ಚಿಕ್ಕಮಗಳೂರು: ೧೭ನೇ ವರ್ಷದ ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮ ಸೇನೆಯ ಮಾಲಾಧಾರಿಗಳು ನಗರದಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದರು.
ವಿಜಯಪುರ, ಬಸವನಹಳ್ಳಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮನೆ ಮನೆಗಳಿಗೆ ತೆರಳಿ ದತ್ತಾತ್ರೇಯ ಸ್ವಾಮಿಗೆ ಪ್ರಿಯವಾದ ಅಕ್ಕಿ, ಬೆಲ್ಲ, ತೆಂಗಿನಕಾಯಿ ಸಂಗ್ರಹಿಸಿದರು.
ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ ನವೆಂವರ್ ೧೪ ರಂದು ದತ್ತಾತ್ರೇಯ ಪೀಠದಲ್ಲಿ ಧಾರ್ಮಿಕ ಸಮಾರೋಪ ಸಮಾರಂಭ ಜತೆಗೆ ದತ್ತಪಾದುಕೆ ದರ್ಶನ ನಡೆಯಲಿದೆ. ಆ ನಿಟ್ಟಿನಲ್ಲಿ ದತ್ತಾತ್ರೇಯನಿಗೆ ಸಲ್ಲಿಕೆ ಮಾಡಲು ಶ್ರದ್ಧಾ ಭಕ್ತಿಯಿಂದ ಮನೆ ಮನೆಗೆ ತೆರಳಿ ಪಡಿ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನ.೧೪ ಭಾನುವಾರದ ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿದೆಡೆಯಿಂದ ಸಾಧು ಸಂತರು, ಮಠಾಧೀಶರುಗಳು, ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ದತ್ತಪೀಠ ಪ್ರಕರಣದ ವಕಾಲತ್ತು ವಹಿಸಿಕೊಂಡಿದ್ದ ಹೈಕೋರ್ಟ್ ನ್ಯಾಯಾಧೀಶ ಜಗದೀಶ ಬಾಳಿಗ ಅವರು ಆಗಮಿಸಲಿದ್ದು ದತ್ತಾತ್ರೇಯನ ದರ್ಶನ ಪಡೆಯಲಿದ್ದಾರೆ ಎಂದರು.
ದತ್ತಾಪೀಠಕ್ಕೆ ಸಂಬಧಿಸಿದಂತೆ ಬಸ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು ಅದಕ್ಕೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿದೆ ಜತೆಗೆ ಯಾವುದೇ ಸೂಕ್ತ ದಾಖಲೆಗಳಿಲ್ಲ ಅನಧೀಕೃತವಾಗಿ ಸಂಚರಿಸುತ್ತಿದ್ದ ೪೦ ಬಸ್ಗಳನ್ನು ವಶಪಡಿಸಿಕೊಂಡಿರುವುದು ಸ್ವಾಗತ ಎಂದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ಶೆಟ್ಟಿ, ಪುನೀತ್ ಸೇರಿದಂತೆ ಅನೇಕ ಮಾಲಾಧಾರಿಗಳು ಉಪಸ್ಥಿತರಿದ್ದರು.
Datamala Campaign: ಶ್ರೀರಾಮ ಸೇನೆಯ ೧೭ ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ
Discussion about this post