• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

ಮನುಜ ಮತ -ವಿಶ್ವ ಪಥ, ಭಾವೈಕ್ಯತೆ ಸಂದೇಶ ಸಾರಿದ ಕುವೆಂಪು

- ಮಂಜುಳಾ ಹುಲ್ಲಹಳ್ಳಿ

Shri News Desk by Shri News Desk
Nov 13, 2021, 10:22 pm IST
in ಚಿಕ್ಕಮಗಳೂರು, ಸಾಹಿತ್ಯ
Share on FacebookShare on TwitterTelegram

ಚಿಕ್ಕಮಗಳೂರು: ಪ್ರಕೃತಿಯಿಂದ ಬಂದು, ಪ್ರಕೃತಿಯೊಡಲಿನಲ್ಲಿ ಬೆಳೆದು ಪ್ರಕೃತಿಯನ್ನು ಆರಾಧಿಸಿ, ಪ್ರಕೃತಿಯ ಪೂರ್ಣ ಕೃಪೆಗೆ ಪಾತ್ರವಾದ ಅಪೂರ್ವ ದಿವ್ಯ ಚೇತನ ಕುವೆಂಪು. ಪ್ರಕೃತಿಯೊಡಲಿನಲ್ಲಿ ಹುಟ್ಟಿದ ಅವರು ಪ್ರಕೃತಿಯೊಳಗೇ ಲೀನವಾಗಿ ಇಪ್ಪತ್ತು ವರುಷಗಳು ಕಳೆದಿವೆ. ಆದರೆ ಕನ್ನಡನಾಡಿನ ಪ್ರಕೃತಿಯ ಕಣ ಕಣದಲ್ಲೂ ಕುವೆಂಪು ದಿವ್ಯ ಶಕ್ತಿ ಸಂಚರಿಸುತ್ತಿರಬಹುದೆಂಬ ಅನುಭೂತಿಯ ಭಾವ ರೋಮಾಂಚನ ನಿತ್ಯನೂತನವಾಗಿದೆ.

ಈ ಜಗತ್ತಿನಲ್ಲಿ ಮಹಾವ್ಯಕ್ತಿಗಳು ಹುಟ್ಟುವುದೇ ತುಂಬಾ ಅಪರೂಪ. ಮಹಾಕವಿಗಳು ಹುಟ್ಟುವುದು ಇನ್ನೂ ಅಪರೂಪ. ಮಹಾವ್ಯಕ್ತಿಯೊಬ್ಬ ಮಹಾಕವಿಯಾಗಿ ರೂಪುಗೊಂಡು ಹುಟ್ಟುವುದು ಶತಮಾನಕ್ಕೊಮ್ಮೆ ಲಭಿಸಬಹುದಾದ ಅಪೂರ್ವ ಯೋಗ. ಹಾಗೆ ಆಗುವುದು ಭುವನದ ಭಾಗ್ಯದಿಂದ, ಜನಾಂಗದ ಪುಣ್ಯದಿಂದ. ಅಂಥ ಭಾಗ್ಯ ಪುಣ್ಯಗಳನ್ನು ಪಡೆದ ನಮ್ಮ ನಾಡಿನಲ್ಲಿ ಅಸಾಧಾರಣ ಕಾವ್ಯಮಾನವ ಕುವೆಂಪು ಅವರು ಜನ್ಮ ತಳೆದರೆಂಬುದೇ ಅನನ್ಯ ಭಾವಸಂಭ್ರಮ!

