ಚಿಕ್ಕಮಗಳೂರು: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿಲುವು ಹಾಗೂ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸುವವರಿಗೆ ಮುಂದೊಂದು ದಿನ ಪರಿತಪಿಸುವ ಕಾಲ ಬರಲಿದೆ ಎಂದು ಶಾಸಕ ಸಿ.ಟಿ.ರವಿ ಭವಿಷ್ಯ ನುಡಿದರು.
ದೇಶದಲ್ಲಿ ಜಾರಿಗೊಳಿಸಲು ಮುಂದಾಗಿದ್ದ ಮೂರು ಕೃಷಿ ಕಾಯ್ದೆಗಳು ರೈತ ಪರ ಕಾಯ್ದೆಗಳಾಗಿವೆ. ಆದರೆ ಪಂಜಾಬ್, ಹರಿಯಾಣ ಮತ್ತಿತರ ಕಡೆಗಳಲ್ಲಿ ಇದನ್ನು ಮನವರಿಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪಟ್ಟಭದ್ರಾ ಹಿತಾಸಕ್ತಿಗಳು ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳವುದನ್ನು ತಪ್ಪಿಸುವ ಸಲುವಾಗಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಸಮರ್ಥನೆ ಮಾಡಿಕೊಂಡರು.
Farm Laws: ವಿವಾದಿತ ಕೃಷಿಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸವಾರ್ಧಿಕಾರಿಯಂತೆ ಬಿಂಬಿಸುವ ಯತ್ನ ನಡೆಯಿತು, ಆದರೆ ಅವರು ಪ್ರಜಾಪ್ರಭುತ್ವವಾದಿ ಆ ಹಿನ್ನಲೆ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ಕೃಷಿ ಕಾಯ್ದೆಗಳ ಬಗ್ಗೆ ಮೋದಿಯವರ ನಿಲುವಿನ ಬಗ್ಗೆ ವಿರೋಧಿಗಳು ಮುಂದೊಂದು ದಿನ ಪರಿತಪಿಸುವ ಕಾಲ ಬರಲಿದೆ. ಇದು ರೈತರ ಸುಧಾರಣೆಗೆ ಅಡ್ಡಗಾಲು ಹಾಕುವ ಷಡ್ಯಂತ್ರ ಎಂದು ಆರೋಪಿಸಿದರು.
ದೇಶದ ಪ್ರಧಾನಿ ರೈತರ ಕಲ್ಯಾಣಕ್ಕಾಗಿ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ ವ್ಯಾಪ್ತಿಯನ್ನು ಕಡಿಮೆಗೊಳಿಸುವುದು, ಸೇರಿದಂತೆ ಅನೇಕ ರೈತಪರವಾದ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಹೇಳಿದರು.
Farm Laws : ಕೃಷಿ ಮಸೂದೆ ವಾಪಾಸ್ ನಿರ್ಧಾರ ಜಿಲ್ಲೆಯಲ್ಲಿ ರೈತರ ವಿಜಯೋತ್ಸವ
Discussion about this post