ಚಿಕ್ಕಮಗಳೂರು: ನಗರಸಭೆ ಚುನಾವಣೆಯಲ್ಲಿ ಶಾಸಕ ಸಿ.ಟಿ.ರವಿ ಅವರಿಗೆ ಮತದಾರರು ಈ ಬಾರಿ ತಕ್ಕಪಾಠ ಕಲಿಸಲಿದ್ದಾರೆಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿ, ನಾಲ್ಕು ಬಾರಿ ಶಾಸಕರಾಗಿರುವ ಸಿ.ಟಿ.ರವಿ, ಚಿಕ್ಕಮಗಳೂರು ನಗರವನ್ನು ಸುಂದರನಗರವನ್ನಾಗಿ ಮಾಡಬಹುದಿತ್ತು. ಸಚಿವರೂ ಆಗಿದ್ದ ಅವರು ಯಾವುದೇ ಹೊಸ ಯೋಜನೆಗಳನ್ನು ನಗರಕ್ಕೆ ತಂದಿಲ್ಲವೆಂದು ಆರೋಪಿಸಿದರು.
ನಗರದಲ್ಲಿ ಮೂಲಸೌಕರ್ಯವಿಲ್ಲ, ರಸ್ತೆ, ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ.ನಗರಸಭೆಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸರ್ಕಾರದ ಆಡಳಿತ ವೈಫಲ್ಯ, ಬೆಲೆಏರಿಕೆ ಬಿಸಿ ಜನರಿಗೆ ತಟ್ಟಿದ್ದು, ಈ ಬಾರಿ ನಗರಸಭೆ ಚುನಾವಣೆಯಲ್ಲಿ ನಗರದ ಜನತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲಿದ್ದಾರೆಂಬ ವಿಶ್ವಾಸ ಇದೆ ಎಂದು ಹೇಳಿದರು.
ಬಿಜೆಪಿ ಎಂದರೆ ಬೆಂಕಿಹೆಚ್ಚುವ ಜನರ ಪಾರ್ಟಿ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಶಾಸಕರು ಸೇರಿದಂತೆ ೪೩ ಜನರ ಮೇಲಿದ್ದ ಕ್ರಿಮಿನಲ್ ಕೇಸ್ಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಹಿಂಪಡೆದುಕೊಂಡರು. ಅದರಲ್ಲಿ ಈ ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರ ಕೇಸು ಒಂದಾಗಿದೆ.ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೪೪,೨೨೫ ಮತಗಳು ಬಂದಿದ್ದು, ಶೇ. ೪೮ ರಷ್ಟು ಮತಗಳು ಬಿದ್ದಿವೆ. ಬಿಜೆಪಿಗೆ ೩೭೨೮೮ ಮತಗಳು ಅಂದರೆ ಶೇ.೪೧ ರಷ್ಟು ಮತಗಳಾಗಿವೆ. ಜಾತ್ಯತೀತ ಜನತಾದಳಕ್ಕೆ ಶೇ.೧೧ ರಷ್ಟು ಅಂದರೆ ೧೦,೨೪೯ ಮತಗಳು ಬಿದ್ದಿವೆ.ಉತ್ತರಕರ್ನಾಟಕದ ಬೆಳಗಾವಿ,ವಿಜಾಪುರ, ಬೀದರ್,ರಾಯಚೂರು ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಹಳೆಮೈಸೂರಿನಲ್ಲಿ ದಳದಹಿಡಿತವಿದ್ದು, ಅಲ್ಲಿಯೂ ಪಕ್ಷ ಗೆಲುವುಸಾಧಿಸಿದೆ ಎಂದರು.
ಬಿಜೆಪಿ ಅಧಿಕಾರಕೇಂದ್ರೀಕರಣಕ್ಕೆ ಒತ್ತುನೀಡಿದ್ದು, ವಿಕೇಂದ್ರಿಕರಣಕ್ಕೆ ಒಲವು ತೋರುತ್ತಿಲ್ಲ ಹಾಗಾಗಿ ಕಳೆದ ೨ ವರ್ಷದಿಂದ ನಗರಸಭೆಗೆ ಚುನಾವಣೆ ನಡೆದಿಲ್ಲ,ಅಧಿಕಾರ ನನ್ನ ಸುಪರ್ದಿಯಲ್ಲೆ ಇರಬೇಕೆಂಬ ಆಸೆ ಶಾಸಕರದ್ದಾಗಿದೆ ಎಂದು ತಿಳಿಸಿದರು.
ಶಾಸಕ ಸಿ.ಟಿ.ರವಿ ವಿಕೃತ ಸ್ವಭಾವದ ಮನುಷ್ಯ, ಹುದ್ದೆಗೆ ಘನತೆ ತರುವ ಕೆಲಸ ಮಾಡಬೇಕು. ಬೇರೆಯವರ ಬಗ್ಗೆ ತುಚ್ಚವಾಗಿ ಮಾತನಾಡುತ್ತಾರೆ.ದೇವರು, ಧರ್ಮದ ಹೆಸರಿನಲ್ಲಿ ಜನರ ಮನಸ್ಸನ್ನು ಕೆರಳಿಸಿ,ನಿಂದನೆ ಮಾಡುವುದರಲ್ಲೆ ಕಾಲಕಳೆದಿದ್ದಾರೆ. ಅವರು ಪ್ರಯೋಗಿಸುವ ಭಾಷೆಯಿಂದ ಈ ಕ್ಷೇತ್ರದ ಜನರಿಗೆ ಅಗೌರವ ತರುತ್ತಿದ್ದಾರೆಂದರು.ಯಾವುದೇ ವ್ಯಕ್ತಿಯ ಮೇಲೆ ಮಾತನಾಡುವ ಮೊದಲು ನಾವು ಸಚ್ಚರಿತ್ರರಾಗಿರಬೇಕಾಗುತ್ತದೆ ಎಂದು ನುಡಿದರು.
ಶಾಸಕ ಸಿ.ಟಿ.ರವಿ, ಸಚಿವ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ಕಟೀಲ್ ಅವರುಗಳು ಆರ್ಎಸ್ಎಸ್ ನ ಮೌತ್ ಪೀಸ್ಗಳೆಂದು ಟೀಕಿಸಿದ ಅವರು, ಧರ್ಮಗಳ ನಡುವೆ ಕಂದಕ ನಿರ್ಮಿಸುವುದು ಒಳ್ಳೆಯ ಬೆಳವಣಿಗೆಯಲ್ಲ.
ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾಪ್ರಧಾನಕಾರ್ಯದರ್ಶಿ ಶಿವಾನಂದಸ್ವಾಮಿ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ, ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಇದ್ದರು.
A lesson for MLA C.T. Ravi this time
Discussion about this post