ಕೂದಲು ಉದುರುವ ಸಮಸ್ಯೆಗೆ ಈ ಮನೆಮದ್ದು ಅನುಸರಿಸಿ
ಇಂದಿನ ಕಾಲದಲ್ಲಿ ಯುವ ಪೀಳಿಗೆಗಿರುವ ಕಾಮನ್ ಸೌಂದರ್ಯ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವ ಸಮಸ್ಯೆ. ಬ್ಯೂಟಿ ಪಾರ್ಲರ್ಗೆ ಹೋದ್ರೂ, ವಿಧ ವಿಧದ ಶ್ಯಾಂಪೂ, ಎಣ್ಣೆ ಇತ್ಯಾದಿ ಬಳಕೆ ಮಾಡಿದ್ರೂ ಏನೂ ಪ್ರಯೋಜನವಾಗುತ್ತಿಲ್ಲ.
ಯಾಕೆ ಹೀಗೆ ಅಂತಾ ಕೇಳಿದ್ರೆ, ನಾವು ತಲೆಯ ಮೇಲೆ ಅಥವಾ ಕೂದಲಿಗೆ ಏನು ಬಳಕೆ ಮಾಡುತ್ತೇವೋ ಅದು ಸಮಸ್ಯೆಗೆ ಪರಿಹಾರವೇ ಅಲ್ಲ. ಬದಲಾಗಿ ನಾವೇನು ಸೇವನೆ ಮಾಡುತ್ತೇವೋ, ಅದೇ ನಮ್ಮ ಕೂದಲು ಉದುರುವಿಕೆಗೆ ಕಾರಣ.
ನಾವು ಆರೋಗ್ಯಕರವಾದ ಆಹಾರ ಸೇವನೆ ಮಾಡಿದ್ದಲ್ಲಿ, ನಮ್ಮ ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಹೆಚ್ಚು ಜಂಕ್ ಫುಡ್ ತಿಂದ್ರೆ, ಕರಿದ ಪದಾರ್ಥಗಳ ಸೇವನೆ ಮಾಡಿದ್ರೆ, ಹೆಚ್ಚು ನೀರು ಕುಡಿಯದಿದ್ದರೆ, ನಿಮ್ಮ ಕೂದಲಿನ ಆರೋಗ್ಯ ಹಾಳಾಗುತ್ತದೆ.

ಅಲ್ಲದೇ, ಪ್ರತಿದಿನ ಡ್ರೈಫ್ರೂಟ್ಸ್, ಮಜ್ಜಿಗೆ, ಕರ್ಡ್, ಹಾಲು, ಹೀಗೆ ಪ್ರೋಟೀನ್ ಭರಿತವಾದ ಆಹಾರ, ನೀರು, ಪಾನಕ, ಹಣ್ಣಿನ ರಸ, ನೆನೆಸಿದ ಕಾಳು ಇತ್ಯಾದಿ ಆರೋಗ್ಯಕರ ಆಹಾರಗಳ ಸೇವನೆ ಮಾಡಬೇಕು. ಹೆಚ್ಚು ನೀರು ಕುಡಿಯಬೇಕು.
ಕೂದಲನ್ನು ಹೆಚ್ಚು ಗಟ್ಟಿಯಾಗಿ ಕಟ್ಟಬಾರದು. ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಹೆಚ್ಚು ಶ್ಯಾಂಪೂ ಬಳಸದೇ ಹೇರ್ ವಾಶ್ ಮಾಡಬೇಕು. ಚೆನ್ನಾಗಿ ನಿದ್ದೆ ಮಾಡಬೇಕು. ದಿಂಬು, ಹಾಸಿಗೆ ಕ್ಲೀನ್ ಆಗಿರಬೇಕು. ಅಗತ್ಯಕ್ಕಿಂತ ಹೆಚ್ಚು ಯಾವುದೇ ವಿಷಯದ ಬಗ್ಗೆ ಟೆನ್ಶನ್ ತೆಗೆದುಕ“ಳ್ಳಬಾರದು. ಇದೆಲ್ಲವೂ ನಿಮ್ಮ ಕೂದಲಿನ ಆರೋಗ್ಯವನ್ನು ಅವಲಂಬಿಸಿರುತ್ತದೆ.
ಪ್ರತಿದಿನ ಉತ್ತಮ ಆಹಾರ ಸೇವನೆ, ನಿದ್ರೆಯ ಜತೆಗೆ ಸೂರ್ಯನ ತಿಳಿ ಬಿಸಿಲಿಗೆ ನಿಂತು ವಿಟಾಮಿನ್ ಡಿ ಪಡೆಯಿರಿ. ಸೀಡ್ಸ್, ಡ್ರೈ ಫ್ರೂಟ್ಸ್, ಸ“ಪ್ಪು, ಇತ್ಯಾದಿ ನಿಮ್ಮ ಊಟದಲ್ಲಿ ಅಳವಡಿಸಿಕ“ಳ್ಳಿ. ನಿಮಗಾಗಿ ಸಮಯ ಮಾಡಿ, ಯೋಗಾ, ವ್ಯಾಯಾಮ ಮಾಡಿ. ಇವೆಲ್ಲವೂ ನಿಮ್ಮ ಕೂದಲಿನ ಸೌಂದರ್ಯವನ್ನು ವೃದ್ಧಿಸುತ್ತದೆ.
=ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ದೇಹ ಚೈತನ್ಯಭರಿತವಾಗಿ, ಶಕ್ತಿಯುತವಾಗಿರಲು ಇದನ್ನು ಅನುಸರಿಸಿ
ನಾವು ಪ್ರತಿದಿನ ಬೆಳಿಗ್ಗೆ ಎದ್ದಾಗ ನಮ್ಮ ದೇಹ ಚೈತನ್ಯಭರಿತವಾಗಿರಬೇಕು. ಆಗ ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ನೀವು ಮಲಗೆದ್ದ ಬಳಿಕವೂ ನಿಮಗೆ ಸುಸ್ತಾಗುತ್ತಿದೆ. ದೇಹದಲ್ಲಿ ಶಕ್ತಿ ಇಲ್ಲ ಎಂದೆನ್ನಿಸಿದರೆ, ನಮ್ಮ ಆರೋಗ್ಯ ಉತ್ತಮವಾಗಿಲ್ಲ ಎಂದರ್ಥ. ಆದರೆ ನಾವು ಬೆಳಿಗ್ಗೆ ಎದ್ದ ತಕ್ಷಣ 5 ನಿಯಮಗಳನ್ನು ಪಾಲಿಸಿದರೆ, ನಮ್ಮ ಆರೋಗ್ಯದಲ್ಲಿ ಅಭಿವೃದ್ಧಿ ಕಾಣಬಹುದು.
1. ಬೆಳಿಗ್ಗೆ ಎದ್ದ ತಕ್ಷಣ, 1 ನಿಮಿಷ ಸುಮ್ಮನೆ ಕುಳಿತುಕ`ಳ್ಳಿ. ಹಾಗೆ ಕುಳಿತಾಗ, ನಿಮ್ಮ ಜೀವನದಲ್ಲಿ ನೀವು ಏನನ್ನು ಸಾಧಿಸಬೇಕು ಅಂತಿದ್ದೀರಿ ಅದರ ಬಗ್ಗೆ ಯೋಚಿಸಿ. ಬಳಿಕ ಆ ಕೆಲಸಕ್ಕೆ ಹೇಗೆ ತಯಾರಾಗಬೇಕು. ನಾನು ಇಂದೇನೇನು ಕೆಲಸ ಮಾಡಬೇಕು ಎಂದು ಮನಸ್ಸಿನಲ್ಲೇ ಯೋಜನೆ ರೂಪಿಸಿ. ಏಕೆಂದರೆ ನೀವು ಏನು ಅಂದುಕ“ಳ್ಳುತ್ತೀರೋ, ಅದೇ ಆಗುತ್ತೀರಿ. ಹಾಗಾಗಿ ಉದಾಸೀನ ಮಾಡದೇ, ನಿಮ್ಮ ಗುರಿ ತಲುಪಲು ಬೇಕಾಗುವುದನ್ನು ಯೋಚಿಸಿ.
2. ಬೆಳಿಗ್ಗೆ ಎದ್ದ ತಕ್ಷಣ, ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಬೇಕು. ನೆನೆ ಹಾಕಿದ ಚೀಯಾ ಸೀಡ್ಸ್ ಸೇವನೆ ಅತೀ ಉತ್ತಮ. ಆದರೆ ನಿಮಗೆ ಲೋ ಬಿಪಿ ಇದ್ದರೆ ನೀವು ಚೀಯಾ ಸೀಡ್ಸ್ ಸೇವಿಸುವಂತಿಲ್ಲ.

3. ಅನಲೋಮ ವಿಲೋಮ ಮಾಡಬೇಕು. ಬೆಳಿಗ್ಗೆ ಎದ್ದು ನಾವು ಧ್ಯಾನ ಮಾಡಬೇಕು. ಪ್ರಾಣಾಯಾಮ ಮಾಡಬೇಕು. ಯೋಗ ಮಾಡಬೇಕು., ಇದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುವುದಲ್ಲದೇ, ಮನಸ್ಸು ಕೂಡ ಶಾಂತವಾಗಿರುತ್ತದೆ.
4. ಸೂರ್ಯನ ತಿಳಿಬಿಸಿಲಿಗೆ ನಿಂತು ವಿಟಾಮಿನ್ ಡಿ ಪಡೆಯಿರಿ. ಇದರಿಂದ ನಿಮ್ಮ ಶರೀರದಲ್ಲಿ ಶಕ್ತಿ ಬರುವುದಲ್ಲದೇ, ನಿಮ್ಮ ತ್ವಚೆ ಕೂಡ ಉತ್ತಮವಾಗಿರುತ್ತದೆ.
