Health Tips: ಇಂದಿನ ಕಾಲದಲ್ಲಿ ತಾಯಿಯಾಗೋದು ಅಂದ್ರೆ ವಿಶೇಷ ವಿಷಯವೇ ಸರಿ. ಯಾಕಂದ್ರೆ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಕರಿಯರ್ಗೆ ಪೆಟ್ಟು ಬೀಳತ್ತೆ ಅಂತಾ, ಮದುವೆಯಾಗೋಕ್ಕೆ ಒಪ್ಪೋದಿಲ್ಲ. ಮದುವೆಯಾದರೂ ಮಕ್ಕಳು ಮಾಡಿಕೊಳ್ಳೋ ಮನಸ್ಸು ಮಾಡೋದಿಲ್ಲ. ಮದುವೆಯಾಗಿ, ಮಕ್ಕಳೂ ಮಾಡಿಕೊಳ್ಳಬೇಕು ಅಂತಾ ಇದ್ದ ಕೆಲವರಿಗೆ ಮಕ್ಕಳಾಗೋದಿಲ್ಲ. ಯಾಕಂದ್ರೆ ಅವರ ದೇಹದ ಶಕ್ತಿ ಮುಗಿದು, ವಯಸ್ಸು ಹೆಚ್ಚಾಗಿರುತ್ತದೆ. 35 ವರ್ಷ ವಯಸ್ಸಿಗೆ ಬಂದು ತಲುಪಿರುತ್ತಾರೆ. (Pregnancy Tips)
ಹಾಗಾಗಿ ಇಂದಿನ ಕಾಲದಲ್ಲಿ ಗರ್ಭಿಣಿಯಾಗುವುದೇ ಒಂದು ವಿಶೇಷ ವಿಷಯ. ಹಾಗೆ ಗರ್ಭಿಣಿಯಾದವಳು, ಆದಷ್ಟು ಉತ್ತಮ ಆಹಾರಗಳನ್ನು ಸೇವಿಸಿ, ತನ್ನ ಮತ್ತು ತನ್ನ ಮಗುವಿನ ಕಾಳಜಿ ವಹಿಸುವುದು ತುಂಬಾ ಮುಖ್ಯ. ಯಾಕಂದ್ರೆ ನಾವು ತಿನ್ನುವ ಪ್ರತೀ ಆಹಾರದಲ್ಲು ಸ್ವಲ್ಪವಾದರೂ ಕೆಮಿಕಲ್ ಬಳಸಿರುತ್ತಾರೆ. ಹಾಗಾಗಿ ಹಣ್ಣು, ತರಕಾರಿ, ಸೊಪ್ಪನ್ನು ನೋಡಿ, ಆರಿಸಿ ಖರೀದಿಸಬೇಕು. (Healthy Baby)
ಹಾಗೆ ಖರೀದಿಸಿದ ತಂದ ಪದಾರ್ಥಗಳನ್ನು ಚೆನ್ನಾಗಿ ತೊಳೆದು ಸೇವಿಸಬೇಕು. ಇನ್ನು ಬರೀ ಆರೋಗ್ಯಕರ ಆಹಾರ ಸೇವಿಸಿದರೆ ಸಾಕಾ..? ಉಹು ಖಂಡಿತ ಸಾಕಾಗೋದಿಲ್ಲ. ಮಗುವಿಗೆ, ಮಗುವಿನ ತಾಯಿಯ ದೇಹಕ್ಕೆ ವಿಟಾಮಿನ್ ಡಿ ಸಿಗೋದು ಬೇಡ್ವಾ..? ಹಾಗೆ ವಿಟಾಮಿನ್ ಡಿ ಸಿಗಬೇಕು ಅಂದ್ರೆ, ಆಹಾರದ ಜೊತೆ ಸೂರ್ಯನ ತಿಳಿ ಬಿಸಿಲು ಕೂಡ ನಿಮ್ಮ ದೇಹಕ್ಕೆ ಬೀಳಬೇಕು. (Healthy life style)
ಗರ್ಭಿಣಿಯರು ಆದಷ್ಟು ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೇ ಪುಟ್ಟ ಮಕ್ಕಳನ್ನು ಆದಷ್ಟು ಬಿಸಿಲಿಗೆ ನಿಲ್ಲಿಸಲಾಗುತ್ತದೆ. ಹೀಗೆ ಮಾಡಲು ಕಾರಣ, ಮಕ್ಕಳಿಗೆ ವಿಟಾಮಿನ್ ಡಿ ಕೊರತೆಯಾಗದಿರಲಿ ಎಂದು. ಮಕ್ಕಳಿಗೆ ಕಾಮಾಲೆ ರೋಗ ಬಾರದಿರಲಿ, ಮಕ್ಕಳ ಚರ್ಮ ಆರೋಗ್ಯಕರವಾಗಿರಲಿ ಎಂದು. (Vitamin D)
ಬೆಳಿಗ್ಗೆ 9 ಗಂಟೆಯೊಳಗೆ ಬರುವ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿದರೆ, ವಿಟಾಮಿನ್ ಡಿ ಸಿಗುತ್ತದೆ. ಇದರಿಂದ ಚರ್ಮ ಆರೋಗ್ಯಕರವಾಗಿರುತ್ತದೆ. ಕಾಮಾಲೆ ರೋಗ ಬರುವುದಿಲ್ಲ. ದೇಹ ಸುಕ್ಕುಗಟ್ಟುವುದಿಲ್ಲ. ಹಳದಿಯಾಗುವುದಿಲ್ಲ. ಶಿಶುವಿನ ದೇಹ ಆರೋಗ್ಯಕರವಾಗಿರುತ್ತದೆ.