ದರ್ಶನ ದೀಪ್ತ ಋಷಿ ಚೇತನದ ಮೂರ್ತರೂಪವೊಂದು ತನ್ನ ಹುಟ್ಟಿಗೆ ಆಯ್ದುಕೊಂಡ ಕ್ಷೇತ್ರವೇ ಹಸುರಿನ ತವರುನೆಲೆಯಾದ ಹಿರೆಕೊಡಿಗೆ. ಅಂಕುರವಿಟ್ಟು ಬೆಳೆದುದು ಸಹಸ್ರ ಪಕ್ಷಿಗಳ ವಸಂತಗಾನದ, ಹಸುರಿನ ಹೆಮ್ಮೆಯ, ಗಂಭೀರಮೌನದ ಪವಿತ್ರ ಶಾಂತಿಯ ಮಲೆನಾಡಿನ  ತುಂಬುಕುಟುಂಬ ಕುಪ್ಪಳಿ ಮನೆಯಲ್ಲಿ.  ಈ ಮನೆಯ ಉಪ್ಪರಿಗೆ ಶಾಲೆಯಲ್ಲಿ ವಿದ್ಯಾಭ್ಯಾಸದ ಓನಾಮವನ್ನೂ ಕಲಿತ ಪುಟ್ಟಪ್ಪ ಬಾಲ್ಯದಿಂದಲೇ ಏಕಾಂತವಾಸ, ಪ್ರಕೃತಿಯಾರಾಧನೆ, ಗ್ರಂಥೋಪಾಪನೆಗಳಿಗೆ ಮನತೆತ್ತರು.

ಕುವೆಂಪು ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಬರಲೇಬೇಕಿತ್ತು. ಆ ವೇಳೆಗೆ ತಂದೆ ದಿವಂಗತರಾಗಿದ್ದರು. ಚಿಕ್ಕಪ್ಪ ಹೆಚ್ಚು ಓದುವುದು ಬೇಡ, ಇಲ್ಲೇ ಇದ್ದು ಆಸ್ತಿ ನೋಡಿಕೋ ಎಂದರು. ಆದರೆ ಓದಿನ ವಿಷಯದಲ್ಲಿ ತಾಯಿಯ ಮೌನರಕ್ಷೆ ಪಡೆದಿದ್ದ ಕುವೆಂಪು ‘ಏನೇ ತೊಂದರೆ ಆಗಲಿ, ಓದು ನಿಲ್ಲಿಸುವುದಿಲ್ಲ’ಎಂದು ದೃಢವಾಗಿ ಹೇಳಿ ಮೈಸೂರಿಗೆ ಬಂದರು. ಮೈಸೂರಿನ ಕೀರ್ತಿಗೆ ಮತ್ತೊಂದು ಭವ್ಯತೆಯ ಕಿರೀಟ ತೊಡಸಿದರು!

‘ರಾಬಿನ್ ಸನ್ ಕ್ರೂಸೋ’ಪುಸ್ತಕ ಮೈಸೂರಿನಲ್ಲಿ ಬಾಲಕ ಕುವೆಂಪು ಓದಿದ ಮೊದಲ ಪುಸ್ತಕ. ಇದರ ಪ್ರಭಾವ ಅವರ ಮೇಲೆ ಹೇಗಾಯಿತೆಂದರೆ, ನಂತರದ ದಿನಗಳಲ್ಲಿ ಅವರು ಊಟ ತಿಂಡಿ ನಿದ್ರೆ ಬಿಟ್ಟರೂ ನಿತ್ಯ ಗ್ರಂಥಾಲಯಗಳಿಗೆ ಹೋಗುವುದನ್ನು ಬಿಡಲಿಲ್ಲ. ಹೈಸ್ಕೂಲಿನಲ್ಲಿದ್ದಾಗಲೆ ಷೇಕ್ಸ್ ಪಿಯರ್‌ನ ಕೃತಿಗಳನ್ನು ಓದಲು ತೊಡಗಿದರು. ಮೊದಲು ಓದಿದಾಗ ಏನೂ ಅರ್ಥವಾಗಲಿಲ್ಲ. ಆದರೆ ನಿಘಂಟನ್ನು ಪಕ್ಕದಲ್ಲಿರಿಸಿಕೊಂಡು ಪದ ಪದಗಳಿಗೆ ಅರ್ಥ ಹುಡುಕಿ ಮೊದಲಿನಿಂದ ಕೊನೆಯವರೆಗೆ ಓದಿ ಅರ್ಥ ದಕ್ಕಿಸಿಕೊಳ್ಳುವ ರೀತಿಯನ್ನು ಅರಿತರು.