5. ಬೆಳಿಗ್ಗೆ ಬೇಗ ಸ್ನಾನ ಮಾಡಿ, ತಿಂಡಿ ಮಾಡಿ. ಇದರಿಂದ ನಿಮ್ಮ ದಿನವೆಲ್ಲ ಫ್ರೆಶ್ ಆಗಿರುತ್ತದೆ. ಅದಕ್ಕೂ ಮುನ್ನ ಕಹಿ ಕಶಾಯದ ಸೇವನೆ ಅಥವಾ ಆರೋಗ್ಯಕರ ಪೇಯದ ಸೇವನೆ ಮಾಡಿ.
ನೀವು ಇದೆಲ್ಲ ಮಾಡಲು ಬೆಳಿಗ್ಗೆ ಬೇಗ ಏಳಬೇಕಾಗುತ್ತದೆ. ಏಕೆಂದರೆ, ಈ ಕೆಲಸವೆಲ್ಲ ಮಾಡುವಾಗ ನಿಮ್ಮ ಮನಸ್ಸು ಶಾಂತವಾಗಿರಬೇಕು. ಗಡಿಬಿಡಿಯಲ್ಲಿ ಇದೆಲ್ಲ ಮಾಡಿದರೆ ಅದರಿಂದೇನೂ ಪ್ರಯೋಜನವಾಗುವುದಿಲ್ಲ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಅಂಜೂರ ಸೇವನೆ ಮಾಡಿದರೆ ಏನು ಉಪಯೋಗ..?
ಡ್ರೈಫ್ರೂಟ್ಸ್ಗಳಲ್ಲಿ ಉತ್ತಮ ಪೋಷಕಾಂಶಗಳಿರುತ್ತದೆ. ಅದನ್ನು ಸೇವಿಸಿದ್ರೆ, ನಮ್ಮ ಆರೋಗ್ಯವೂ ಚೆನ್ನಾಗಿರತ್ತೆ ಅಂತಾ ನಮಗೆಲ್ಲ ತಿಳಿದಿದೆ. ಅದೇ ರೀತಿ, ಈ ಡ್ರೈಫ್ರೂಟ್ಸ್ನಲ್ಲಿ 1 ಆದ ಅಂಜೂರದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.
ಅಂಜೂರವನ್ನು ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುನ್ನ ತಿನ್ನಬೇಕು. ಪ್ರತಿದಿನ 1 ಅಂಜೂರ ತಿಂದರೂ ಸಾಕು. ಇದರಿಂದ ಮಲವಿಸರ್ಜನೆ, ಉದರ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಉದರ ಸಮಸ್ಯೆ ಸರಿಯಾದರೆ, ಜೀರ್ಣಶಕ್ತಿ ಚೆನ್ನಾಗಿರುತ್ತದೆ. ಜೀರ್ಣಶಕ್ತಿ ಚೆನ್ನಾಗಿದ್ದರೆ, ನಮ್ಮ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.

ಅಲ್ಲದೇ ಅಂಜೂರದ ಸೇವನೆಯಿಂದ ನಮ್ಮ ಮೂಳೆ ಗಟ್ಟಿಯಾಗಿರುತ್ತದೆ. ಏಕೆಂದರೆ, ಇದರಲ್ಲಿ ಭರಪೂರ ಕ್ಯಾಲ್ಶಿಯಂ ಇದ್ದು, ಇದು ನಮ್ಮ ಮೂಳೆ ಬಲವಾಗಿಡಲು ಸಹಕಾರಿಯಾಗಿದೆ.
ಇನ್ನು ಪ್ರತಿದಿನ ನೆನೆಸಿದ ಅಂಜೂರ ತಿನ್ನುವುದರಿಂದ ನಮ್ಮ ಕೂದಲ ಆರೋಗ್ಯವೂ ಚೆನ್ನಾಗಿರುತ್ತದೆ. ಆರೋಗ್ಯಕರವಾಗಿ ಕೂದಲು ಬೆಳೆಯುತ್ತದೆ. ಕೂದಲ ಬುಡ ಬಲವಾಗಿ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಇನ್ನು ಬಿಪಿ ಸಮಸ್ಯೆ, ಹೃದಯದ ಸಮಸ್ಯೆ ಇದ್ದವರು ಪ್ರತಿದಿನ ಅಂಜೂರ ಸೇವಿಸಿದರೆ, ಬಿಪಿ ಕಂಟ್ರೋಲಿನಲ್ಲಿರುತ್ತದೆ. ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ.























Discussion about this post