ಚಿಕ್ಕಮಗಳೂರು: ವಿಧಾನ ಪರಿಷತ್ಚುನಾವಣೆಯಲ್ಲಿ ಚಿಕ್ಕಮಗಳೂರು ಕಸಬಾ ಹೋಬಳಿಯ ಮತಗಟ್ಟೆಯೊಂದರಲ್ಲಿ ಸದಸ್ಯರೊಬ್ಬರು ಮತ ಚಲಾಯಿಸಿದ ಅಧಿಕೃತ ಮತಪತ್ರವನ್ನುತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಬಹಿರಂಗಪಡಿಸಿರುವುದು ಕಾನೂನು ಉಲ್ಲಂಘನೆಯಾಗಿದ್ದು, ತನಿಖೆ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಮತ್ತುತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮಜರುಗಿಸಬೇಕೆಂದುಜಿಲ್ಲಾಕಾಂಗ್ರೆಸ್ ಒತ್ತಾಯಿಸಿದೆ.
ಜಿಲ್ಲಾಕಾಂಗ್ರೆಸ್ ವಕ್ತಾರ ಮತ್ತು ವಿಧಾನ ಪರಿಷತ್ಚುನಾವಣಾಕಾಂಗ್ರೆಸ್ಅಭ್ಯರ್ಥಿಏಜೆಂಟ್ ಹಿರೇಮಗಳೂರು ಪುಟ್ಟಸ್ವಾಮಿ ನೇತೃತ್ವದಲ್ಲಿ ಪಕ್ಷದ ಮುಖಂಡರುಜಿಲ್ಲಾಚುನಾವಣಾಧಿಕಾರಿಯಾಗಿರುವಜಿಲ್ಲಾಧಿಕಾರಿರಮೇಶ್ಅವರಿಗೆದೂರು ಸಲ್ಲಿಸಿ, ದಿನಾಂಕ:೧೦-೧೨-೨೦೨೧ ರಂದು ನಡೆದಚುನಾವಣೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಕಸಬಾ ಹೋಬಳಿಯ ಮತಗಟ್ಟೆಯೊಂದರಲ್ಲಿ ಸದಸ್ಯರೊಬ್ಬರುತಾನು ಮತ ಚಲಾಯಿಸಿದ ಮತ ಪತ್ರವನ್ನುತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಮೊಬೈನಲ್ಲೇ ಬಹಿರಂಗಪಡಿಸಿದ್ದಾರೆ.ಮತದಾನ ಮಾಡುವುದುಗೌಪ್ಯವಾಗಿದ್ದು, ಸದರಿ ಸದಸ್ಯರುತಮ್ಮ ಮೊಬೈಲ್ನಲ್ಲಿ ಬಹಿರಂಗಪಡಿಸಿ ಕಾನೂನು ಉಲ್ಲಂಘನೆಎಸಗಿರುತ್ತಾರೆಎಂದು ತಿಳಿಸಿದ್ದಾರೆ.
ಸಿಸಿ ಕ್ಯಾಮರ, ಭದ್ರತಾ ಸಿಬ್ಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಡುವೆಯೂ ಮೊಬೈಲ್ನಲ್ಲಿ ಸೆರೆ ಹಿಡಿದಿರುವುದು ಗಮನಿಸಿದಾಗ ಕಾನೂನು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿರುತ್ತದೆ. ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿರುತ್ತದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಸದಸ್ಯ ಮತ್ತುಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಜರುಗಿಸಬೇಕುಎಂದುಒತ್ತಾಯಿಸಿದ್ದಾರೆ.
ಜಿಲ್ಲಾಕಾಂಗ್ರೆಸ್ಕಾರ್ಮಿಕ ವಿಭಾಗಅಧ್ಯಕ್ಷ ವೇಣುಗೋಪಾಲರಾಜ್, ಕಾಂಗ್ರೆಸ್ ಮುಖಂಡರಾದ ಜಿ.ಎಚ್.ಸುರೇಶ್, ಕೆ.ಟಿ.ಪರಮೇಶ್, ಎಚ್.ಆರ್.ಚಂದನ್, ಕೆ.ವಿ.ಯತೀಶ್, ಜಿ.ಪಿ.ಉಮೇಶ್, ಸಿ.ಎ.ಹುಲಿಗೌಡ ಮತ್ತಿತರರುಇದ್ದರು.
Discussion about this post