ಚಿಕ್ಕಮಗಳೂರು: ಡಿಸೆಂಬರ್ 27ಕ್ಕೆ ನಗರಸಭೆ ಚುನಾವಣೆ ನಿಗಧಿಯಾಗಿದ್ದು ಈ ಹಿನ್ನಲೆ ಎಲ್ಲಾ ಪಕ್ಷಗಳ ಮುಖಂಡರು, ಬೆಂಬಲಿಗರ ಜತೆಗೂಡಿ ಅಭ್ಯರ್ಥಿಗಳ ಪರವಾಗಿ ಮನೆ ಮನೆ ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ನಗರದ ಕಲ್ಲುದೊಡ್ಡಿಯಲ್ಲಿ ವಾರ್ಡ್ನಂಬರ್ ೧೭ ಬಿಜೆಪಿ ಅಭ್ಯರ್ಥಿ ಜಿ. ಸಗಾಯದಾಸ್ ಮತ್ತು ೧೮ ನೇ ವಾರ್ಡ್ ಅಭ್ಯರ್ಥಿ ಮಣಿಕಂಠ ಪರವಾಗಿ ಶಾಸಕ ಸಿ.ಟಿ. ರವಿ ಪ್ರಚಾರದ ನಡೆಸಿ ಮತದಾರರನ್ನು ಓಲೈಸುವ ಕಾರ್ಯ ಮಾಡಿದರು.
ಈ ವೇಳೆ ಮಾತನಾಡಿದ ಅವರು ನಗರಸಭೆ ಚುನಾವಣೆ ಅಭಿವೃದ್ಧಿ ಪರ ಮತ್ತು ವಿರೋಧಿಗಳ ನಡುವಿನ ಚುನಾವಣೆಯಾಗಿದೆ. ಬಿಜೆಪಿ ಚಿಕ್ಕಮಗಳೂರು ನಗರದ ಅಭಿವೃದ್ಧಿಗೆ ಕಂಕಣ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ. ನಗರದಲ್ಲಿ ಅಮೃತ್ ಯೋಜನೆ ಮೂಲಕ ಮನೆ ಮನೆಗೆ ಕುಡಿಯುವ ನೀರು, ಜತೆಗೆ ಒಳಚರಂಡಿ ವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಮೆಡಿಕಲ್ ಕಾಲೇಜು, ಒಳಾಂಗಣ ಕ್ರೀಡಾಂಗಣ, ತೆರೆದ ಜಿಮ್ ಸೌಲಭ್ಯ ಸೇರಿದಂತೆ ನಗರದ ನಾಗರೀಕರಿಗೆ ಹಲವು ಸಮಾಜಮುಖಿ ಸೇವೆಗಳನ್ನು ನೀಡುವ ಮೂಲಕ ಶ್ರಮಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ನಗರದ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಮೂಲಕ ಕಡೆಗಣಿಸಿದೆ, ಅವರ ಅವಧಿಯಲ್ಲಿ ನಗರಕ್ಕೆ ಯಾವುದೇ ವಿಶೇಷ ಅನುದಾನ ಬಿಡುಗಡೆಗೊಳಿಸಿಲ್ಲ. ಜಾತಿ ರಾಜಕಾರಣದ ಮೂಲಕ ಕಾಂಗ್ರೆಸ್ ಮತ ಪಡೆಯಲು ಯತ್ನಿಸುತ್ತಿದೆ ನಗರದ ಜನತೆಯ ಮತ ಕೇಳಲು ಯಾವುದೇ ನೈತಿಕತೆ ಹೊಂದಿಲ್ಲ ಎಂದು ವಾಗ್ದಾಳಿ ಮಾಡಿದರು.
ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ೩೩ ಕಡೆಗಳಲ್ಲಿ ಸ್ಪರ್ಧೆ ನಡೆಸಿದೆ. ೨ ಕಡೆಗಳಲ್ಲಿ ಪಕ್ಷೇತರರಿಗೆ ಬೆಂಬಲಿಸಿದೆ. ಎಲ್ಲಾ ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾರ್ಡ್ನಂ ೧೮ ರ ಸ್ಪರ್ಧಿ ಮಣಿಕಂಠ ಮಾತನಾಡಿ ನಗರಸಭೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡುವ ಸದಾಶಯ ಹೊಂದಿದ್ದು, ಆ ಹಿನ್ನಲೆ ಪಕ್ಷವು ನನ್ನ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದು ಮತದಾರರು
ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ನೀಡುವ ಮೂಲಕ ಗೆಲುವಿಗೆ ಸಹಕರಿಸುವಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಅನಿಲ್ಕುಮಾರ್, ಜಸಂತಾ, ಸೇರಿದಂತೆ ಇತರರು ಇದ್ದರು.
C.T. Ravi Campaign
Discussion about this post