ಹೀಗೇ ಟಾಲ್‌ಸ್ಟಾಯ್, ಹಾರ್ಡಿ, ವರ್ಡ್ಸ್ ವರ್ತ್ ಮೊದಲಾದವರ ಕೃತಿಗಳ ಜತೆಗೆ ಸ್ವಾಮಿ ವಿವೇಕಾನಂದರ ಕೃತಿಗಳನ್ನು ಮನನ ಮಾಡಿಕೊಂಡರು. ಸಾಹಿತ್ಯೋದ್ದೇಶದ ಅರ್ಥ  ಸಂಕಲ್ಪಸಿದ್ಧಿಯ ಸಾರ್ಥಕತೆ ಮನವರಿಕೆಯಾಯಿತು. ಅಂದಿನಿಂದ ಸಾಹಿತ್ಯದ ಮೂಲಕ ಆತ್ಮಕಲ್ಯಾಣವನ್ನು ಸಾಧಿಸಬೇಕೆಂಬುದನ್ನು ಜೀವನದ ಪ್ರಧಾನಗುರಿಯಾಗಿರಿಸಿಕೊಂಡರು.

ವಿದ್ಯಾರ್ಥಿಯಾಗಿದ್ದಾಗ ಅವರ ವಾಸ ಮೈಸೂರಿನ ಸಂತೆಪೇಟೆಯ ಹೋಟೆಲಿನ ಮಹಡಿಯ ಮೇಲಿನ ಪುಟ್ಟ ಕೊಠಡಿ. ಆಗಲೇ ಅಧ್ಯಾತ್ಮ ಶಕ್ತಿಯ ಕಡೆಗೂ ಒಲಿದಿದ್ದ ಅವರು ಸಂತೆಪೇಟೆಯನ್ನೇ ಪಾಠಶಾಲೆಯಾಗಿಸಿಕೊಂಡು ವ್ಯಾಪಾರದ ಗಲಾಟೆಯಲ್ಲೇ ತಪೋನಿರತೆಯನ್ನು ಅನುಭವಿಸುತ್ತಿದ್ದರು. ಅಲ್ಲಿನ ಹರಿದ ಚಾಪೆಯಲ್ಲೇ ದಿವ್ಯ ವೇದಿಕೆಯನ್ನು ಕಲ್ಪಿಸಿಕೊಂಡು ಧ್ಯಾನಾಸಕ್ತರಾಗುತ್ತಿದ್ದರು . ಜನ್ಮತಃ ಪ್ರತಿಭಾವಂತರಾದ ಕುವೆಂಪು ಅವರಲ್ಲಿ ಕಾವ್ಯಪ್ರಜ್ಞೆ ಸಹಜವಾಗಿ ವಿಕಾಸಗೊಂಡು ವಿದ್ಯಾರ್ಥಿ ಅನುಭವಗೋಷ್ಟಿ ನಡೆಯಲೂ ಸಾಧ್ಯವಾಗಿತ್ತು.

ಅಧ್ಯಯನ, ಆಧ್ಯಾತ್ಮ ಸಾಧನೆ, ಕಾವ್ಯಕ್ರಿಯೆ ಈ ಮೂರು ಒಂದರೊಡನೆ ಒಂದು ಬೆಸೆದುಕೊಂಡು ನುಡಿದಂತೆ ನಡೆದ, ನಡೆದಂತೆ ಬರೆದ, ಬರೆದಂತೆ ಬದುಕಿದ ಅಪೂರ್ವ ತಪೋನಿಧಿಯಾದರು ಕುವೆಂಪು. ಅವರದೇ ನುಡಿ, “ಮುಗಿದಿರಲಿ ಕೈ, ಮಣಿದಿರಲಿ ಮೈ ಮತ್ತೇ ಮಡಿಯಾಗಿರಲಿ ಬಾಳ್ವೆ” ಎನ್ನುವುದಕ್ಕೆ ಸಾರ್ಥಕ ಪ್ರತಿಮಾರೂಪವೇ ಅವರಾಗಿದ್ದರು.

