ಚಿಕ್ಕಮಗಳೂರು : ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ದತ್ತಜಯಂತಿ ಅಂಗವಾಗಿ ಸಹಸ್ರಾರು ಭಕ್ತರಿಂದ ನಗರದಲ್ಲಿ ಶನಿವಾರ ಸಂಜೆ ಶಾಂತಿಯುತ ಬೃಹತ್ ಶೋಭಾಯಾತ್ರೆ ನಡೆಯಿತು
ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಾಲಯದ ಆವರಣದಿಂದ ಶೋಭಾಯಾತ್ರೆ ಆರಂಭಗೊಂಡ ಶೋಭಾಯಾತ್ರೆ ಕೆಇಬಿ ವೃತ್ತದಲ್ಲಿ ಸಾಗಿ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಬಂದು, ಹನುಮಂತಪ್ಪ ವೃತ್ತ ಬಳಸಿ ಎಂ.ಜಿ.ರಸ್ತೆಯಲ್ಲಿ ಸಾಗಿ ಆಜಾದ್ವೃತ್ತ ತಲುಪಿತು.
ದತ್ತಾತ್ರೇಯರ ಮೂರ್ತಿಪೂಜೆಗೊಂಡು ಪುಷ್ಪಲಾಂಕೃತ ತೆರದವಾಹನದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದಂತೆ ಶೋಭಾಯಾತ್ರೆಗೆ ಚಾಲನೆ ದೊರೆಯಿತು ನಗರದ ಚಂದ್ರಶೇಖರ ನೇತೃತ್ವದ ತಂಡ ನಾದಸ್ವರದೊಂದಿಗೆ ಹೆಜ್ಜೆಹಾಕುತ್ತಿದ್ದಂತೆ ಅವರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರದ ಸುಹಿಲ್ ಮುಖಂಡತ್ವದವರು ಚಂಡೆಯೊಂದಿಗೆ ಮುನ್ನೆಡೆದರು.
ತುಮುಕೂರು ಜಿಲ್ಲೆಯ ಶಿರಾತಾಲೂಕಿನ ಬೇವಿನಹಳ್ಳಿಯ ನರಸಿಂಹರಾಜು ನೇತೃತ್ವದ ೧೦ ಮಂದಿ ಕಹಳೆಯನ್ನು ಮೊಳಗಿಸಿದರೆ, ತುಮಕೂರು ಜಿಲ್ಲೆಯ ಕೇತುಮಾರನಹಳ್ಳಿಯ ಶ್ರೇಯಸ್, ರುದ್ರೇಶ್, ಅಭಿ ಮತ್ತು ಪಿ.ಡಿ. ರುದ್ರೇಶ್ ಅವರುಗಳ ನಂದಿಧ್ವಜವನ್ನು ಹಿಡಿದು ಮುನ್ನೆಡೆದರು. ತಿಪಟೂರಿನ ನಂದಿಕೆರೆಯ ರಾಕೇಶ್, ವಿಜಯಕುಮಾರ್ ಅವರ ಚೋಮನಕುಣಿತದಿಂದ ಶೋಭಾಯಾತ್ರೆಗೆ ಕಳೆನೀಡಿದರು.
ಶಂಕರಪುರದ ಬಾಲಕ ಸತೀಶ್ ಶಿವಾಜಿ ವೇಷಧಾರಿಯಾಗಿ ಗಮನ ಸೆಳೆದ, ಚಿಕ್ಕಮಕ್ಕಳು ಕೇಸರಿಧ್ವಜವನ್ನು ಕೈಯಲ್ಲಿ ಹಿಡಿದು ಶೋಭಾಯಾತ್ರೆಯಲ್ಲಿ ಹೆಜ್ಜೆಹಾಕಿದರು. ನಾಲ್ಕೈದು ಯುವಕರ ಪಡೆ ಉದ್ದನೆಯ ಬಿದಿರಿಗೆ ಶಿವಾಜಿಮಹಾರಾಜ್ ಅವರ ಭಾವಚಿತ್ರವನ್ನು ಹೊಂದಿದ್ದ ದೊಡ್ಡಗಾತ್ರದ ಧ್ವಜವನ್ನು ರಸ್ತೆಯ ಮಧ್ಯೆಭಾಗದಲ್ಲಿ ತಿರುಗಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ನಿಂತು ದತ್ತಾತ್ರೇಯರ ಮೂರ್ತಿಯ ದರ್ಶನ ಪಡೆದುಕೊಂಡರು. ಪೊಲೀಸರ ಸರ್ಪಗಾವಿನ ನಡುವೆ ಶಾಂತಿಯುತವಾಗಿ ಶೋಭಾಯಾತ್ರೆ ಮುಕ್ತಾಯಕಂಡಿತು. ವಿಶ್ವಹಿಂದುಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತಪೈ, ಉಪಾಧ್ಯಕ್ಷಯೋಗೇಶ್ರಾಜ್ ಅರಸ್, ಜಿಲ್ಲಾಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಿಲ್ಲಾಸಹಕಾರ್ಯದರ್ಶಿ ರಂಗನಾಥ್, ಶಿವಕುಮಾರ್, ಬಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ಹೆರೂರು, ಜಿಲ್ಲಾ ಸಹಸಂಚಾಲಕ ಅಮಿತ್, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಜಿಲ್ಲಾವಕ್ತಾರ ವರಸಿದ್ದಿವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಪ್ರೇಂಕುಮಾರ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಹೆಚ್.ಅಕ್ಷಯ್ ಹಾಜರಿದ್ದರು.
Shobha Yatra
Discussion about this post