ಹೊಸದಿಲ್ಲಿ: ಬಿಜೆಪಿಯ ಉಪಚುನಾವಣೆ ಸೋಲು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ‘ಕೆಟ್ಟ ಪ್ರದರ್ಶನ’ದ ಸುಳಿವು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಗೆ ಕಾರಣವಾಯಿತು. ಕೃಷಿ ಕಾಯ್ದೆ ಹಿಂಪಡೆದ ಮಾತ್ರಕ್ಕೆ ರೈತರ ಅಪನಂಬಿಕೆ ಕಡಿಮೆಯಾಗದು. ಆಡಳಿತ ಪಕ್ಷಕ್ಕೆ “ಪರಿಣಾಮಗಳು” ಇರುತ್ತವೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ಇದನ್ನೂ ಓದಿ: ಭೂಮಿಯಿಂದಾಚೆ ಬುದ್ಧಿಜೀವಿಗಳಿವೆಯಾ ?
ರೈತರ ಬೇಡಿಕೆಯಂತೆ ಸರಕಾರವು ಕನಿಷ್ಟ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನುಬದ್ಧ ಖಾತರಿಯನ್ನು ಖಾತರಿಪಡಿಸುವುದು ಮಾತ್ರವಲ್ಲದೆ ಸಂಗ್ರಹಣೆ ನಡೆಯುವುದನ್ನು ಖಾತ್ರಿಪಡಿಸುವ ನಿಯಂತ್ರಣ ಅಥವಾ ಕಾನೂನನ್ನು ಒದಗಿಸಬೇಕು ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: Rain affects: ನಗರದಲ್ಲಿ ಭಾರೀ ಮಳೆ, ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪೈಲಟ್, ಸರಕಾರ ಈಗ ಏನೇ ಮಾಡಿದರೂ, ಕೃಷಿ ಕಾನೂನು ಆಂದೋಲನದಿಂದ ಬಳಲುತ್ತಿರುವ ರೈತರ ಮನಸ್ಸಿನಿಂದ ಅಪನಂಬಿಕೆ ಅಳಿಸಲು ‘ತುಂಬಾ ತಡವಾಗಿದೆ’ ಎಂದು ಹೇಳಿದರು.
ಇದನ್ನೂ ಓದಿ: 2019ರಲ್ಲಿ ಕಾಂಗ್ರೆಸ್ ಪಕ್ಷವೇ ಮುಕ್ತ ಕೃಷಿ ಮಾರುಕಟ್ಟೆಯ ಬಗ್ಗೆ ಪ್ರಸ್ತಾಪಿಸಿತ್ತು: ಸಿ ಟಿ ರವಿ
“ಭಾರತೀಯ ಇತಿಹಾಸದಲ್ಲಿ ಒಂದು ವರ್ಷದವರೆಗೆ ಕೃಷಿ ಸಮುದಾಯ ಇಂತಹ ಸುದೀರ್ಘ ಆಂದೋಲನವನ್ನು ನಡೆಸಿದ್ದನ್ನು ಯಾರು ನೋಡಿರಲಿಕ್ಕಿಲ್ಲ. ಈಗ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಂಡಿರುವ ಕೇಂದ್ರ ಸರಕಾರವು ರೈತರ ಜೀವನ ಮತ್ತು ಜೀವನೋಪಾಯವನ್ನು ವ್ಯರ್ಥ ಮಾಡುವ ಅಗತ್ಯ ಏನಿತ್ತು. ರೈತರನ್ನು ನಕ್ಸಲೀಯರು, ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು ಎಂದೂ ಕರೆಯಲಾಗುತ್ತಿತ್ತು ಹಾಗೂ ಕೆಲವು ಸಚಿವರ ಸಂಬಂಧಿಕರು ರೈತರ ಮೇಲೆ ವಾಹನ ಚಲಾಯಿಸಿ ಸಾಯಿಸಿದ್ದಾರೆ” ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.
Farmers distrust
Discussion about this post