ಚಿಕ್ಕಮಗಳೂರು: ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸುತ್ತಿರುವ ದತ್ತಾ ಮಾಲ ಉತ್ಸವ ಹಿನ್ನಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಮತ್ತು ಇತರ ಭಕ್ತಾಧಿಗಳು ನಗರದ ನಾರಾಯಣಪುರ ಬಡಾವಣೆಯಲ್ಲಿ 10 ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹ ಮಾಡಲಾಯಿತು.
ದತ್ತಾಮಾಲ ಉತ್ಸವ ಹಿಂದೂಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ತುಂಬಾ ಅದ್ದೂರಿಯಾಗಿ ಆಚರಣೆ ಮಾಡುತ್ತಿವೆ, ಈ ಹಿನ್ನಲೆಯಲ್ಲಿ ನಗರದ ನಾರಯಣ ಪುರ ಬಡಾವಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಮತ್ತು ಇತರ ಭಕ್ತಾಧಿಗಳು 10 ಕ್ಕೂ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿದರು. ದತ್ತಾತ್ರೇಯ ಸ್ವಾಮಿಗೆ ಅಕ್ಕಿ, ಬೆಲ್ಲ, ಮತ್ತು ಕಾಯಿ ತುಂಬಾ ಪ್ರಿಯವಾದ ಆಹಾರವಾದರಿಂದ ಮನೆ ಮನೆಗೆ ತೆರಳಿ 10 ಕ್ಕೂ ಹೆಚ್ಚು ಮನೆಗಳಲ್ಲಿ ಭಿಕ್ಷೆಯನ್ನು ಬೇಡುವುದರ ಮೂಲಕ ಪಡಿಯನ್ನು ಸಂಗ್ರಹ ಮಾಡಿದರು.
ಮನೆ ಮನೆಗೆ ತೆರಳಿ ಸಂಗ್ರಹಿಸಿದಹ ಅಕ್ಕಿ, ಬೆಲ್ಲ, ಕಾಯಿ ಯ ಪಡಿಯನ್ನು ನಾಳೆ ದತ್ತಾ ಫೀಠದಲ್ಲಿ ಅಥವಾ ಚಂದ್ರ ದ್ರೋಣ ಪರ್ವತದಲ್ಲಿರುವಂತಹ ಸೀತಾಳಯ್ಯನ ಗಿರಿ, ಪಲಹಾರ ಮಠ, ನಿರ್ವಾಹಣ ಸ್ವಾಮಿ,ಅಥವಾ ದತ್ತಾಫೀಠದ ಯಾವುದಾದರೂ ಮಠದಲ್ಲಿ ಇದರ ಪಡಿಯನ್ನು ಸಲ್ಲಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಹಲವಾರು ಭಕ್ತಾಧಿಗಳು ಬಾಗವಹಿಸಿ ಪಡಿಯನ್ನು ಸಂಗ್ರಹಿಸಿದ್ದಲ್ಲದೇ ನಗರದ ಹಲವಾರು ಭಾಗಗಳಲ್ಲಿ ದತ್ತಾಮಾಲ ಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಸಂಪ್ರಾಧಾಯ ರೂಢಿಯಲ್ಲಿದೆ. ನಾಳೆ ಹೊನ್ನಮ್ಮನ ಹಳ್ಳದಲ್ಲಿ ಸ್ನಾನವನ್ನು ಮಾಡಿ ಪಾದಯಾತ್ರೆಯ ಮೂಲಕ ದತ್ತಾ ಫೀಠದ ವರೆಗೂ ನೆಡೆದು ನಂತರ ಪಾದುಕೆಯ ದರ್ಶನವನ್ನು ಮಾಡಲಿದ್ದಾರೆ.
Discussion about this post