ಟ್ಯುಟಿಕೊರಿನ್: ಎಲ್ಲಾ ಬ್ಯಾಂಕ್ ಗಳು ಡಿಜಿಟಲ್ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಬಡವರು ಮತ್ತು ತಳವರ್ಗದ ಜನರಿಗೆಸುಲಭವಾಗಿ ತಲುಪಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಫೈನಾನ್ಷಿಯಲ್ ಇನ್ ಕ್ಲುಶನ್ ಕಾರ್ಯಕ್ರಮದ ವ್ಯಾಪಿ ವಿಸ್ತರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಸಲಹೆ ನೀಡಿದ್ದಾರೆ. ತಮಿಳುನಾಡಿನ ಮರ್ಕಂಟೈಲ್ ವ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ಆರ್ಥಿಕ ಪರಿಹಾರ ನಿಧಿಯನ್ನು ವಿತರಿಸಲು ಡಿಜಿಟಲ್ ಸಾಧನಗಳು ಸಹಾಯಕ್ಕೆ ಬಂದವು. ಫಲಾನುಭವಿಗಳ ಪರಿಶೀಲನೆಗೂ ಸಹಕಾರಿಯಾಗಿದ್ದುವುದು ಎಂದಿದ್ದಾರೆ. ಕೊವಿಡ್-19 ಪಿಡುಗು ದೇಶವ್ಯಾಪಿ ಹರಡಿಕೊಂಡಿದ್ದಾಗ ಸರ್ಕಾರವು ಮೂರು ಕಂತುಗಳಲ್ಲಿ ₹ 1500 ಕೋಟಿ ನೆರವು ಬಿಡುಗಡೆ ಮಾಡಿತ್ತು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಡಿಜಿಟಲ್ ಆಯಾಮದ ಸ್ಪರ್ಶ ದೊರೆತ ನಂತರ ಸಾಕಷ್ಟು ಬದಲಾವಣೆಗಳು ಕಂಡಿವೆ ಎಂದರು.
ಬ್ಯಾಂಕಿಂಗ್ ಸೇವೆಗಳನ್ನು ಸಣ್ಣ ಹಳ್ಳಿಗಳಿಗೂ ವಿಸ್ತರಿಸಬೇಕು ಹೀಗಾದಾಗ ಟ್ಯುರಿಕೊರಿನಲ್ಲಿದ್ದೇ ಸಣ್ಣ ಹಳ್ಳಿಗಳ ಬ್ಯಾಂಕಿಂಗ್ ಅಗತ್ಯ ಪೂರೈಕೆ ನಡೆಸಬಹುದು ಎಂದು ತಿಳಿಸಿದರು. ಇದೇ ವೇಳೆ, ತಮಿಳ್ನಾಡು ಮರ್ಕಂಟೈಲ್ ಬ್ಯಾಂಕ್ನ ಮಹಿಳಾ ಗ್ರಾಹಕರೊಬ್ಬರಿಗೆ ‘ಪಿಎಂ ಸ್ವನಿಧಿ ಯೋಜನೆ’ಯಡಿ ಆರ್ಥಿಕ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಅವರು, ಇಡ್ಲಿ ವ್ಯಾಪಾರ ಮಾಡುವ ಮಹಿಳೆಯೊಬ್ಬರಿಗೆ ಇಂದು ಆರ್ಥಿಕ ನೆರವು ಬಿಡುಗಡೆ ಮಾಡಲು ನಿಮಗೆ ಸಾಧ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನ ಮಂತ್ರಿ ಜನ್ಧನ್ ಯೋಜನೆ ಒಂದು ವೇಳೆ ಆ ಯೋಜನೆಯೇ ಲಭ್ಯವಿಲ್ಲ ಎಂದಾಗಿದ್ದರೆ ನೀವು ಆ ಮಹಿಳೆಗೆ ಹಣಕಾಸಿನ ನೆರವು ವಿತರಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ.
Discussion about this post