ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ಬಾರೀಯೂ ಚಿಕ್ಕಮಗಳೂರಿನ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ನಡೆಸುತ್ತಿರುವ ದತ್ತಮಾಲ ಅಭಿಯಾನ ಮತ್ತು ದತ್ತ ಜಯಂತಿಯ ಉತ್ಸವ ಚಿಕ್ಕಮಗಳೂರಿನಲ್ಲಿ ಪ್ರಾರಂಭವಾಗಿದ್ದು, ಇಂದು ನೂರಾರು ಮಹಿಳೆಯರಿಂದ ಅನಸೂಯ ಜಯಂತಿ ಮತ್ತು ಸಂಕೀರ್ತಾನ ಯಾತ್ರೆ ನಡೆಯಿತು.
ಪ್ರತಿ ವರ್ಷದಂತೆ ಈ ಬಾರೀಯೂ ಚಿಕ್ಕಮಗಳೂರಿನ ದತ್ತಾಪೀಠದಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದಾ ದತ್ತಮಾಲ ಅಭಿಯಾನ ಮತ್ತು ದತ್ತ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ನಡೆಯುತ್ತಿದೆ. ಇಂದು ಮೊದಲ ದಿನವಾಗಿದ್ದು, ನಗರದಲ್ಲಿ ಮಹಿಳೆಯರಿಂದ ಅನಸೂಯ ಜಂಯತಿ ಮತ್ತು ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ನಗರದ ಭೋಳು ರಾಮೇಶ್ವರ ದೇವಾಲಯದಿಂದಾ ಐಜಿ ರಸ್ತೆಯ ಮೂಲಕ ಸಾಗಿ ಸಂಕೀರ್ತನಾ ಯಾತ್ರೆಯನ್ನು ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಮುಕ್ತಯ ಮಾಡಿದರು. ಈ ಸಂಕೀರ್ತನಾ ಯಾತ್ರೆ ಮುಗಿದ ನಂತರ ಎಲ್ಲಾ ಮಹಿಳೆಯರು ವಾಹನದ ಮೂಲಕ ದತ್ತಾ ಫೀಠಕ್ಕೆ ತೆರಳಿದ್ದು, ಗುಹೆಯಲ್ಲಿರುವ ದತ್ತಾತ್ರೇಯನ ಪಾದುಕೆ ದರ್ಶನ ಪಡೆದು ನಂತರ ಅನಸೂಯ ಗದ್ದುಗೆಗೆ ಪೂಜೆಯನ್ನು ಸಲ್ಲಿಸಲಿದ್ದಾರೆ.
ದತ್ತ ಪೀಠಕ್ಕೆ ಮಹಿಳೆಯರು ತೆರಳಿ ಪಾದುಕೆ ದರ್ಶನವನ್ನು ಪಡೆದು ಗುಹೆಯಿಂದಾ ಹೊರ ಬಂದ ನಂತರ ಎಲ್ಲಾ ಮಹಿಳೆಯರು ಪಕ್ಕದಲ್ಲಿಯೇ ಜಿಲ್ಲಾಡಳಿತ ನಿರ್ಮಿಸಿರುವ ನೀಲಿ ಶೀಟಿನ ಮಂಟಪದಲ್ಲಿ ಆರ್ಚಕರ ನೇತೃತ್ವದಲ್ಲಿ ದುರ್ಗಾ ಹೋಮ ಮತ್ತ ಗಣಪತಿ ಹೋಮ ಮಾಡಿ ದೇವರಿಗೆ ಪೂಜೆಯನ್ನು ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮೂಲೆಯಿಂದಾ ನೂರಾರು ಮಹಿಳೆಯರು ಭಾಗವಹಿಸಿದ್ದು, ಜಿಲ್ಲಾಡಳಿತ ನೀಡುವ ಪ್ರಸಾಧವನ್ನು ಎಲ್ಲಾ ಮಹಿಳೆಯರು ಸ್ವೀಕರಿಸಿ ತಮ್ಮ ತಮ್ಮ ಸ್ಥಳಗಳಿಗೆ ನಿರ್ಗಮಿಸಲಿದ್ದಾರೆ.
ಈ ಕಾರ್ಯ ಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಸ್ತೆ ಯುದ್ದಕ್ಕೂ ದತ್ತ ಭಜನೆ ಮಾಡಿದ್ದು ವಿಶೇಷವಾಗಿತ್ತು.ಒಟ್ಟಾರೆಯಾಗಿ, ಇಂದು ನಗರದಲ್ಲಿ ನಡೆದ ಅನಸೂಯ ಜಯಂತಿ ಮತ್ತು ಸಂಕೀರ್ತನಾ ಯಾತ್ರೆಯಲ್ಲಿ ಐದು ನೂರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದು, ಎಲ್ಲರೂ ದತ್ತ ಪೀಠಕ್ಕೆ ತೆರಳಿದರು. ನಗರದಲ್ಲಿ ಹಾಗೂ ದತ್ತ ಪೀಠದಲ್ಲಿ ಯಾವುದೇ ರೀತಿಯಾ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಪೋಲಿಸ್ ಬಿಗಿ ಕಟ್ಟೇಚ್ಚರವನ್ನು ವಹಿಸಲಾಗಿದೆ.
Anasuya Jayanti
Discussion about this post