ಚಿಕ್ಕಮಗಳೂರು: ನಗರಸಭೆ ಚುನಾವಣೆಗೆ ಘೋಷಣೆಯಾಗಿದ್ದು ಆಮ್ಆದ್ಮಿ ಪಕ್ಷದಿಂದ ಎಲ್ಲ 35 ವಾರ್ಡ್ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ.ಸುಂದರಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೩೦ ತಿಂಗಳಿಂದ ಚುನಾವಣೆ ನಡೆಸದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಎಸಗಿದ್ದರು. ಇದೀಗ ಚುನಾವಣೆ ಘೋಷಣೆ ಆಗಿದ್ದು ಆಮ್ಆದ್ಮಿಯಿಂದ ನಗರಸಭೆಯ ಎಲ್ಲ ೩೫ ವಾರ್ಡ್ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ.
ಪ್ರಾಮಾಣಿಕರು, ಗುಣವಂತರು ,ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರು ನಮ್ಮ ಪಕ್ಷದ ಮುಖಂಡರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಮ್ಮ ಪಕ್ಷದ ಅಭ್ಯರ್ಥಿ ಗಳು ಆಯ್ಕೆ ಆದಲ್ಲಿ ಡೆಲ್ಲಿ ಅಭಿವೃದ್ಧಿ ಮಾದರಿ ಅಳವಡಿಸುವ ಪ್ರಯತ್ನ ಮಾಡಲಾಗುವುದು. ಕಸದ ಕೊಂಪೆ ಆಗಿರುವ ಕೋಟೆ, ದಂಟರಮಕ್ಕಿ ಕೆರೆ ಅಭಿವೃದ್ಧಿಪಡಿಸಲಾಗುವುದು.ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು.ನಮ್ಮ ಪಕ್ಷದ ತತ್ವ ,ಸಿದ್ದಾಂತಗಳ್ನು ಒಪ್ಪುವ ಅಭ್ಯರ್ಥಿಗಳು ಕಣಕ್ಕಿಳಿಯಲು ಮುಂದೆ ಬರಬೇಕು ಎಂದರು.
ಕಾರ್ಯದರ್ಶಿ ಎಚ್.ಮೋಹನ್, ಯುವ ಘಟಕದ ಪವನ್,ರಂಗಪ್ಪ, ಅಂತೋಣಿ,ಫಿಲೋಮಿನಾ ಮತ್ತಿತರರಿದ್ದರು.
Candidates from Aam Admi Party to contest in all 35 wards
Discussion about this post