ಚಿಕ್ಕಮಗಳೂರು: ನಗರಕ್ಕೆ ಕುಡಿಯುವ ನೀರೊದಗಿಸುವ ಇತಿಹಾಸ ಪ್ರಸಿದ್ಧ ಹಿರೇಕೊಳಲೆ ಕೆರೆಯ ಒತ್ತುವರಿಯನ್ನು ತೆರವುಗೊಳಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಮೀಲ್ ಅಹ್ಮದ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಶುಕ್ರವಾರ ಈ ಸಂಬಂಧ ಮನವಿ ಸಲ್ಲಿಸಿ ಕೆರೆಯ ಒತ್ತುವರಿ ತೆರವುಗೊಳಿಸುವುದರ ಜೊತೆಗೆ ಅದನ್ನು ಅಭಿವೃದ್ದಿಪಡಿಸಬೇಕು ಎಂದು ಹೇಳಿದರು.
ಹಿರೇಕೊಳಲೆ ಕೆರೆ ನಗರದ ಬಹುತೇಕ ಬಡಾವಣೆಗಳಿಗೆ ಕುಡಿಯುವ ನೀರನ್ನು ಬಹಳಷ್ಟು ವರ್ಷಗಳಿಂದ ಒದಗಿಸುತ್ತಿದೆ. ಹಾಗಾಗಿ ಅದು ನಗರದ ಜನರ ಜೀವನಾಡಿಯಾಗಿದೆ. ಹಿಂದೆ ೫೨ ಎಕರೆ ವಿಸ್ತೀರ್ಣ ಹೊಂದಿದ್ದ ಕೆರೆ ಒತ್ತುವರಿಯಿಂದಾಗಿ ಈಗ ಬರೀ ಎಂಟು ಎಕರೆ ವಿಸ್ತೀರ್ಣ ಹೊಂದಿದೆ ಎಂದು ವಿಷಾಧಿಸಿದರು.
ಒತ್ತುವರಿ ತೆರವು ಮಾಡಿಸುವುದರಿಂದ ಕೆರೆಯ ವಿಸ್ತೀರ್ಣ ಹೆಚ್ಚಾಗುತ್ತದೆ ಹಾಗಾಗಿ ನಗರದ ಎಲ್ಲಾ ನಾಗರೀಕರಿಗೂ ಕುಡಿಯುವ ನೀರೊದಗಿಸಲು ಸಾಧ್ಯವಾಗುತ್ತದೆ ಎಂದ ಅವರು ಹಿಂದೆ ತಾವು ನಗರಸಭೆ ಅಧ್ಯಕ್ಷರಾಗಿದ್ದಾಗ ಈ ಬಗ್ಗೆ ಯೋಜನೆ ತಯಾರಿಸಿ ಸರ್ವೆ ಮಾಡಿಸಿ ಪ್ರಸ್ತಾವನೆಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಪ್ರಕಾರ ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಪಿ.ವಿ.ತಂಬಿಯಾರ್ ಹಾಜರಿದ್ದರು.
Non-forest activity: ಗಿರಿ ಶ್ರೇಣಿಯಲ್ಲಿ ಅರಣ್ಯೇತರ ಚಟುವಟಿಕೆ ಜತೆಗೆ ಒತ್ತುವರಿಗೆ ಕಡಿವಾಣ ಬೇಕಿದೆ
Discussion about this post