ಚಿಕ್ಕಮಗಳೂರು: ನಮಗೆ ದೊರೆತಿರುವ ಜವಾಬ್ದಾರಿಯುತ ಸ್ಥಾನದ ಸದ್ಬಳಕೆ ಮಾಡಿಕೊಂಡು ನಾವು ನಿರಂತರವಾಗಿ ಹೋರಾಟ ನಡೆಸಿದ ದತ್ತಪೀಠದ ಮುಕ್ತಿಗೆ ನಿರ್ಣಯ ರೂಪದಲ್ಲಿ ಸರ್ಕಾರದಿಂದ ದೊರೆಯಬಹುದಾದ ನ್ಯಾಯಕ್ಕಾಗಿ ಒಗ್ಗಟ್ಟಾಗಿ ಹೋರಾಟ ನಡೆಸಲು ಸಿದ್ದರಿದ್ದೇವೆ ಎಂದು ಇಂದಿನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಎಂದು ಸ್ನೇಹಿತರ ಬಳಗ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ನಗರದಲ್ಲಿ ತಮ್ಮ ಆರಂಭಿಕ ಹೋರಾಟಗಳ ಸಿಹಿ ಕಹಿ ಘಟನೆಗಳನ್ನು ಮೆಲುಕು ಹಾಕಿದರು.
ರೋಚಕತೆ,ಆತ್ಮೀಯತೆ ಮೂಡಿಸುತ್ತಿದ್ದ ಸಂಘರ್ಷದ ದಿನಗಳಲ್ಲಿ ನಮ್ಮಲ್ಲಿ ಏನೂ ಇಲ್ಲ ಎನ್ನುವ ಪರಿಸ್ಥಿತಿ ಇದ್ದರೂ ಎಲ್ಲವೂ ಇದೆ ಎನ್ನುವ ಭಾವನೆ ಇತ್ತು ಎಂದು ಹೇಳಿದ ಅವರು ಹೋರಾಟಗಳಲ್ಲಿ ತೊಡಗಿಸಿಕೊಂಡ ನಮ್ಮನ್ನು ಪೊಲೀಸರು ಬಂಧನಕ್ಕೊಳ ಪಡಿಸುತ್ತಿದ್ದರು ನಮ್ಮನ್ನು ಬಿಡಿಸಲು ಯಾರು ಇಲ್ಲ ಎಂಬ ಸತ್ಯ ತಿಳಿದಿದ್ದರೂ ನಾವು ಮತ್ತೆ ಮತ್ತೆ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಧೃತಿಗೆಡಲಿಲ್ಲ ಎಂದು ತಮ್ಮ ಹೋರಾಟದ ಅನುಭವಗಳನ್ನು ಹಂಚಿಕೊಂಡರು.
ಚಿಕ್ಕಮಗಳೂರು ನಗರದಲ್ಲಿ ಕಂಬಗಳಿಗೆ ಬಾವುಟಗಳನ್ನು ಕಟ್ಟುತ್ತಿದ್ದ, ಮೈಕ್ಗಳನ್ನು ಕಟ್ಟಿ ಉದ್ಘೋಷ ಮಾಡುತ್ತಿದ್ದದ್ದು, ವೇದಿಕೆಗಳ ನಿರ್ಮಾಣ,ಮುಗಿದ ನಂತರ ವೇದಿಕೆಗಳನ್ನು ತಾವೇ ತೆರವುಗೊಳಿಸುತ್ತಿದ್ದ ವಿಚಾರಗಳನ್ನು ಹಂಚಿಕೊಂಡರು .
ರಾಷ್ಟ್ರೀಯತೆ, ದೇಶಾಭಿಮಾನದ ಸೆಳೆತ ನಮ್ಮನ್ನು ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸುತ್ತಿತ್ತು ನಾವು ಒಂದು ಹೋರಾಟದಿಂದ ಈ ಮಟ್ಟಕ್ಕೆ ಬೆಳೆದಿಲ್ಲ ಹತ್ತಾರು ಹೋರಾಟಗಳು ನಮ್ಮನ್ನು ಇಂತಹ ಉನ್ನತ ಜವಾಬ್ದಾರಿಯುತ ಸ್ಥಾನಕ್ಕೆ ತಲುಪಿಸಿದೆ ಎಂದು ಹೇಳಿದರು.