ಒಂದು ಮಹಾಕಾವ್ಯ, 3 ಖಂಡಕಾವ್ಯ, 27 ಭಾವಗೀತಾ ಸಂಗ್ರಹ, ಒಂದು ಕಥನ ಕವನ ಸಂಗ್ರಹ, 3 ಸಣ್ಣ ಕಥಾ ಸಂಗ್ರಹ, 14 ನಾಟಕಗಳು, 2 ಕಾದಂಬರಿಗಳು ,2 ಜೀವನ ಚರಿತ್ರೆಗಳು, 6 ಮಕ್ಕಳ ಸಾಹಿತ್ಯ, 7 ವಿಮರ್ಶೆ ಕಾವ್ಯಮೀಮಾಂಸೆ, ಎರಡು ‘ಆತ್ಮಕಥೆ’, 2 ಅನುವಾದ ಪ್ರಕಟವಾಗದೆ ಅವರ ಮನೋಭೂಮಿಕೆಯಲ್ಲೇ ಉಳಿದುಹೋದ ಹೇರಳ ಕಾವ್ಯಗಣಿತಗಳು  ಶ್ರೀಯುತರ ಕೃತಿ ಸಂಪತ್ತು.

ಜಗತ್ತಿಗೆ ಶುಭವಾಗಲೆಂದು, ಮನುಕುಲದ ಬದುಕು ಹೊನ್ನಾಗಲೆಂದು ಕುವೆಂಪು ತಪಸ್ಸಾಗರದಲ್ಲಿ ಮುಳುಗಿ ಈ ಕೃತಿ ರತ್ನಗಳನ್ನು ಹೊರತಂದರು. ಒಂದೊಂದು ಕೃತಿಯಲ್ಲೂ ಅವರ ಅಲೌಕಿಕ ಪ್ರತಿಭೆ ಪ್ರಖರ ವ್ಯಕ್ತಿತ್ವ ಹೊರಹೊಮ್ಮುತ್ತದೆ.

ಕುವೆಂಪು ತಮ್ಮ ಕೃತಿಗಳಲ್ಲಿ ಕಣ್ಮರೆಯಾಗಿ ಹೋದ ಪುರಾತನ ಮೌಲ್ಯಗಳಿಗೆ ಮರುಹುಟ್ಟು ನೀಡಿದ್ದಾರೆ, ಜೀರ್ಣವಾಗಿ ಹೋದ ತತ್ವಗಳನ್ನು ಪರಿಷ್ಕರಿಸಿದ್ದಾರೆ.  ನೂತನ ಮೌಲ್ಯಗಳನ್ನು ಸೃಷ್ಟಿಸಿದ್ದಾರೆ. ಪ್ರಾರ್ಥನೆ ತಪಸ್ಸುಗಳು ಅವರ ಕೃತಿಗಳಲ್ಲಿ ಹಾಸು ಹೊಕ್ಕಾಗಿವೆ.  ಜತೆಗೆ ಸಮಾಜದಲ್ಲಿ ತಾಂಡವವಾಡುವ ಸರ್ವ ಮೌಢ್ಯಗಳನ್ನು ಖಂಡಿಸಿದ್ದಾರೆ. ದೇವರ ಹೆಸರಿನಲ್ಲಿ ನಡೆಸುವ ಅನಾಚಾರವನ್ನು ಕೈಬಿಡಬೇಕೆಂದು ಘೋಷಿಸುತ್ತಾರೆ, ಶಾಸ್ತ್ರಗಳ ನೆಪದಲ್ಲಿ ನಡೆಸುವ ಕಂದಾಚಾರಗಳನ್ನು ತಿರಸ್ಕರಿಸುತ್ತಾರೆ.

