Spiritual: ನಿಮ್ಮ ರಾಶಿಯಲ್ಲಿ ಯಾವ ಗ್ರಹವಾದರೂ ಕೆಲ ದಿನ ಅಥವಾ ಕೆಲ ತಿಂಗಳು ಇದ್ದು, ಮುಂದೆ ಸಾಗುತ್ತದೆ. ಆದರೆ ಶನಿದೇವ ಮಾತ್ರ ಯಾವುದಾದರೂ ರಾಶಿಗೆ ಲಗ್ಗೆ ಇರಿಸಿದರೆ, 1ರಿಂದ 2 ವರ್ಷ ಅದೇ ರಾಶಿಯಲ್ಲಿರುತ್ತಾರೆ. ಹಾಗಾದ್ರೆ ಯಾಕೆ ಶನಿದೇವನ ಚಲನೆ ಅಷ್ಟು ನಿಧಾನ ಅಂತಾ ತಿಳಿಯೋಣ ಬನ್ನಿ..

ಶನಿದೇವನ ಚಲನೆ ನಿಧಾನವಾಗಲು ರಾವಣ ಕಾರಣನಂತೆ. ಪುರಾಣ ಕಥೆಗಳ ಪ್ರಕಾರ ರಾವಣ, ಶನಿದೇವನ ಕಾಲು ಮುರಿದಿದ್ದನಂತೆ. ರಾವಣನ ಪತ್ನಿ ಮಂಡೋದರಿ ಗರ್ಭಿಣಿಯಾಗಿದ್ದಾಗ, ರಾವಣನಿಗೆ ತನ್ನ ಮಗ ಅಜೇಯನಾಗಿರಬೇಕು ಎಂಬ ಆಸೆ ಇತ್ತಂತೆ. ಹಾಗಾಗಿ ರಾವಣ ಎಲ್ಲ ಗ್ರಹಗಳೂ ತನ್ನ ಮಗನ ಜಾತಕದಲ್ಲಿ ಶುಭಸ್ಥಾನದಲ್ಲೇ ಇರಬೇಕು ಎಂದು ಆಗ್ರಹಿಸಿದನಂತೆ.
ಆಗ ಎಲ್ಲ ಗ್ರಹಗಳು ಹೆದರಿ, ಶುಭ ಸ್ಥಾನಕ್ಕೆ ಬಂದು ನಿಂತವು. ಆದರೆ ಶನಿದೇವ ಮಾತ್ರ ತಾನು ಶುಭ ಸ್ಥಾನಕ್ಕೆ ಬರುವುದಿಲ್ಲ. ನಾನು ನಿಷ್ಠೆಯಿಂದ ಇರುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದನಂತೆ. ಹೀಗಾಗಿ ರಾವಣನ ಪುತ್ರ ಮೇಘರಾಜನ ಕುಂಡಲಿಯಲ್ಲಿ ಅಕಾಲಮೃತ್ಯು ಭಾಗ್ಯ ಬಂದಿತ್ತು.
ಇದರಿಂದ ಕುಪಿತನಾದ ರಾವಣ, ತನ್ನ ವಿದ್ಯಾಶಕ್ತಿಯನ್ನು ಉಪಯೋಗಿಸಿ, ಶನಿಗ್ರಹವನ್ನು ತನ್ನ ಅಧೀನಕ್ಕೆ ತೆಗೆದುಕ“ಂಡನಂತೆ. ಬಳಿಕ ಶನಿದೇವನ ಕಾಲ ಮೇಲೆ ಗಧಾ ಪ್ರಹಾರ ಮಾಡಿದನಂತೆ. ಹೀಗಾಗಿ ಶನಿದೇವ ನಿಧಾನವಾಗಿ ಚಲಿಸುತ್ತಾನೆ ಅಂತಾ ಹೇಳಲಾಗುತ್ತದೆ.

ಈಗ ಶಿವನ ಕಥೆಯ ಪ್ರಕಾರ ಶನಿ ಏಕೆ ನಿಧಾನವಾಗಿ ಚಲಿಸುತ್ತಾನೆ ಅಂತಾ ತಿಳಿಯೋಣ.
ಶಿವ ತನ್ನ ಪರಮಭಕ್ತ ದದೀಚಿ ಮುನಿಯ ಮನೆಯಲ್ಲಿ ಪುತ್ರನಾಗಿ ಜನ್ಮ ತಾಳಿದ್ದ. ಆಗ ಬ್ರಹ್ಮದೇವರು ಈತನ ಹೆಸರನ್ನು ಪಿಪಲ್ಲಾದ ಎಂದು ನಾಮಕರಣ ಮಾಡಿದರು. ಆದರೆ ಪಿಪ್ಪಲ್ಲಾದ ಜನ್ಮಿಸುವ ಮುನ್ನವೇ ದದೀಚಿ ದೇಹತ್ಯಾಗ ಮಾಡಿದ್ದರು.
ಬಳಿಕ ಪಿಪಲ್ಲಾದ ಯುವಾಾವಸ್ಥೆಗೆ ಬಂದ ಬಳಿಕ, ತನ್ನ ತಂದೆಯ ಸಾವಿಗೆ ಕಾರಣವೇನು ಎಂದು ದೇವತಗೆಳಲ್ಲಿ ಪ್ರಶ್ನಿಸಿದನಂತೆ. ಆಗ ದೇವತೆಗಳು ನಿಮ್ಮ ತಂದೆಯ ರಾಶಿಯಲ್ಲಿ ಶನಿದೇವನ ಚಲನೆ ಇತ್ತು. ಈ ವೇಳೆ ನಿಮ್ಮ ತಂದೆಯ ಮರಣವಾಯಿತು ಎಂದು ಹೇಳುತ್ತಾರೆ.
ಇದರಿಂದ ಕೋಪಗ“ಂಡ ಪಿಪಲ್ಲಾದ ತನ್ನ ಬ್ರಹ್ಮದಂಡದಿಂದ ಶನಿಯ ಕಾಲ ಮೇಲೆ ಪ್ರಹಾರ ಮಾಡಿದನು. ಹೀಗಾಗಿ ಶನಿದೇವನ ಚಲನೆ ನಿಧಾನವಾಯಿತೆಂದು ಹೇಳುತ್ತಾರೆ.























Discussion about this post