ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೆಳೆಮನೆ ಕ್ರಾಸ್ ಬಳಿಯ ಬಡಕುಟುಂಬವೊಂದು ತುರ್ತು ನೆರವಿಗಾಗಿ ಸಾರ್ವಜನಿಕರಲ್ಲಿ ಮೊರೆಯಿಟ್ಟಿದೆ. ಶೆಳೆಮನೆಯ ಸುರೇಂದ್ರ ರಾಮಯ್ಯ ಶೇರೂಗಾರ ಅವರು ದಾಂಡೇಲಿಯಲ್ಲಿ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆಕಸ್ಮಿಕವಾಗಿ ಘಟಿಸಿದ ರಸ್ತೆ ಅಪಘಾತದಲ್ಲಿ ಸುರೇಂದ್ರ ಅವರಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಡಕುಟುಂಬದ ಹಿನ್ನೆಲೆಯ ಸುರೇಂದ್ರ ಅವರ ಚಿಕಿತ್ಸೆಗೆ 15 ಲಕ್ಷಕ್ಕೂ ಹೆಚ್ಚು ಮೊತ್ತದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸುರೇಂದ್ರ ಅವರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದು ಉತ್ತಮ ಕ್ರೀಡಾಪಟುವಾಗಿಯೂ ಹೆಸರುಗಳಿಸಿದ್ದಾರೆ.
ಸದ್ಯ ಸುರೇಂದ್ರ ಅವರ ಚಿಕಿತ್ಸೆಗೆ ಅಗತ್ಯ ಇರುವ ಹಣವನ್ನು ಹೊಂದಿಸಲು ಅವರ ಕುಟುಂಬ ಹರಸಾಹಸಪಡುತ್ತಿದೆ. ಹೀಗಾಗಿ ಉದಾರ ಹೃದಯದ ಸಾರ್ವಜನಿಕರು ಸುರೇಂದ್ರ ಅವರ ಚಿಕಿತ್ಸೆಗೆ ಹಣಸಹಾಯ ನೀಡಬಹುದಾಗಿದೆ. ಸುರೇಂದ್ರಾ ಅವರ ಸಹೋದರ ನರೇಶ ರಾಮಯ್ಯ ಶೇರೂಗಾರ ಅವರ ಖಾತೆಗೆ ಧನಸಹಾಯ ಮಾಡಿ ಚಿಕಿತ್ಸೆಗೆ ಸಹಾಯ ಮಾಡುವಂತೆ ಕುಟುಂಬ ಕೋರಿದೆ.
ವಿವರ:
ನರೇಶ್ ರಾಮಯ್ಯ ಶೇರೂಗಾರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಲ್ಲಾಪುರ ಶಾಖೆ, SBIN 0001315
ಖಾತೆಸಂಖ್ಯೆ- 33372968019
ಫೋನ್ ಪೇ- 8762103787 (ನರೇಶ ರಾಮಯ್ಯ ಶೇರೂಗಾರ)
ಇದನ್ನೂ ಓದಿ: ಉತ್ತರ ಕನ್ನಡ: ಕಪ್ಪು ಚಿನ್ನದ ದರದಲ್ಲಿ ಏರಿಕೆ; ಬೆಳೆಗಾರರ ಮೊಗದಲ್ಲಿ ಹರ್ಷ
Discussion about this post