News: ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ, ಆಗಾಗ ತಮ್ಮ ಜೀವ ಪಣಕ್ಕಿಟ್ಟು ವೀಡಿಯೋಗಳನ್ನು ಮಾಡುತ್ತಿರುತ್ತಾರೆ. ಇವರ ವೀಡಿಯೋಗಳು ಥ್ರಿಲ್ಲಿಂಗ್ ಆಗಿರೋದು ಅಲ್ಲದೇ, ಉತ್ತಮ ಸಂದೇಶ ನೀಡುವ ವೀಡಿಯೋಗಳು ಇರುತ್ತದೆ. ಅಲ್ಲದೇ ಕೆಲವು ಸಲ ಫನ್ನಿ ಕಂಟೆಂಟ್ನ್ನು ವಿಕಾಸ್ ಅಪ್ಲೋಡ್ ಮಾಡ್ತಾರೆ.
ವಿಕಾಸ್ 1 ಸಲ ಮಂಗಳಮುಖಿ ವೇಷ ಧರಿಸಿ, ಹಲವು ಕಡೆ ಕೆಲಸ ಬೇಕೆಂದು ಕೇಳಿದ್ದರು. ಆದರೆ ಅವರಿಗೆ ಸ್ವಲ್ಪವೇ ಸ್ವಲ್ಪ ಹಣ ಸಿಕ್ಕಿದ್ದು ಬಿಟ್ಟರೆ, ಅವರಿಗೆ ಯಾರೂ ಕೆಲಸ ನೀಡಲೇ ಇಲ್ಲ. ಈ ರೀತಿ ಮಂಗಳಮುಖಿಯರು ಕೆಲಸ ಹುಡುಕಿದರೂ, ಮಾಡುತ್ತೇವೆ ಅಂದರೂ ಅವರಿಗೆ ಯಾರೂ ಸಹಾಯ ಮಾಡುವವರಿಲ್ಲ ಎಂದು ವಿಕಾಸ್ ಬೇಸರ ವ್ಯಕ್ತಪಡಿಸಿದ್ದರು.

ಇನ್ನು ಸೆಲೆಬ್ರಿಟಿಗಳ ಮನೆಗೆ ಹೋಗಿ, ಮನೆ ನೋಡೋಕ್ಕೆ, ಊಟ ಮಾಡೋಕ್ಕೆಲ್ಲ ಟ್ರೈ ಮಾಡಿದ ಫನ್ನಿ ಇನ್ಸಿಡೆಂಟ್ಗಳೂ ಇದೆ. ಅಲ್ಲದೇ ಮೆಜೆಸ್ಟಿಕ್ ಬಳಿ ಹೋಗಿ, ಅಲ್ಲಿನ ವೇಶ್ಯಾವಾಟಿಕೆ ದಂಧೆ, ಮಂಗಳಮುಖಿಯರ ರೌಡಿಸಂ ಎಲ್ಲವನ್ನೂ ವಿಕಾಸ್ ರೆಕಾರ್ಡ್ ಮಾಡಿ, ಸಿಕ್ಕಿಬಿದ್ದಿದ್ದರು. ಅವರ ಮೇಲೆ ಹಲ್ಲೆ ಪ್ರಯತ್ನ ಕೂಡ ನಡೆದಿತ್ತು.
ಇದೀಗ ವಿಕಾಸ್, ಮುಂಬೈನ ಕಾಮಾಟಿಪುರಕ್ಕೆ ಹೋಗಿ, ಅಲ್ಲಿನ ಕರಾಳ ಮುಖವನ್ನು ಬಯಲು ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು ಈ ಕೆಲಸ ಮಾಡಲು ಹೋಗಿದ್ದರೂ, ಜಾಣತನದಿಂದ ಆಚೆ ಬಂದಿದ್ದು ಮಾತ್ರ ಉತ್ತಮ ವಿಷಯ. ರೆಡ್ ಲೈಟ್ ಏರಿಯಾದಲ್ಲಿ ಯಾರಿಗೂ ತಿಳಿಯದ ಹಾಗೆ ವೀಡಿಯೋ ಮಾಡಿ, ಅಲ್ಲಿನ ಸ್ಥಿತಿಯನ್ನು ಹೇಳಿ ವ್ಲಾಗ್ ಮಾಡಿದ್ದಾರೆ.

