ಚಿಕ್ಕಮಗಳೂರು: ತಾಲೂಕಿನ ಕಾಮೇನಹಳ್ಳಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಬೀಡು ಬಿಟ್ಟು ಗಂಧದ ಮರಗಳನ್ನು ಕಡಿದು ಸಾಗಿಸುವ ಕಳ್ಳರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ರಾತ್ರಿ ಸಮಯದಲ್ಲಿ ಕಳ್ಳತನ ಮಾಡುತ್ತಿದ್ದ ಈ ಗಂಧ ಕಳ್ಳನನ್ನು ತಮಿಳುನಾಡು ಮೂಲದ ರಮೇಶ್ ಎಂದು ಗುರುತಿಸಲಾಗಿದೆ.
ಈತನ ಸಹಪಾಠಿಗಳು ಇನ್ನೂ ಮೂವರು ತಮಿಳುನಾಡು ಮತ್ತು ಆಂಧ್ರಪ್ರದೇಶದ ವ್ಯಕ್ತಿಗಳು ಇದ್ದರು ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುವಾಗ ಕಳ್ಳರು ತಪ್ಪಿಸಿ ಕೊಂಡಿದ್ದಾರೆ.
ಕಳ್ಳರಿದ್ದ ಸ್ಥಳದಿಂದ ಪೊಲೀಸರು 20 ಕೆಜಿ ಗಳಷ್ಟು ಶ್ರೀಗಂಧವನ್ನು ವಶ ಪಡಿಸಿಕೊಂಡಿದ್ದಾರೆ. ಕಳ್ಳರ ತಂಡವು ವ್ಯವಸ್ಥಿತವಾಗಿ ಶ್ರೀಗಂಧದ ಸಾಗಾಣಿಕೆಯಲ್ಲಿ ತೊಡಗಿದ್ದರು, ಹೀಗಾಗಿ ಇವರ ಜಾಲ ದೊಡ್ಡದಿದೆ ಎಂದು ಇಲಾಖೆ ಗಂಭೀರವಾಗಿ ಪ್ರಕರಣವನ್ನು ತೆಗೆದುಕೊಂಡಿದೆ. ಈ ಪ್ರಕರಣದ ಮೂಲಕ ಇನ್ನಷ್ಟು ಕಳ್ಳರ ಬೇಟೆಗೆ ಇಲಾಖೆ ಸಜ್ಜಾಗಿದೆ.
ಸದರಿ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸ್ವಾತಿ, ಸಿಬ್ಬಂದಿಗಳಾದ ವಸಂತ, ನಂದೀಶ್, ಸುನಿಲ್, ಮೊಹಮ್ಮದ್ ಇದ್ದರು.
Discussion about this post