ನವದೆಹಲಿ: 2019ರ ಏಕದಿನ (ಒಡಿಐ) ಕ್ರಿಕೆಟ್ ವಿಶ್ವಕಪ್ನ ಭಾರತದ ತಂಡದಿಂದ ಅಂಬಟಿ ರಾಯ್ದುವನ್ನು ಹೊರಗಿರಿಸುವ ಕುರಿತು ನಾನು ಏನೂ ಹೇಳಿರಲಿಲ್ಲ. ತಂಡದಲ್ಲಿ ಮೂವರು ಬ್ಯಾಟ್ಸಮೆನ್ ಮತ್ತು ವಿಕೆಟ್ ಕೀಪರ್ಗಳನ್ನು ಹೊಂದಿದ್ದರ ಹಿಂದೆ ತರ್ಕ ಇದೆ ಎನಿಸಿತ್ತು ಎಂದು ಆಗ ಕೋಚ್ ಆಗಿದ್ದ ರವಿಶಾಸ್ತ್ರಿ ಇತ್ತೀಚೆಗೆ ಹೇಳಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮಾಜಿ ಸದಸ್ಯ ಸರನ್ದೀಪ್ ಸಿಂಗ್, ಕೋಚ್ ಏನನ್ನೂ ಹೇಳಿರಲಿಲ್ಲ ಎಂಬುದನ್ನು ಒಪ್ಪುವೆ. ಆದರೆ, ಆಯ್ಕೆ ಸಮಿತಿಯ ನಿರ್ಣಯದಲ್ಲಿ ಕೋಚ್ ಮತ್ತು ತಂಡದ ನಾಯಕನ ಅಭಿಪ್ರಾಯಕ್ಕೆ ಮಹತ್ವ ಇರುತ್ತದೆ ಎಂದಿದ್ದಾರೆ. 2019ರ ಒಡಿಐ ವಿಶ್ವಕಪ್ ತಂಡವನ್ನು ಮಾಜಿ ಕ್ರಿಕೆಟಿಗ ಎಂಎಸ್ಕೆ ಪ್ರಸಾದ್ ನೇತೃತ್ವದ ಸಮಿತಿ ಆಯ್ಕೆ ಮಾಡಿತ್ತು. ಈ ಸಮಿತಿಯಲ್ಲಿ ಉತ್ತರ ವಲಯದ ಪ್ರತಿನಿಧಿಯಾಗಿ ಸರನ್ದೀಪ್ ಸಿಂಗ್ ಕೂಡ ಇದ್ದರು. ಈ ಸಮಿತಿಯು ಮೂವರು ವಿಕೆಟ್ ಕೀಪರ್ ಮತ್ತು ಬ್ಯಾಟ್ಸಮೆನ್ಗಳಾದ ಎಂ.ಎಸ್.ದೋನಿ, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಇರಿಂದಾಗಿ ಅಂಬಟಿ ರಾಯ್ಡು ತಂಡವನ್ನು ಸೇರಲು ಆಗಿರಲಿಲ್ಲ.
‘ತಂಡದ ಆಯ್ಕೆ ಸಭೆಯಲ್ಲಿ ರವಿಶಾಸ್ತ್ರಿ ಏನನ್ನೂ ಹೇಳಿರಲಿಲ್ಲ. ಆದರೆ, ಆಯ್ಕೆ ಸಮಿತಿಯ ಸದಸ್ಯರು ತಂಡವನ್ನು ಆಯ್ಕೆ ಮಾಡುವುದಕ್ಕೂ ಮುನ್ನ ನಾಯಕ ಮತ್ತು ಮುಖ್ಯು ಕೋಚ್ ಅವರನ್ನು ಸಂಪರ್ಕಿಸಿ ಚರ್ಚಿಸಿತ್ತು. ಯಾವರೀತಿಯ ತಂಡ ಇರಬೇಕು, ತಂಡದಲ್ಲಿ ಯಾವ ಯಾವ ಆಟಗಾರು ಇರಬೇಕೆದು ಬಯಸಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಇರುವ ಪ್ರತಿಭಾವಂತರು ಯಾರು ಎಂದು ಕೇಳಿತ್ತು. ಆಗ ರವಿಶಾಸ್ತ್ರಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಬಹುದಿತ್ತು. ನಾಯಕ ವಿರಾಟ್ ಕೊಯ್ಲಿಗೂ ಈ ಬಗ್ಗೆ ಹೇಳಬಹುದಿತ್ತು ತಂಡದ ಆಯ್ಕೆ ವಿಷಯದಲ್ಲಿ ಸಮಿತಿಯು ಬೇರೆಯದ್ದೆ ನಿಲುವನ್ನು ಹೊಂದಿರಬಹುದು. ಆದರೆ, ಕೋಚ್ ಮತ್ತು ನಾಯಕನ ಅಭಿಪ್ರಾಯ ಇದಕ್ಕೆ ಭಿನ್ನವಾಗಿದ್ದರೆ ಮತ್ತು ಅದು ಸಮರ್ಥನೀಯವಾಗಿದ್ದರೆ ಅದನ್ನು ಪರಿಗಣಿಸಬೇಕಾಗುತ್ತದೆ. ನಾಲ್ಕು ವರ್ಷದಿಂದ ರವಿಶಾಸ್ತ್ರಿ ಬಗ್ಗೆ ಸಮಿತಿಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಅವರು ಉತ್ತಮ ಕೋಚ್ ಆಗಿದ್ದರು ಎಂದು ಸರನ್ದೀಪ್ ಸಿಂಗ್ ಹೇಳಿದ್ದಾರೆ.
ಟಿ-20 ಕ್ರಿಕೆಟ್ ವಿಶ್ವಕಪ್ ಬಳಿಕ ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈಗ ಆ ಹುದ್ದೆಗೆ ಕನ್ನಡಿಗ ಮತ್ತು ದೇಶಿಯ ಹಾಗೂ ಅಂತರಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಹತ್ತರ ಸಾಧನೆಗಳನ್ನು ಮಾಡಿರುವ ರಾಹುಲ್ ಡ್ರಾವಿಡ್ ಬಂದಿದ್ದಾರೆ.
Former Selector Reacts To Ravi Shastri’s Comments About India’s 2019 World Cup Squad Selection
ಇದನ್ನು ಓದಿ: ಏಕದಿನ ಕ್ರಿಕೆಟ್: ಟೀಂ ಇಂಡಿಯಾ ನಾಯಕತ್ವ ಬಿಟ್ಟುಕೊಡಲು ನಿರಾಕರಿಸಿದ್ದರೇ ಕಿಂಗ್ ಕೊಹ್ಲಿ?
ಇದನ್ನೂ ಓದಿ: ವಿಶ್ವಕಪ್ನಿಂದ ಟೀಂ ಇಂಡಿಯಾ ಔಟ್: ನಿರ್ಗಮಿತ ಕೋಚ್ ರವಿ ಶಾಸ್ತ್ರಿ ಕೊಟ್ಟ ಕಾರಣಗಳೇನು?
Discussion about this post