ಆದರೆ ವಿಕಾಸ್ ಅವರಿಗೆ ಅಲ್ಲಿ ಪರಿಚಯವಾಗಿದ್ದ ಬ್ರೋಕರ್, ನಾನು ಕನ್ನಡಿಗ, ನಾನು ನಿಮಗೆ ಮೋಸ ಮಾಡುವುದಿಲ್ಲ. ಸೂಪರ್ ಆಗಿರುವ ಹುಡುಗಿಯರು ಇದ್ದಾರೆ ಎಂದು ಹೇಳಿದ್ದ. ಅಲ್ಲಿ ಯಾವ ರೀತಿ ದಂಧೆ ನಡೆಯುತ್ತೆ ಅನ್ನೋದನ್ನು ಡೀಪ್ ಆಗಿ ಹೇಳಲು ಹೋಗಿದ್ದ ವಿಕಾಸ್ಗೆ ಕೆಟ್ಟ ಅನುಭವವೇ ಆಗಿದೆ. ಆದರೆ ಜಾಣತನದಿಂದ ಅವರ ಜೀವ ಉಳಿದಿದೆ. ಮತ್ತು ಅವರು ಪಾರಾಗಿ ವಾಪಸ್ ಆಗಿದ್ದಾರೆ.
ನಾನೂ ಕನ್ನಡಿಗ, ಮೋಸ ಮಾಡೋದಿಲ್ಲಾ ಅಂತಾ ಕರೆದುಕ“ಂಡು ಹೋದ ವ್ಯಕ್ತಿ, ಯಾವುದೇ ಮೂಲೆಯ ಜಾಗಕ್ಕೆ ಕರೆದ“ಯ್ದು ಅಲ್ಲಿನ ಜನರ ಜತೆ ಸೇರಿ, ವಿಕಾಸ್ ಬ್ಯಾಗ್ ಕಿತ್ತುಕ“ಂಡು, ಅದರಲ್ಲಿ ಏನೇನಿದೆ ಎಂದು ಚೆಕ್ ಮಾಡಿದ್ದಾರೆ. ಅಲ್ಲದೇ, ಆತನ ಫೋನ್ಪೇನಲ್ಲಿ ಎಷ್ಟು ಹಣವಿದೆ ಎಂದು ಫೋರ್ಸ್ಫುಲ್ಲಿ ನೋಡಿ, 1,700 ರೂಪಾಯಿ ಪೀಕಿದ್ದಾರೆ.

ಈ ವೇಳೆ ವಿಕಾಸ್ಗೆ ನೂಕಿದ್ದು, ಕಾಲಿಗೆ ಪೆಟ್ಟು ಬಿದ್ದು, ರಕ್ತ ಬಂದಿದೆ. ಆದರೆ ವಿಕಾಸ್ ಮಾಡಿದ ಜಾಣತನ, ಮುಂದಾಲೋಚನೆ ಅವರನ್ನು ಕಾಪಾಡಿದೆ. ವಿಕಾಸ್ ತಮ್ಮ ಬ್ಯಾಗ್ನಲ್ಲಿ ಸ್ವಲ್ಪ ಫೈಲ್ಸ್ ಇಟ್ಟುಕ`ಂಡಿದ್ದರು. ಅದನ್ನು ತೋರಿಸಿ, ನಾನು ಮುಂಬೈಗೆ ಕೆಲಸದ ಸಂದರ್ಶನಕ್ಕಾಗಿ ಬಂದಿದ್ದೇನೆ. ನನ್ನ ಬಳಿ ಹೆಚ್ಚು ಹಣವಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ಕೇಳಿದ್ದಾರೆ. ಅಲ್ಲಿನ ಜನ ಹಣ ಪೀಕಿ, ಕಳುಹಿಸಿದ್ದಾರೆ.
ಹಾಗಾಗಿ ಅವರೇನಾದರೂ ನನ್ನ ಸೆಲ್ ಫೋನ್ ಚೆಕ್ ಮಾಡಿದ್ರೆ, ನಾನು ಇಲ್ಲೇ ಇರ್ಬೇಕಿತ್ತು. ನಾನು ಬರೋದೇ ಕಷ್ಟವಾಗುತ್ತಿತ್ತು. ನನಗೆ ಹೆದರಿಕೆಯಾದರೂ ಇಲ್ಲಿನ ಪರಿಸ್ಥಿತಿ ತೋರಿಸಲು ನಾನು ಪ್ರಯತ್ನಿಸಿದ್ದೇನೆ ಎಂದು ವಿಕಾಸ್ ಹೇಳಿದ್ದಾರೆ.

























Discussion about this post