಬಳಿಕ ಗುರುಗಳ ಆಶೀರ್ವಾದ ಪಡೆದು ನವರಾತ್ರಿ ಉತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾದರು.
ಶ್ರೀಮಠದ ವತಿಯಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಆನೆ, ಆಶ್ವ, ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು ರಾಷ್ಟ್ರಪತಿಗಳು ಸಂಜೆ ೪ಗಂಟೆವರೆಗೂ ಇದ್ದು ನಂತರ ತೆರಳಲಿದ್ದಾರೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಶೃಂಗೇರಿ ಶಾರದಾಂಬಾ ದೇಗುಲಕ್ಕೆ ಭೇಟಿ ನೀಡಿದ ಹಿನ್ನೆಲೆ ಶೃಂಗೇರಿ ಪಟ್ಟಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು ಎನ್.ಎಸ್.ಜಿ. ತಂಡದೊಂದಿಗೆ ೮೦೦-೧೦೦೦ ಪೊಲೀಸರು, ಸ್ಟೇಟ್ ಹಾಗೂ ಸೆಂಟ್ರಲ್ ಇಂಟಲಿಜೆನ್ಸ್ ಪೊಲೀಸರು ಎರಡು ದಿನದಿಂದ ಶೃಂಗೇರಿಗೆಯಲ್ಲಿ ಬಂದೋಬಸ್ತ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಶೃಂಗೇರಿ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ರಾಷ್ಟ್ರಪತಿಗಳು ಸಂಚರಿಸುವ ಕಾನ್ವೆನಲ್ಲಿ ೩೦ ಅಡಿಗೆ ಒಬ್ಬ ಪೊಲೀಸರು ನಿಂತಿದ್ದರು. ಶೃಂಗೇರಿ ಪಟ್ಟಣದ ಮೆಣಸೆ ಹಾಗೂ ಗಾಂಧಿ ಮೈದಾನದಲ್ಲಿ ಎರಡು ಹೆಲಿಪ್ಯಾಡ್ ಗಳನ್ನ ನಿರ್ಮಿಸಲಾಗಿತ್ತು
Discussion about this post