೧೯೮೩ರ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ನೀಡಲಾದ ಶಾಂತಿ, ನ್ಯಾಯ ಮತ್ತು ಸಹಕಾರದ ಸಂದೇಶವನ್ನು ಜಗತ್ತು ಸ್ವೀಕರಿಸಿದ್ದಲ್ಲಿ ೯/೧೧ರ ಭಯೋತ್ಪಾದಕ ದಾಳಿಗಳನ್ನು ತಪ್ಪಿಸಬಹುದಿತ್ತು ಎಂದು ರಾಷ್ಟ್ರಪತಿ ರಾಮಾನಾಥ ಕೋವಿಂದ್ ಉಲ್ಲೇಖಿಸಿದ್ದಾರೆ.
ಪ್ರಯಾಗರಾಜ್ ಎಂಬಲ್ಲಿ ಉತ್ತರ ಪ್ರದೇಶ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲು ಆಗಮಿಸಿದ್ದ ರಾಷ್ಟ್ರಪತಿಗಳು ಭಾಷಣದಲ್ಲಿ ಸ್ವಾಮಿ ವಿವೇಕಾನಂದರ ತತ್ವಗಳ ಕುರಿತು ಉಲ್ಲೇಖಿಸಿದರು.
೧೨೮ ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಭಾರತೀಯ ತತ್ವಶಾಸ್ತ್ರ ಮತ್ತು ಧರ್ಮವನ್ನು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಜಗತ್ತಿನ ಮುಂದೆ ತಂದಿಟ್ಟಿದ್ದರು. ಭಾರತೀಯ ಸಂಸ್ಕೃತಿ ನ್ಯಾಯ, ಸಹಾನುಭೂತಿ, ಸಹಕಾರದ ಮೇಲೆ ನಿಂತಿದೆ ಎಂದು ವಿವರಣೆ ನೀಡಿದರು.
೧೯೮೩ರಲ್ಲಿ ಜಗತ್ತು ಸ್ವಾಮಿ ವಿವೇಕಾನಂದರ ಸಂದೇಶವನ್ನು ಒಪ್ಪಿಕೊಂಡಿದ್ದರೆ, ೯/೧೧/೨೦೦೧ರ ದಾಳಿಗೆ ಜಗತ್ತು ಸಾಕ್ಷಿಯಾಗಬೇಕಿರಲಿಲ್ಲ. ಅದು ಮಾನವೀಯತೆಯ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ.
ಇದೇ ಸಂದರ್ಭ ಸಾಮಾಜಿಕ ನ್ಯಾಯದ ಅಗತ್ಯವನ್ನು ಒತ್ತಿ ಹೇಳಿದ ರಾಷ್ಟ್ರಪತಿಗಳು, ಅಲಹಾಬಾದ್ ಹೈಕೋರ್ಟ್ ಮತ್ತು ಕಾನೂನು ಪ್ರಕಾಶಿಸುವವರು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ, ಬೌದ್ಧಿಕ ಸಂಪ್ರದಾಯಕ್ಕೆ ಅದು ನೀಡಿದ ಕೊಡುಗೆಯನ್ನು ವಿವರಿಸಿದರು.
Discussion about this post