ಚಿಕ್ಕಮಗಳೂರು: ಕ್ರಿಸ್ಮಸ್ ಸಂಭ್ರಮಾಚರಣೆ ಹಿನ್ನಲೆ ನಗರದ ಸಂತ ಜೋಸೆಫರ ಪ್ರಧಾನ ದೇವಾಲಯ ಹಲವು ಬಣ್ಣ ಬಣ್ಣದ ವಿದ್ಯುತ್ ಅಲಂಕಾರಗಳಿಂದ ಸಿಂಗಾರಗೊಂಡಿತ್ತು. ಚರ್ಚ್ ಆವರಣದಲ್ಲಿ ಕ್ರಿಸ್ತನ ಜೀವನಾಧಾರಿತ ಚರಿತ್ರ್ರೆಯನ್ನು ಬಿಂಬಿಸುವ ಗೋದಲಿ ನೋಡುಗರ ಕಣ್ಮನ ಸೆಳೆಯುವಂತಿದೆ. ಅಂದ ಹಾಗೇ ಡಿಸೆಂಬರ್ ೨೫ ಕ್ರಿಸ್ಮಸ್, ಕ್ರೈಸ್ತ ಬಾಂಧವರಿಗೆ ಅತ್ಯಂತ ಸಂಭ್ರಮದ ದಿನ. ಯಾವುದೇ ಜಾತಿ, ಧರ್ಮ, ಬೇಧದ ಅಂಗಿಲ್ಲದೇ ಎಲ್ಲರು ಒಂದಾಗಿ ಪರಸ್ಪರ ಶುಭಾಶಯ ಕೋರುವ ಮೂಲಕ ಅತ್ಯಂತ ವಿಶಿಷ್ಟವಾಗಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಇನ್ನು ಪ್ರತಿ ವರ್ಷದಂತೆ ನಗರದ ಸಂತ ಜೋಸೆಫರ ಪ್ರಧಾನ ದೇವಾಲಯ ಕ್ರಿಸ್ಮಸ್ ಹಬ್ಬದ ಹಿನ್ನಲೆ ವೈಭವಯುತವಾಗಿ ಅಲಂಕೃತಗೊಂಡಿತ್ತು. ಚರ್ಚಿನ ಬಿಷಪ್ ಟಿ. ಅಂಥೋನಿಸ್ವಾಮಿ ಮಾತನಾಡಿ ಕ್ರಿಸ್ತಜಯಂತಿ ಎಂದಾಕ್ಷಣ ಒಂದು ರೀತಿಯ ರೋಮಾಂಚನ ನಮ್ಮಲ್ಲಿ. ಕಾರಣ ಈ ಹಬ್ಬ ನಮಗೆ ಅತೀವ ಸಂತೋ? ಹಾಗೂ ಸಂಭ್ರಮವನ್ನು ಉಂಟುಮಾಡುತ್ತದೆ. ಈ ಕ್ರಿಸ್ಮಸ್ ಸಾರ್ವತ್ರಿಕ ರೂಪ ಪಡೆದುಕೊಂಡು ಯಾವುದೇ ಧರ್ಮ ಬೇಧವಿಲ್ಲದೆ ಆಚರಿಸುವಂಥ ಹಬ್ಬವಾಗಿದೆ.
ನಮ್ಮ ದೇವಾಲಯಕ್ಕೆ ಬಹಳ? ಮಂದಿ ಅನ್ಯ ಧರ್ಮೀಯರು ಭೇಟಿ ನೀಡುತ್ತಾರೆ. ಈ ವ? ಕ್ರಿಸ್ತ ಜಯಂತಿಯನ್ನು ಆತಂಕದಲ್ಲಿಯೇ ಆಚರಿಸಿದರೂ ಈ ಆಚರಣೆಗೊಂದು ಅರ್ಥವಿದೆ. ಮಂಕು ಕವಿದ ಮನಕೆ, ಬಸವಳಿದ ಬದುಕಿಗೆ ಹಾಗೂ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಮನೋಸ್ಥಿತಿಗೆ ಕ್ರಿಸ್ತಜಯಂತಿ ಭರವಸೆಯ ಬದುಕಿಗೊಂದು ಆಶಾಕಿರಣವಾಗಿದೆ.
ಭಗವಾನ್ ಕ್ರಿಸ್ತ ಕಾರ್ಗತ್ತಲಲ್ಲಿ ಜನಿಸಿ ಅನೇಕರ ಬಾಳಿಗೆ ಜಗಜ್ಯೋತಿಯಾಗಿ ಬೆಳಗಿದ. ಇಂದು ಅದೇ ಬೆಳಕು ನಮ್ಮ ಮಧ್ಯೆ ಬೆಳಗುತ್ತಿದೆ. ದೇವ ಕುಮಾರ ತಾನಾಗಿದ್ದರೂ ದೀನತೆಯ ಪ್ರತೀಕವಾಗಿ ಬಡತನವನ್ನು ಒಪ್ಪಿ ಬಡವರನ್ನು ಅಪ್ಪಿ ಪುಟ್ಟ ಗೋದಲಿಯಲ್ಲಿ ಜನಿಸಿದ ಕ್ರಿಸ್ತರು, ಸಮಾಜಕ್ಕೆ ಬೆಳಕನ್ನು ನೀಡಲು ತಾನೇ ಬೆಳಕಾಗಿ ಈ ಭುವಿಗೆ ಬಂದರು. ಈ ಪ್ರಕಾಶಮಾನ ಬೆಳಕಿಂದ ಕೊರೊನಾ ಸೋಂಕು ನಮ್ಮ ಮೈ-ಮನವನ್ನು ಆವರಿಸಿದೆ ಇರಲಿ ಎಂಬ ಪ್ರಾರ್ಥನೆಯೊಂದಿಗೆ ಈ ಹಬ್ಬವನ್ನು ನಾವು ಆಚರಿಸುತ್ತಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ವಿಕ್ಟರ್ ಸೆರಾವೋ ಮಾತನಾಡಿ ಕ್ರಿಸ್ಮಸ್ ದೇಶದ ಕ್ರೈಸ್ತ ಬಾಂಧವರಿಗೆ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಜಗದ ರಕ್ಷಕವಾಗಿ ಭಗವಾನ್ ಕ್ರಿಸ್ತ ಹುಟ್ಟಿದ ದಿನ ಇದಾಗಿದೆ. ಆ ಹಿನ್ನಲೆ ನಗರದ ಸಂತ ಜೋಸೆಫರ ಪ್ರಧಾನ ದೇವಾಲಯದಲ್ಲಿ ಸಮುದಾಯ ಎಲ್ಲಾ ಸಮಾನ ಮನಸ್ಕರು ಒಂದು ಗೂಡಿ ಯೇಸುಕ್ರಿಸ್ತರ ಹುಟ್ಟಿನ ಜೀವನಾಧರಿತ ಗೋದಲಿಯನ್ನು ರಚನೆ ಮಾಡಿ, ವಿದ್ಯುತ್ ಅಲಂಕಾರಗಳಿಂದ ಸಿಂಗರಿಸಲಾಗಿದೆ, ಇಂದು ರಾತ್ರಿ ೮ ರಿಂದಲೇ ಕಾರ್ಯಕ್ರಮಗಳು ಜರುಗಲಿದ್ದು ಎಲ್ಲರಿಗೂ ಯೇಸು ಒಳಿತು ಮಾಡಿ ನಮ್ಮೆಲ್ಲರನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿದರು.
Discussion about this post