‘ಆ ಮತದ ಈ ಮತದ, ಹಳೆ ಮತದ ಸಹವಾಸ  ಸಾಕಿನ್ನು, ಸೇರಿರೈ ಮನುಜ ಮತಕೆ,  ಓ ಬನ್ನಿ ಸೋದರರೆ ವಿಶ್ವ ಪಥಕೆ’ಎಂಬುದು ಅವರ ಪರಮಾದರ್ಶದ ಕರೆ. ಅವರ ಹಿತನುಡಿಗಳು ಅವರ ಮಕ್ಕಳಿಗೆ ಮತ್ತು ನಾಡಿನ ಯುವಜನತೆಗೆ ಏಕಪ್ರಕಾರವಾಗಿ ಇದ್ದಿತೆಂಬ ಒಂದು ಅಂಶ ಸಾಕು, ಅವರ ಆಲೋಚನಾ ದರ್ಶನವನ್ನು ಅರ್ಥೈಸಿಕೊಳ್ಳಲು. ಕುವೆಂಪು ಅವರ ಕೃತಿಗಳ ವಾಚನ, ಮನನ, ಆಚರಣೆಗಳಿಂದ ನಿಜಕ್ಕೂ ಬದುಕು ಹಸನಾಗುತ್ತದೆ, ವಿಶ್ವಮಾನವತೆ ಲಭಿಸುತ್ತದೆ.

ಭಾರತದ ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಕುವೆಂಪು ಪಡೆದರು.  ಆದರೆ ಅವರು ಎಂದೂ ಕೀರ್ತಿಯನ್ನು ಬಯಸಲಿಲ್ಲ. ಆನೆ ತೇರು ಪಲ್ಲಕ್ಕಿಗಳ ಮೆರವಣಿಗೆ ಬೇಕೆಂದು ನಿರೀಕ್ಷಿಲಿಲ್ಲ. ಅವರಿಗೆ ಬೇಕಾಗಿದ್ದುದು ಅವರ ಕೃತಿಗಳನ್ನು ಓದಿ ಜೀರ್ಣಿಸಿಕೊಂಡು ಆತ್ಮೋನ್ನತಿ ಗಳಿಸಿಕೊಳ್ಳುವ ಸಹೃದಯರು. ಅವರ ಕೃತಿಯನ್ನು ಓದಿದ ಸಹೃದಯರಿಂದ  ಅವರು ನಿರೀಕ್ಷಿಸುತ್ತಿದ್ದ ಕಾಣಿಕೆ ಎಂದರೆ, ಆನಂದದ ಕಂಬನಿಗಳ ರಸಾಶ್ರು ತರ್ಪಣ! ನಾವು, ಕನ್ನಡದ ಜನತೆ ಅಷ್ಟು ಮಾತ್ರವನ್ನು ಆ ಮಹಾನುಭಾವರಿಗೆ ನೀಡುವಷ್ಟು ಭಾಗ್ಯವಂತರಾಗೋಣ. _ ಪೋಟೋ ಸಂಗ್ರಹ ಡಾ.ಲೀಲಾ ಅಪ್ಪಾಜಿ.

ShareSendTweetShare
Join us on:

Related Posts

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

ರಾಜ್ಯದಲ್ಲಿ 832 ಮಂದಿಗೆ ಕೊರೋನಾ ಪಾಸಿಟಿವ್ , 8 ಸೋಂಕಿತರು ಸಾವು

Corona crosses 1000 mark: ರಾಜ್ಯದಲ್ಲಿ 1000 ಗಡಿ ದಾಟಿದ ಕೊರೋನಾ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In