ಬೆಂಗಳೂರು: ವಿಧಾನಸೌಧದ ತಳಮಹಡಿಯಲ್ಲಿ ಇರುವಂತಹ ವರಾಂಡ ಕುಸಿದಿದ್ದು, ಇದರ ಬಗ್ಗೆ ಗಮನಹರಿಸಿಲ್ಲದಿರುವುದು ಕಳವಳಕಾರಿ ಅಂಶವಾಗಿದೆ.
ಇಷ್ಟೇ ಅಲ್ಲದೆ, ವಿಧಾನಸೌಧ ಕೆಂಗಲ್ ಹನುಮಂತಪ್ಪ ದ್ವಾರದ ಎದುರಿನಲ್ಲಿ ಇರುವ ರಸ್ತೆಯಲ್ಲಿ ಡಾಂಬರು ಕುಸಿದಿದೆ. ಇದರಿಂದಾಗಿ ಗುಂಡಿ ನಿರ್ಮಾಣ ಆಗಿದೆ.
ಮತ್ತೊಂದು ವಿಚಾರ ಏನೆಂದರೆ ನೆಲಮಹಡಿಯಲ್ಲೇ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ತಿರದಲ್ಲೇ ನೆಲ ಕುಸಿದಿರುವುದು ಕಂಡು ಬಂದರೂ ದುರಸ್ತಿ ಕಾರ್ಯ ನಡೆದಿಲ್ಲ.
ಸದರಿ ವಿಚಾರವನ್ನು ಕ್ಯಾಂಟಿನ್ ಗುತ್ತಿಗೆದಾರರ ಸಿಬ್ಬಂದಿ, ಆಡಳಿತ ವರ್ಗ ಇಲಾಖೆಯ ಗಮನಕ್ಕೆ ತಂದಿದೆ. ಅಲ್ಲಿಯವರೆಗೂ AEE ಗಮನಕ್ಕೆ ಬಂದೇ ಇಲ್ಲ.
DPAR ನ ಸರ್ಕಾರದ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿರುವ ಕ್ಯಾಂಟೀನ್ ಗುತ್ತಿಗೆದಾರರು, ತಕ್ಷಣವೇ ದುರಸ್ತೆ ಕಾರ್ಯ ಜರೂರಾಗಿ ನಡೆಯಬೇಕೆಂದು ಇಲ್ಲದಿದ್ದಲ್ಲಿ ಓಡಾಟಕ್ಕೆ ಇನ್ನಷ್ಟು ತೊಂದರೆಯಾಗುವುದು ಎಂದು ತಿಳಿಸಿದ್ದಾರೆ.
DPARನ ಸರ್ಕಾರದ ಕಾರ್ಯದರ್ಶಿ ತಳಮಹಡಿಯ ಉಪಹಾರ ಮಂದಿರದ ಬಳಿ ನಡೆದಿರುವ ಕುಸಿತವನ್ನು ಸರಿಪಡಿಸಲು ಕ್ರಮ ಕೈಗೊಳ್ಳಲು PWD ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೆ. ೧೭ ೨೦೨೧ರಂದು ಪತ್ರ ಬರೆದಿದ್ದಾರೆ.
ತಳಮಹಡಿಯ ಕ್ಯಾಂಟೀನ್ ಕುಸಿತ ಸಮಸ್ಯೆ ಹೆಚ್ಚುವ ಹಾಗೆ ತೋರುತ್ತಿದೆ, ಏಕೆಂದರೆ ಅಲ್ಲಿ ದಿನಕ್ಕೆ ೫೦೦ಕ್ಕೂ ಹೆಚ್ಚು ಮಂದಿ ಉಪಹಾರ ಸೇವನೆ,ಕಾಫಿ ಚಹ ಸೇವನೆ ಬಂದೇ ಬರುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದಲೂ ಬಂದವರು ಆಗಮಿಸುತ್ತಾರೆ.
ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ, ಪಿಡಬ್ಲು ಡಿ ಸಚಿವ ಸಿಸಿ ಪಾಟೀಲ್ ಈ ಕುರಿತು ಬೇಗ ಅಗತ್ಯ ಕ್ರಮ ಕೈಗೊಳ್ಳುವರೇ ಎಂದು ಕಾಯ್ದು ನೋಡಬೇಕಿದೆ.

























Discussion about this post