ಮೈಸೂರು: ಸೆಫ್ಟೆಂಬರ್ ೯ ರಿಂದ ನವರಾತ್ರಿ ಶುರುವಾಗಲಿದೆ, ಆದರೆ ಈ ಬಾರಿಯೂ ಜಂಬೂ ಸವಾರಿಗೆ ಕೊರೊನಾ ಆತಂಕ ಇದ್ದೇ ಇದೆ. ದಸರೆಯನ್ನು ಕಳೆದ ಬಾರಿ ಆತಂಕದ ಹಿನ್ನೇಲೆಯಿಂದಲೇ ಸರಳವಾಗಿ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಜಂಬೂ ಸವಾರಿಯೂ ಎಂದಿನಂತೆ ಸಾರ್ವಜನಿಕವಾಗಿ ನಡೆಯದೆ, ಅರಮನೆಯ ಆವರಣಕ್ಕೆ ಮಾತ್ರ ಸೀಮಿತವಾಗಿಸಲಾಗಿತ್ತು.
ದಸರೆಯನ್ನು ಈ ಬಾರಿ ಹೇಗೆ ಆಚರಿಸುವುದು ಎಂಬುದರ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ ೩ರಂದು ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು, ಸಿಎಂ ಜೊತೆಗಿನ ಸಭೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.
ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳು, ಶಾಸಕರು, ಸಚಿವರು ಸೇರಿದಂತೆ, ಅಧಿಕಾರಿ ವರ್ಗ ಭಾಗವಹಿಸಲಿದೆ. ಕೊರೊನಾ ೩ನೇ ಅಲೆಯ ಪ್ರಭಾವ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ವರದಿ ನೀಡಿರುವ ಹಿನ್ನೇಲೆಯಲ್ಲಿ ಬಹುಶಃ ವಿಶ್ವವಿಖ್ಯಾತ ದಸರೆಯ ಜಂಬೂ ಸವಾರಿಗೆ ಅನುಮತಿ ಸಿಗುವುದು ಇನ್ನೂ ಖಚಿತವಾಗಬೇಕಿದೆ.
ಸೆಪ್ಟೆಂಬರ್ ೩ರ ಮಹತ್ವದ ಸಭೆಯ ನಂತರವಷ್ಟೇ ಉತ್ತರ ಖಚಿತವಾಗಲಿದ್ದು, ಜಂಬೂ ಸವಾರಿಯ ಸಾರ್ವಜನಿಕವಾಗಿ ವೀಕ್ಷಣೆಗೆ ಸಿಗದೆ ಅರಮನೆಯ ಆವರಣದಲ್ಲಿ ಮಾತ್ರ ನಡೆಯುವುದೇ ಎಂಬುದರ ಕುರಿತು ಮಾಹಿತಿ ಸಿಗುವುದು.
Discussion about this post