ನವದೆಹಲಿ: ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬಿಟ್ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಸಂದರ್ಭದಲ್ಲಿ ಯವುದೇ ಚರ್ಚೆ ನಡೆಯಲಿಲ್ಲ. ಆದರೆ, ಈ ವಿಚಾರದ ಬಗ್ಗೆ ನಮಗಿಂತ ಅಮಿತ್ ಶಾ ಹೆಚ್ಚಿನ ಮಾಹಿತಿ ಹೊಂದಿರುವಂತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘ಪ್ರಧಾನಿಯವರ ಭೇಟಿ ವೇಳೆ ಬಿಟ್ಕಾಯಿನ್ ಕುರಿತಂತೆ ನಾನೇ ಮಾತನಾಡಲು ಮುಂದಾಗಿದ್ದೆ. ಆದರೆ, ಅವರೇ ಈ ವಿಷಯವನ್ನು ಹೆಚ್ಚು ಬೆಳೆಸಲು ಇಚ್ಛಿಸಲಿಲ್ಲ. ಪ್ರಮಾಣಿಕವಾಗಿ ಕೆಲಸ ಮಾಡಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು. ಈ ವಿಷಯದಲ್ಲಿ ಅಮಿತ್ ಶಾ ಜತೆಗೂ ಯಾವುದೇ ಚಚರ್ಚೆ ನಡೆಯಲಿಲ್ಲ. ಆದರೆ, ಈ ಬಗ್ಗೆ ಅವರಿಗೆ ನಮಗಿಂತ ಹೆಚ್ಚಿನ ಮಾಹಿತಿ ಇರುವಂತೆ ಇದೆ’ ಎಂದರು.
ವರಿಷ್ಠರನ್ನು ಭೇಟಿಯಾಗಲು ಎರಡು ದಿನ ದೆಹಲಿಗೆ ಬುಧವಾರ ಸಂಜೆ ಆಗಮಿಸಿದ ಕರ್ನಾಟಕದ ಸಿಎಂ, ಗುರುವಾರ ಸಂಜೆ ಬೆಂಗಳೂರಿಗೆ ವಾಪಸಾದರು.
‘ಬಿಟ್ಕಾಯಿನ್ ಹಗರಣದಲ್ಲಿ ಕರ್ನಾಟಕದ ಸಚಿವರು ಭಾಗಿಯಾಗಿದ್ದರೆಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಕೇವಲ ವದಂತಿ’ ಎಂದರು.
ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿಯಿಂದ 9 ಕೋಟಿ ರೂ. ಮೌಲ್ಯದ ಬಿಟ್ಕಾಯಿನ್ನನ್ನು ಪೊಲೀಸರು ವಶಪಡಿಸಿಕೊಂಡ ನಂತರ ರಾಜ್ಯ ಸರ್ಕಾರದ ಸಚಿವರು ಶ್ರೀಕಿ ಜತೆ ನಂಟು ಹೊಂದಿದ್ದು, ಬಿಟ್ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಆರೋಪಿ ಶ್ರೀಕಿ ಮತ್ತು ಆತನ ಜತೆಗೆ ಸಂಬಂಧ ಹೊಂದಿದವರನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿದೆ ಎಂದು ಪ್ರತಿಪಕ್ಷಗಳ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
On Bitcoin scam, Amit Shah has more info than us: Says Bommai
ಇದನ್ನು ಓದಿ: Bitcoin Explainer: ಬಿಟ್ಕಾಯಿನ್ ಎಂದರೇನು? ವಹಿವಾಟು ಹೇಗೆ ನಡೆಯುತ್ತೆ? ಇಲ್ಲಿದೆ ವಿವರ
ಇದನ್ನು ಓದಿ: CM Bommai: ದೆಹಲಿಗೆ ಸಿಎಂ ಬೊಮ್ಮಾಯಿ ಪ್ರಯಾಣ
Discussion about this post