Bengaluru News: ಬೆಂಗಳೂರಿನ ಶಾಂಗ್ರಿ ಲಾ ಹೋಟೇಲ್ನಲ್ಲಿ ವ್ಯಕ್ತಿಯ“ಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗೀತಾ ವಿಷ್ಣು ವಿರುದ್ಧ ಬೆಂಗಳೂರು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೀತಾ ವಿಷ್ಣು ತಿರುಪತಿ ತಿರುಮಲ ದೇವಸ್ಥಾನದ ಅಧ್ಯಕ್ಷ ಮತ್ತು ಮಾಜಿ ಸಂಸದ ಡಿ.ಕೆ.ಆದಿಕೇಶುವುಲು ನಾಯ್ಡು ಮೊಮ್ಮಗ. ಮೇ 19ರಂದು ಈ ಘಟನೆ ನಡೆದಿದ್ದು, ಉಮರ್ ನಗರ ನಿವಾಸಿ ಸಯ್ಯದ್ ಸಾದಿಕ್ ಹೆಚ್ ಎಂಬುವವರು, ಗೀತಾ ವಿಷ್ಣು ಶಾಂಗ್ರಿ ಲಾ ಹೋಟೇಲ್ನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಆರೋಪಿಸಲಾಗಿದೆ.
ಅಲ್ಲದೇ ಈ ಬಗ್ಗೆ ಸಾದಿಕ್ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವಲ್ಪ ಸಮಯದ ಬಳಿ ಗೀತಾ ವಿಷ್ಣು ಕೂಡ ಸಾಾದಿಕ್ ವಿರುದ್ಧ ಪ್ರತೀದೂರು ದಾಖಲಿಸಿದ್ದಾರೆ. ಗೀತಾ ವಿಷ್ಣು ಹೇಳುವಂತೆ, ಜಿಮ್ ಮುಗಿಸಿ, ಬಟ್ಟೆ ಬದಲಿಸುವಾಗ ಬೆವರು ಸಾದಿಕ್ ಮೈಗೆ ಸಿಡಿದಿದೆ. ಇದರಿಂದ ಕೋಪಗ“ಂಡಿದ್ದ ಸಾದಿಕ್, ಗೀತಾ ವಿಷ್ಣು ಕಣ್ಣಿಗೆ ಬಡಿದಿದ್ದಲ್ಲದೇ, ಮತ್ತೆ ಜಿಮ್ಗೆ ಬಂದ್ರೆ, ಪರಿಣಾಮ ಸರಿಯಾಗಿರಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಗೀತಾ ವಿಷ್ಣು ದೂರು ನೀಡಿದ್ದಾರೆ.
ಇಬ್ಬರ ದೂರನ್ನೂ ತೆಗೆದುಕ“ಂಡಿರುವ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಗೀತಾ ವಿಷ್ಣು ವಿವಾದಕ್ಕೆ ಸಿಲುಕಿರುವುದು ಇದೇ ಮ“ದಲೇನಲ್ಲ. 2017ರಲ್ಲಿ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ನಲ್ಲಿ ಅಪಘಾತ ಮಾಡಿದ್ದಾರೆಂದು ಗೀತಾ ವಿಷ್ಣು ವಿರುದ್ಧ ದೂರು ದಾಖಲಾಗಿತ್ತು. ಈ ಘ’’ನೆಯಲ್ಲಿ ಇಬ್ಬರು ಮಕ್ಕಳು ಸೇರಿ 6 ಜನ ಗಾಯಗ“ಂಡಿದ್ದರು.
ಬಳಿಕ ಆತ ಗಾಂಜಾ ಸೇವಿಸಿ ವಾಹನ ಚಲಾಯಿಸಿದ್ದನೆಂದು ಪೋಲೀಸರು ಹೇಳಿದ್ದರು. ಅಪಘಾತದ ನೆಪವಿರಿಸಿಕ“ಂಡು ಗೀತಾವಿಷ್ಣು ಮಲ್ಯ ಆಸ್ಪತ್ರೆ ಸೇರಿ, ಅಲ್ಲಿಂದಲೂ ಎಸ್ಕೇಪ್ ಆಗಿದ್ದ.
ಇನ್ನು 2022ರಲ್ಲಿ ಗೀತಾ ವಿಷ್ಣು ತಂದೆ, ಉದ್ಯಮಿ ಡಿ.ಕೆ.ಆದಿ ಶ್ರೀನಿವಾಸ್ ನಾಯ್ಜು ಅವರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ನಾಕ್ರೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು.
Discussion about this post