ಇಷ್ಟೇ ಅಲ್ಲದೇ ಮಗುವಿನ ಮೂಳೆ ಗಟ್ಟಿಯಾಗುತ್ತದೆ. ಸೂರ್ಯನ ಬಿಸಿಲಿನಿಂದ ಬರುವ ವಿಟಾಮಿನ್ ಡಿ ಅಂಶ ನಿಮ್ಮ ದೇಹಕ್ಕೆ ಕ್ಯಾಲ್ಶಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಮಗುವಿನ ಮೂಳೆ ಸ್ಟ್ರಾಂಗ್ ಆಗುತ್ತದೆ. ಜೊತೆಗೆ ಮಗುವಿನ ಮೆದುಳಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ.
ಬೆಳಿಗ್ಗೆ 9 ಗಂಟೆಯೊಳಗೆ ಸಿಗುವ ಸೂರ್ಯನ ತಿಳಿಬಿಸಿಲಿಗೆ ಮಕ್ಕಳನ್ನು 25ರಿಂದ 30 ನಿಮಿಷಗಳ ಕಾಲ ಬಿಡಬಹುದು. ಅದಕ್ಕಿಂತ ಹೆಚ್ಚು ಹೊತ್ತು ನಿಲ್ಲಿಸಬೇಡಿ. ಏಕೆಂದರೆ, ಸೂರ್ಯನ ಬೆಳಕು ಅತಿಯಾದರೂ ಕೂಡ, ಮಗುವಿನ ಆರೋಗ್ಯಕ್ಕೆ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಮಕ್ಕಳನ್ನು ಅರ್ಧ ಗಂಟೆಕಿಂತ ಹೆಚ್ಚು ಕಾಲ ಬಿಸಿಲಿನಲ್ಲಿ ನಿಲ್ಲಿಸಬೇಡಿ.
ಹಿಂದಿನ ಕಾಲದಲ್ಲಿ ಮಕ್ಕಳ ದೇಹಕ್ಕೆ ಕೊಂಚ ಪ್ಯೂರ್ ತೆಂಗಿನ ಎಣ್ಣೆ ಅಥವಾ ಪ್ಯೂರ್ ತುಪ್ಪದಿಂದ ಮಸಾಜ್ ಮಾಡಿ, ತಿಳಿ ಬಿಸಿಲಿಗೆ ಆಡಲು ಬಿಡುತ್ತಿದ್ದರು. ಇಂದಿನ ಕಾಲದಲ್ಲೂ ಎಷ್ಟೋ ಗ್ರಾಮೀಣ ಭಾಗಗಳಲ್ಲಿ ಹೀಗೆ ಮಾಡಲಾಗುತ್ತದೆ. ಆದರೆ ಸಿಟಿಯಲ್ಲಿರುವವರಿಗೆ ಇದಕ್ಕೆಲ್ಲ ಸಮಯವಿರುವುದಿಲ್ಲ. ದುಡಿಯಲು ಹೋಗುವುದು ಅನಿವಾರ್ಯವಾಗಿರುತ್ತದೆ. ಆದರೆ ಒಮ್ಮೆ ಮಹಿಳೆ ಗರ್ಭಿಣಿಯಾದಳು ಅಂತಾದಾಗ, ನಿಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಆಕೆಯ ಆರೈಕೆ ಮಾಡುವುದು ಮುಖ್ಯವಾಗಿದೆ.
ಏಕೆಂದರೆ ನೀವು ಇಂದಿನ ಕಾಲದಲ್ಲೂ ಆರೋಗ್ಯಕರವಾದ, ಚೈತನ್ಯದಾಯಕವಾದ, ಗಟ್ಟಿಮುಟ್ಟಾದ ಮಗುವನ್ನು ಹೆರುವುದು ನಿಮಗೆ ಚಾಲೆಂಜೇ ಸರಿ. ಇಂದಿನ ಕಾಲದ ಆಹಾರ ಪದ್ಧತಿ, ವಾತಾವರಣವೆಲ್ಲ ಕಲುಶಿತವಾಗಿರುವ ಕಾರಣ, ನೀವೂ ಕೂಡ ನಿಮ್ಮ ಕೈಲಾದಷ್ಟು ಮಗುವಿನ ಪಾಲನೆ ಪೋಷಣೆ ಮಾಡಲೇಬೇಕು.
Discussion about this post