ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗಲಿದೆ ಎನ್ನುವ ಗಾಳಿಸುದ್ದಿಯನ್ನು ಕೋವಿಡ್ ತಾಂತ್ರಿಕ ಸಮಿತಿ ತಳ್ಳಿಹಾಕಿದೆ. ಕರ್ನಾಟಕದಲ್ಲಿ ಮತ್ತೊಂದು ಲಾಕ್ ಡೌನ್ ಮಾಡುವ ಯಾವ ಪ್ರಸ್ತಾವನೆಯೂ ಇಲ್ಲ ಎಂದು ಗುರುವಾರ ಹೇಳಿದೆ. ಬೆಂಗಳೂರಲ್ಲಿ ಡೆಲ್ಟಾವೈರಸ್ನ ಮನ್ವಂತರ ರೂಪ ಏವೈ 4.2 ವೈರಾಣುವಿನ ಎರಡು ಪ್ರಕರಣಗಳು ದೃಢಪಟ್ಟಿದ ಹಿನ್ನೆಲೆಯಲ್ಲಿ ಸಮತಿ ಈ ರೀತಿ ಹೇಳಿಕೆ ನೀಡಿದೆ.
ಹೊಸ ರೂಪದ ವೈರಾಣುಪತ್ತೆಯಾಗಿರುವುದರಿಂದ ತಾಂತ್ರಿಕ ಸಮಿತಿ ಲಾಕ್ ಡೌನ್ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆಶಿಫಾರಸ್ಸು ಮಾಡಿದೆ ಎನ್ನುವುದು ಸುಳ್ಳುಸುದ್ದಿ. ಈ ರೀತಿಯ ಸುಳ್ಳು ಮಾಹಿತಿಯನ್ನು ಹಬ್ಬಿಸುವುದರ ಮೂಲಕ ಜನರಲ್ಲಿ ಗೊಂದಲ,ಆತಂಕ ಮೂಡಿಸಬಾರದು ಎಂದು ಕೋವಿಡ್ ತಾಂತ್ರಿಕ ಸಮಿಯ ಅಧ್ಯಕ್ಷ ಡಾ.ಎಂ.ಕೆ. ಮಧುಸೂದನ್ ಹೇಳಿಕೆ ನೀಡಿದ್ದಾರೆ.
ಹೊಸ ತಳಿಯ ವೈರಾಣ ರಾಜ್ಯದಲ್ಲಿ ವರದಿಯಾಗಿರುವುದನ್ನು ಒಪ್ಪಿಕೊಂಡ ಅವರು, ದೇಶದಲ್ಲಿ ಡೆಲ್ಟಾ ಹೊಸತಳಿ ಏವೈ4.2 ವಾರಾಣು 17 ಜನಕ್ಕೆ ಹರಡಿರುವುದು ಸತ್ಯ. ಅದರಲ್ಲಿ ಇಬ್ಬರ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ. ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದವರು ಕೂಡ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈವಿಚಾರದಲ್ಲಿ ಯಾರೂ ಕೂಡ ಭಯ ಬೀಳುವ ಅಗತ್ಯವಿಲ್ಲ ಎಂದು ಸುದರ್ಶನ್ ಹೇಳಿದರು.
ಮಕ್ಕಳನ್ನು ಶಾಲೆಗೆ ಕಳಿಸಲು ಆತಂಕ ಬೇಡ
ಇದೇ ಸಂದರ್ಭದಲ್ಲಿ ಸುದರ್ಶನ್, ಯಾವ ಕಾರಣಕ್ಕೂ ಹೆತ್ತವರು ಆತಂಕಕ್ಕೆ ಒಳಗಾಗದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು. ನಮ್ಮ ವೈದ್ಯಕೀಯ ತಂಡವು ಕೋವಿಡ್ ವೈರಾಣು ಹರಡುವಿಕೆಯ ಬಗ್ಗೆ ಹದ್ದಿನಗಣ್ಣು ಇಟ್ಟಿದೆ. ರಾಜ್ಯದಲ್ಲಿ ಎಲ್ಲಾ ವಯೋಮಾನದವರ ಪಾಸಿಟಿವ್ ರೇಟ್ .03 ಇದೆ. ಮಕ್ಕಳಲ್ಲಿ 0.13ನಷ್ಟು ಇದೆ ಎಂದು ವಿವರಣೆ ನೀಡಿದರು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಂಗಳವಾರ, ಹೊಸ ತಳಿಯ ಬಗ್ಗೆ ಭಾರತೀಯ ವೈದಕೀಯ ಸಂಶೋಧನಾ ಸಂಸ್ಥೆಯ ಸಲಹೆ ಪಡೆಯಬೇಕು ಎಂದು ಹೇಳಿದ್ದರು.
There is no proposal to lockdown in Karnataka Says Expert Committee
ಇದನ್ನೂ ಓದಿ: Corona: ದೀಪಾವಳಿ ಬಳಿಕ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ
Discussion about this post