ಚಿಕ್ಕಮಗಳೂರು: ದೇಶದಲ್ಲಿ ಬಿಜೆಪಿ ಜನಪ್ರಿಯತೆ ಅಂತ್ಯ ಆರಂಭಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಸೈದ್ಧಾಂತಿಕ ರಾಜಕೀಯ ಧೃವೀಕರಣಗೊಳ್ಳಲಿದೆ ಎಂಬ ಕಾಂಗ್ರೆಸ್ ವಕ್ತಾರರ ಹೇಳಿಕೆ ಹಾಸ್ಯಾಸ್ಪದ ಎಂದು ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್ ಟೀಕಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಹೆಚ್ಚು ಸಂಸದರನ್ನು ಹೊಂದುವ ಪಕ್ಷವಾಗಲಿದೆ. ಕಾಂಗ್ರೆಸ್ ಈಗಾಗಲೇ ಒಂದೊಂದು ರಾಜ್ಯದಲ್ಲಿ ಅವರ ಪಕ್ಷದ ಅಧಿಕಾರ ಕಳೆದುಕೊಂಡು ಬರುತ್ತಾ ಇದ್ದರೂ ಮುಂದಿನ ಚುನಾವಣೆಯಲ್ಲಿ ರಾಜಕೀಯ ಧೃವೀಕರಣವಾಗುತ್ತಿದೆ ಎಂದು ಹೇಳುತ್ತಿರುವುದು ಹಗಲುಗನಸು ಕಾಣುವಂತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ವಕ್ತಾರ ಬಿ.ಎಲ್.ಶಂಕರ್ ಅವರು ಮೂರು ತಿಂಗಳಿಗೊಮ್ಮೆ ಬಂದು ಪತ್ರಿಕಾಗೋಷ್ಠಿ ನಡೆಸಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆಯೇ ಹೊರತು ಬೇರೆ ಏನು ಕೆಲಸ ಮಾಡುತ್ತಿಲ್ಲ. ಕೃಷಿ ಮಸೂದೆ ಯಾವುದೇ ಚರ್ಚೆ ಇಲ್ಲದೇ ಧ್ವನಿ ಮೂಲಕ ಬಹುಮತ ಇದೆ ಎಂದು ಅಂಗೀಕರಿಸಿದ್ದಾರೆ ಎಂದು ಹೇಳುತ್ತಿರುವ ಅವರು ತಾವು ವಿಧಾನ ಪರಿಷತ್ತಿನ ಸಭಾಪತಿಗಳಾಗಿದ್ದಾಗ ಕಾಂಗ್ರೆಸ್ ಪಕ್ಷದ ಮಸೂದೆಗಳನ್ನು ತಾವು ಯಾವ ರೀತಿ ಮಂಡಿಸಿದ್ದೀರ ಎಂಬುದನ್ನು ಹಿಂದಿನ ವೀಡಿಯೋ ಚಿತ್ರೀಕರಣವನ್ನು ಒಮ್ಮೆ ನೀವು ನೋಡಿದರೇ ಉತ್ತಮ ಎಂದು ತಿರುಗೇಟು ನೀಡಿದರು.
ತಾವು ಮಸೂದೆಗಳನ್ನು ಯಾವುದೇ ಚರ್ಚೆ ನಡೆಸದೇ ಅಂಗೀಕರಿಸಿರುವುದು ಜಗಜ್ಜಾಹೀರಾತಾಗಿದೆ. ತಮ್ಮ ಲೋಕಸಭಾ ಸದಸ್ಯರು ಯಾವುದೇ ಚರ್ಚೆಗೆ ಭಾಗವಹಿಸದೇ ಸಭೆಯಿಂದ ಹೊರನಡೆದು ಪ್ರತಿಭಟಿಸಿರುವುದು ಸಾರ್ವಜನಿಕರಿಗೆ ತಿಳಿದ ವಿಷಯ. ಜಿಲ್ಲಾ ವಿಧಾನ ಪರಿಷತ್ ಚುನಾವಣೆ ಹೆಚ್ಚು ಸ್ಥಾನ ನಮ್ಮದೇ ಇದೇ ಎಂದು ಹೇಳುತ್ತಿರುವ ಇವರು ಹಿಂದಿನ ಚುನಾವಣೆಯಲ್ಲಿ ನಿಮ್ಮದೇ ಹೆಚ್ಚು ಸ್ಥಾನವಿದ್ದರೂ ಸಹ ಸೋತಿದ್ದೇಕೆ?? ತಮ್ಮ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದಾಗ ೩ನೇ ಸ್ಥಾನಕ್ಕೆ ಹೋಗಿದ್ದೇಕೆ ಎಂದು ಟೀಕಿಸಿದ್ದಾರೆ.
BJP spokesperson Varasiddhi Venugopal
Discussion about this post