ದತ್ತಪೀಠದ ಮುಕ್ತಿಗೆ ನಾವು ನಡೆಸಿದ ಹೋರಾಟದ ಫಲವಾಗಿ ಇಂದು ಶಾಸಕರಾಗಿ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದೇವೆ ಅದೇ ಕಾರಣಕ್ಕೆ ನನ್ನ ಮಗನಿಗೂ ದತ್ತಾತ್ರೇಯ ಎಂದು ಹೆಸರಿಟ್ಟಿದ್ದೇನೆ ಎಂದು ಹೇಳಿದರು.
ನಮ್ಮ ಹೋರಾಟದ ಸಂದರ್ಭದಲ್ಲಿ ನನಗೆ ಚಹಾ ನೀಡಿ ಸಹಕರಿಸಿದ ಸಣ್ಣ ದಾನಿಯಿಂದ ಹಿಡಿದು ಸಾವಿರ ರೂಪಾಯಿಗಳ ದೇಣಿಗೆ ನೀಡಿದ ದೊಡ್ಡ ದೇಣಿಗೆ ದಾರರು ಸಹ ನಮ್ಮ ಉನ್ನತಿಗೆ ಕಾರಣರು ಎಂದು ಹೇಳಿವ ಮೂಲಕ ಸಹಕಾರ ನೀಡಿದವರನ್ನು ನೆನಪಿಸಿಕೊಂಡರು..
ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ ನಾವು ಹೋರಾಟ ನಡೆಸುವ ಸಂದರ್ಭದಲ್ಲಿ ನಮ್ಮನ್ನು ಬಿಜೆಪಿಯ ಹುಚ್ಚ ಎಂದು ಕರೆದಿದ್ದರು ಆದರೆ ನನಗೆ ಹಿಡಿದಿದ್ದು ಹಿಂದುತ್ವದ ಹುಚ್ಚು,ರಾಷ್ಟ್ರವಾದದ ಹುಚ್ಚು ಆದರೆ ನಮ್ಮದು ಅಧಿಕಾರದ ಹುಚ್ಚಲ್ಲ ಎಂದು ಹೇಳಿದರು.
ಹೋರಾಟದಲ್ಲಿ ಸಹಾಯ ಮಾಡಿದವರ್ಯಾರು ಇಂದು ನಮ್ಮೊಂದಿಗಿಲ್ಲ. ಅವರು ನಮಗೆ ಅಧಿಕಾರ ಬಂದಾಗ ಹತ್ತಿರವೂ ಬರಲಿಲ್ಲ ಎಂದು ಹೇಳಿದ ಅವರು ಅಧಿಕಾರ ಬಂದಾಗ ಬಹುಪರಾಕ್ ಹೇಳುವ ಜನ ಇರುತ್ತಾರೆ. ನಮ್ಮ ಅಗತ್ಯತೆಗಳ ಬಗ್ಗೆ ಮನಃಶಾಸ್ತ್ರದ ಜ್ಞಾನಿ ಗಳಂತೆ ತಿಳಿದು ನಮಗೆ ಪೂರೈಸಿ ನಮನ್ನು ತಾಜ ಮಾಡುವ ಪ್ರಯತ್ನ ಮಾಡುತ್ತಾರೆ ಅವರ ಬಗ್ಗೆ ಎಚ್ಚರವಹಿಸಬೇಕೆಂದು ಕಿವಿಮಾತು ಹೇಳಿದರು.
ಅಧಿಕಾರ ಶಾಶ್ವತವಲ್ಲ ನಾವು ವಿಚಾರದ ಪ್ರತಿನಿಧಿಗಳು ಅವಕಾಶದ ಸಿಕ್ಕಾಗ ನಮ್ಮ ವಿಚಾರಗಳನ್ನು ಗಟ್ಟಿಗೊಳಿಸು, ಜನರ ಭಾವನೆಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಸಿ ಸುರೇಶ್ ಹಿರಿಯ ಪತ್ರಕರ್ತ ಗಿರಿಜಾಶಂಕರ್ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರಡಪ್ಪ ಸೇರಿದಂತೆ ಹಲವರು ತಮ್ಮ ಹೋರಾಟದ ದಿನಗಳ ಅನುಭವಗಳನ್ನು ಹಂಚಿಕೊಂಡರು ಈ ಕಾರ್ಯಕ್ರಮದ ನಿರೂಪಣೆಯನ್ನು ರೂಪ ನಾಯಕ್ ನಿರ್ವಹಿಸಿದರು

























Discussion about this post