ಚಿಕ್ಕಮಗಳೂರು: ಬಿಜೆಪಿ ಜನರ ಆಶೀರ್ವಾದ, ಜನಮನ್ನಣೆಯಿಂದ ಬಂದ ಸರ್ಕಾವಲ್ಲ 17 ಜನ ಎಂಎಲ್ಗಳನ್ನು ಕೊಂಡು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಲೂಟಿ ಹೊಡೆಯೋದು ಬಿಟ್ಟರೆ ಬೇರೇನೂ ಮಾಡಲಿಲ್ಲ ಹಾಗಾಗಿ ರಾಜ್ಯದಲ್ಲಿ ಬಿಜೆಪಿ ವಿರುದ್ದದ ಗಾಳಿ ಬೀಸಲು ಪ್ರಾರಂಬಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಒಕ್ಕಲಿಗರ ಭವನದಲ್ಲಿ ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ ಈ ಸರ್ಕಾರದಿಂದ ಜನ ಬೇಸತ್ತು ಭ್ರಮನಿರಸವಾಗಿದ್ದಾರೆ. ಓರ್ವ ಅಧಿಕಾರಿಯಿಂದ ಭ್ರಷ್ಠಾಚಾರದ ತನಿಖೆ ಮಾಡಿಸುತ್ತೇವೆಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳುತ್ತಾರೆ ಆದರೆ ಅಲ್ಲಪ್ಪ ನೀವೇ ತಿನ್ನುವವರು ನೀವೆ ತನಿಖೆ ಮಾಡಿಸುವವರು ಹೆಂಗ್ರಿ ಸಾಧ್ಯವಾಗುತ್ತದೆ? ಹಳ್ಳಿಕಡೆಯ ಗಾದೆಯಂತೆ ಕುರಿಕಾಯಿ ತೋಳ ಅಂದರೆ ಸಂಬಳನ ಬೇಡಾ ಅಂತ ಅಂದಹಾಗೆ ಈ ಗಿರಾಕಿಗಳು ನಾವೆ ತನಿಖೆ ಮಾಡಿಸುತ್ತೇವೆನ್ನುತ್ತಾರೆ.
ಜವಾದ್ ಚಂಡಮಾರುತದ ಹಾನಿ ತಪ್ಪಿಸಲು ಸಕಲ ಸಿದ್ಧತೆ ಮಾಡಿಕೊಂಡ ಸರ್ಕಾರ
ಮಿಸ್ಟರ್ ಬಸವರಾಜ್ ಬೊಮ್ಮಾಯಿ ನಿಮಗೇನಾದರೂ ಭ್ರಷ್ಟಾಚಾರದ ಅಪವಾದದಿಂದ ತಪ್ಪಿಸಿಕೊಳ್ಳಬೇಕೆಂದಾದರೆ ಸ್ವತಂತ್ರ ಆಯೋಗವನ್ನು ಮಾಡಿ ಸುಪ್ರಿಂ ಕೋರ್ಟ ಜಡ್ಜ್ನಿಂದ ತನಿಖೆ ಮಾಡಿಸಿ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದ್ದರೆ ಅದನ್ನು ಸೇರಿಸಿ ಮಾಡಿ ಸತ್ಯ ಹೊರಗೆ ಬರಲಿ. ನಾವೇನು ವಿರೋಧ ಮಾಡುವುದಿಲ್ಲ. ನಿಮಗೇನಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ತನಿಖೆ ಮಾಡಿಸಿ ಎಂದರು.
Viral Video: ಸರ್ಕಾರಿ ಕಚೇರಿಗೆ ಬಂದ ಮೇಕೆ, ಮುಂದೇನಾಯ್ತು ಗೊತ್ತಾ ?
ಪ್ರಧಾನಿ ಮೋದಿಯವರು ದೊಡ್ಡ ನಾಟಕಕಾರ ಬರಿಸುಳ್ಳೆ, ಮೋದಿ ಏನು ಹೇಳುತ್ತಾರೆ ಅದಕ್ಕೆ ವಿರುದ್ದವಾಗಿ ತಿಳಿದುಕೊಳ್ಳಬೇಕು ಅದೇ ಸತ್ಯ. ಭಾರತದ ಇತಿಹಾಸದಲ್ಲಿ ಯಾರಾದರೂ ಓರ್ವ ಪ್ರಧಾನ ಮಂತ್ರಿ ಇಷ್ಟೊಂದು ಸುಳ್ಳು ಹೇಳುವ ವ್ಯಕ್ತಿ ಬಂದಿದ್ದರೆ ಅದು ಶ್ರೀಮಾನ್ ನರೇಂದ್ರ ಮೋದೀಜಿ. ಬಿಜೆಪಿಗರೆಲ್ಲಾ ನರೇಂದ್ರ ಮೋದಿ ಸೆರಗು ಹಿಡುದುಕೊಂಡು ಬಂದ ಗಿರಾಕಿಗಳು ಎಂದು ವ್ಯಂಗ್ಯ ವಾಡಿದರು. ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿಸಿ ಮೋದಿ ಮೋದಿ ಎನ್ನುತ್ತಿದ್ದ ಯುವಕರಿಗೆ ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ ಎಂದರು.
Politics: ಯುಪಿಎ ಎಲ್ಲಿದೆ? ಎಂದು ಮಮತಾ ಟೀಕೆಗೆ ಕಾಂಗ್ರೆಸ್ ತಿರುಗೇಟು
ಸ್ವಾತಂತ್ರ ಬಂದಾಗಿನಿಂದ ಇಂದಿನ ವರೆಗೂ ದೇಶದ ಮೇಲಿದ್ದ ಸಾಲ 51.33 ಲಕ್ಷ ಕೋಟಿ ಇಂದು 123 ಲಕ್ಷ ಕೋಟಿ ಸಾಲವಾಗಿದೆ. ಕಳೆದ 7 ವರ್ಷದಲ್ಲಿ ಮೋದಿಯವರು 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ಉಳಿಯುತ್ತದಾ? ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದರು ಆದರೆ ಮೋದಿಯವರು ಬೆಲೆ ಏರಿಕೆ ಮಾಡೋದು ಲೂಟಿ ಹೊಡೆಯೋದು ಮಾಡುತ್ತಿದ್ದಾರೆ ಎಂದರು.
Winds against BJP begin to blow in the state
Discussion about this post